ಮಹಾಜನ್ ವರದಿ ಜಾರಿಗೆ ತರುವ ವಿಧೇಯಕಕ್ಕೆ ಒತ್ತಾಯ ಬೆಂಗಳೂರು, ಡಿ 26:ಮಹಾಜನ್ ವರದಿಯ ಎಲ್ಲಾ ಶಿಫಾರಸುಗಳನ್ನು ಜಾರಿಗೆ ತರುವ ವಿಧೇಯಕವೊಂದನ್ನು ‘ಈಗಲಾದರೂ’ ಸಂಸತ್ತಿನ ಮುಂದೆ ಮಂಡಿಸಿ, ಮಂಜೂರು ಮಾಡಿಸಬೇಕು ಎಂದು ಮೈಸೂರು ವಿಧಾನಸಭೆಯು ಇಂದು ರಾತ್ರಿ ಕೇಂದ್ರವನ್ನು ಒತ್ತಾಯ ಮಾಡಿತು.
ಚಳವಳಿ ನಡೆಸುತ್ತಿರುವ ಜನರು ಪ್ರತ್ಯೇಕವಾಗಿ ಯುವಜನರು, ಚಳವಳಿಯ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಕರೆ ನೀಡಿರುವ ನಿರ್ಣಯವು, ಈ ಕ್ರಮಗಳು ಸೊತ್ತು ಮತ್ತು ಪ್ರಾಣಹಾನಿಗೆ ಮಾತ್ರ ಕಾರಣವಲ್ಲ. ನಾವು ಸಾಧಿಸಬೇಕೆಂದಿರುವ ಗುರಿಗೂ ಬಾಧಕ ಎಂದು ಹೇಳಿದೆ.