<p><strong>ಅಡ್ಡಿಯಾಗದ ಸ್ತ್ರೀತ್ವ</strong></p>.<p>ವಿಶ್ವ ರಾಷ್ಟ್ರಸಂಸ್ಥೆ, ಅ. 27– ‘ನನ್ನ ಸ್ತ್ರೀತ್ವ ಯಾವೊಂದು ಕೆಲಸ ಮಾಡಲೂ ಅಡ್ಡಿ ಬಂದಿಲ್ಲ ಅಥವಾ ಯಾವ ಕೆಲಸ ಮಾಡುವಂತೆಯೂ ಬಲಾತ್ಕರಿಸಿಲ್ಲ’ ಎಂದು ಭಾರತದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ನಿನ್ನೆ ಪ್ರಸಾರವಾದ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.</p>.<p>‘ಅಮೆರಿಕದಲ್ಲಿ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರು ಅಧಿಕಾರ ವಹಿಸಿಕೊಳ್ಳಲು ಇರುವ ತೊಂದರೆಯೆಂದರೆ, ಪುರುಷರು ಹಾಗೂ ಮಹಿಳೆಯರು ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಹೊಂದಿರುವುದು’ ಎಂದು ತಾವು ಭಾವಿಸುವುದಾಗಿ ಅವರು ತಿಳಿಸಿದ್ದಾರೆ.</p>.<p><strong>ಕಾವೇರಿ ಜಲ ವಿವಾದ ಮಾತುಕತೆ ವಿಫಲ</strong></p>.<p>ಮದ್ರಾಸ್, ಅ. 27– ಕಾವೇರಿ ನದಿ ನೀರಿನ ಹಂಚಿಕೆಯ ಬಗ್ಗೆ ಮೈಸೂರು, ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವೆ ಇಂದು ನಡೆದ ಮಾತುಕತೆಗಳು ವಿಫಲಗೊಂಡವು.</p>.<p>ತಮಿಳುನಾಡು, ಮೈಸೂರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇರಳದ ಲೋಕೋಪಯೋಗಿ ಸಚಿವರ ನಡುವೆ ನಡೆದ ಮಾತುಕತೆಯ ನಂತರ ಕೇರಳ ಸಚಿವ ಟಿ.ಕೆ.ದಿವಾಕರನ್ ಅವರು ‘ಒಪ್ಪಂದವಾಗಲಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಡ್ಡಿಯಾಗದ ಸ್ತ್ರೀತ್ವ</strong></p>.<p>ವಿಶ್ವ ರಾಷ್ಟ್ರಸಂಸ್ಥೆ, ಅ. 27– ‘ನನ್ನ ಸ್ತ್ರೀತ್ವ ಯಾವೊಂದು ಕೆಲಸ ಮಾಡಲೂ ಅಡ್ಡಿ ಬಂದಿಲ್ಲ ಅಥವಾ ಯಾವ ಕೆಲಸ ಮಾಡುವಂತೆಯೂ ಬಲಾತ್ಕರಿಸಿಲ್ಲ’ ಎಂದು ಭಾರತದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ನಿನ್ನೆ ಪ್ರಸಾರವಾದ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.</p>.<p>‘ಅಮೆರಿಕದಲ್ಲಿ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರು ಅಧಿಕಾರ ವಹಿಸಿಕೊಳ್ಳಲು ಇರುವ ತೊಂದರೆಯೆಂದರೆ, ಪುರುಷರು ಹಾಗೂ ಮಹಿಳೆಯರು ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಹೊಂದಿರುವುದು’ ಎಂದು ತಾವು ಭಾವಿಸುವುದಾಗಿ ಅವರು ತಿಳಿಸಿದ್ದಾರೆ.</p>.<p><strong>ಕಾವೇರಿ ಜಲ ವಿವಾದ ಮಾತುಕತೆ ವಿಫಲ</strong></p>.<p>ಮದ್ರಾಸ್, ಅ. 27– ಕಾವೇರಿ ನದಿ ನೀರಿನ ಹಂಚಿಕೆಯ ಬಗ್ಗೆ ಮೈಸೂರು, ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವೆ ಇಂದು ನಡೆದ ಮಾತುಕತೆಗಳು ವಿಫಲಗೊಂಡವು.</p>.<p>ತಮಿಳುನಾಡು, ಮೈಸೂರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇರಳದ ಲೋಕೋಪಯೋಗಿ ಸಚಿವರ ನಡುವೆ ನಡೆದ ಮಾತುಕತೆಯ ನಂತರ ಕೇರಳ ಸಚಿವ ಟಿ.ಕೆ.ದಿವಾಕರನ್ ಅವರು ‘ಒಪ್ಪಂದವಾಗಲಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>