<p>ವಿಧಾನಪರಿಷತ್ತಿನ ಏಳರಲ್ಲಿ ಐದು ಸ್ಥಾನ ಕಾಂಗ್ರೆಸ್ಸಿಗೆ</p>.<p>ಬೆಂಗಳೂರು, ಮೇ 12– ರಾಜ್ಯ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಏಳು ಮತದಾರ ಕ್ಷೇತ್ರಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನಗಳನ್ನು ಮತ್ತು ಸಂಸ್ಥಾ ಕಾಂಗ್ರೆಸ್ 2 ಸ್ಥಾನಗಳನ್ನು ಗಳಿಸಿವೆ.</p>.<p>ಬೆಂಗಳೂರು ಮತ್ತು ಧಾರವಾಡ ಜಿಲ್ಲೆಯ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷವು ಸಂಸ್ಥಾ ಕಾಂಗ್ರೆಸ್ನಿಂದ ಗಳಿಸಿಕೊಂಡಿದೆ. ಕೋಲಾರ, ಬೀದರ್ ಮತ್ತು ಚಿತ್ರದುರ್ಗದ ಸ್ಥಾನಗಳನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆ ಸ್ಥಾನಗಳನ್ನು ಸಂಸ್ಥಾ ಕಾಂಗ್ರೆಸ್ ಉಳಿಸಿಕೊಂಡಿದೆ.</p>.<p>ಕಾಂಗ್ರೆಸ್ ಅಭ್ಯರ್ಥಿಗಳಾದ ಜೆ. ಶ್ರೀನಿವಾಸ ರೆಡ್ಡಿ (ಬೆಂಗಳೂರು ಜಿಲ್ಲೆ), ಚನ್ನಯ್ಯ ಒಡೆಯರ್ (ಚಿತ್ರದುರ್ಗ ಜಿಲ್ಲೆ), ಪಾಲಾಕ್ಷಿ ಟಿ. ದೇಸಾಯಿ (ಧಾರವಾಡ ಜಿಲ್ಲೆ), <br>ಎನ್.ಎಂ. ಖೇಣಿ (ಬೀದರ್ ಜಿಲ್ಲೆ) ಮತ್ತು ಎಂ.ಸಿ. ಆಂಜನೇಯ ರೆಡ್ಡಿ (ಕೋಲಾರ ಜಿಲ್ಲೆ) ಆಯ್ಕೆಯಾಗಿದ್ದಾರೆ.</p>.<p>ಸಂಸ್ಥಾ ಕಾಂಗ್ರೆಸ್ನ ವಿ.ಎಂ. ಕಟ್ಟಿ (ಬೆಳಗಾವಿ ಜಿಲ್ಲೆ) ಮತ್ತು ಆರ್.ಎಸ್. ಭಾಗವತ್ (ಉತ್ತರಕನ್ನಡ ಜಿಲ್ಲೆ) ವಿಜಯಿಗಳಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಧಾನಪರಿಷತ್ತಿನ ಏಳರಲ್ಲಿ ಐದು ಸ್ಥಾನ ಕಾಂಗ್ರೆಸ್ಸಿಗೆ</p>.<p>ಬೆಂಗಳೂರು, ಮೇ 12– ರಾಜ್ಯ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಏಳು ಮತದಾರ ಕ್ಷೇತ್ರಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನಗಳನ್ನು ಮತ್ತು ಸಂಸ್ಥಾ ಕಾಂಗ್ರೆಸ್ 2 ಸ್ಥಾನಗಳನ್ನು ಗಳಿಸಿವೆ.</p>.<p>ಬೆಂಗಳೂರು ಮತ್ತು ಧಾರವಾಡ ಜಿಲ್ಲೆಯ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷವು ಸಂಸ್ಥಾ ಕಾಂಗ್ರೆಸ್ನಿಂದ ಗಳಿಸಿಕೊಂಡಿದೆ. ಕೋಲಾರ, ಬೀದರ್ ಮತ್ತು ಚಿತ್ರದುರ್ಗದ ಸ್ಥಾನಗಳನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆ ಸ್ಥಾನಗಳನ್ನು ಸಂಸ್ಥಾ ಕಾಂಗ್ರೆಸ್ ಉಳಿಸಿಕೊಂಡಿದೆ.</p>.<p>ಕಾಂಗ್ರೆಸ್ ಅಭ್ಯರ್ಥಿಗಳಾದ ಜೆ. ಶ್ರೀನಿವಾಸ ರೆಡ್ಡಿ (ಬೆಂಗಳೂರು ಜಿಲ್ಲೆ), ಚನ್ನಯ್ಯ ಒಡೆಯರ್ (ಚಿತ್ರದುರ್ಗ ಜಿಲ್ಲೆ), ಪಾಲಾಕ್ಷಿ ಟಿ. ದೇಸಾಯಿ (ಧಾರವಾಡ ಜಿಲ್ಲೆ), <br>ಎನ್.ಎಂ. ಖೇಣಿ (ಬೀದರ್ ಜಿಲ್ಲೆ) ಮತ್ತು ಎಂ.ಸಿ. ಆಂಜನೇಯ ರೆಡ್ಡಿ (ಕೋಲಾರ ಜಿಲ್ಲೆ) ಆಯ್ಕೆಯಾಗಿದ್ದಾರೆ.</p>.<p>ಸಂಸ್ಥಾ ಕಾಂಗ್ರೆಸ್ನ ವಿ.ಎಂ. ಕಟ್ಟಿ (ಬೆಳಗಾವಿ ಜಿಲ್ಲೆ) ಮತ್ತು ಆರ್.ಎಸ್. ಭಾಗವತ್ (ಉತ್ತರಕನ್ನಡ ಜಿಲ್ಲೆ) ವಿಜಯಿಗಳಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>