ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ 05-08-1971

Last Updated 4 ಆಗಸ್ಟ್ 2021, 15:24 IST
ಅಕ್ಷರ ಗಾತ್ರ

ಕಾವೇರಿ: ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ದಾವಾ

ನವದೆಹಲಿ, ಆ. 4– ಕಾವೇರಿ ನದಿ ನೀರು ಕುರಿತು ತಮಿಳುನಾಡು ಸರ್ಕಾರವು ಇಂದು ಸುಪ್ರೀಂ ಕೋರ್ಟಿನಲ್ಲಿ ಮೊಕದ್ದಮೆ ಹೂಡಿ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಒಂದು ‘ವಿವಾದ’ ಎದ್ದಿದೆಯೆಂದು ಘೋಷಿಸುವಂತೆ ಕೋರಿತು.

ವಿವಾದದ ವ್ಯಾಪ್ತಿಯಲ್ಲಿರುವ ನದಿ ಯೋಜನೆಗಳನ್ನು ಮೈಸೂರು ಸರ್ಕಾರ ಮುಂದುವರಿಸದಂತೆ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಹೊರಡಿಸಬೇಕೆಂದೂ ಅದು ಕೋರಿದೆ.

ಸಾಮಾಜಿಕ–ಆರ್ಥಿಕ ಪ್ರಗತಿಗೆ ಒಡ್ಡಿದ ಅಡ್ಡಿ ನಿವಾರಿಸುವುದೇ ಸಂವಿಧಾನ ಮಸೂದೆ ಉದ್ದೇಶ

ನವದೆಹಲಿ, ಆ. 4– ಗೋಲಕ್‌ನಾಥ್ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟು ನೀಡಿದ ತೀರ್ಪು ದೇಶದಲ್ಲಿನ ಸಾಮಾಜಿಕ–ಆರ್ಥಿಕ ಪ್ರಗತಿಗೆ ಭಾರಿ ಅಡಚಣೆಯುಂಟು ಮಾಡಿದೆ. ಕೇವಲ ಈ ಅಡಚಣೆಯನ್ನು ನಿವಾರಿಸುವುದೇ ಸಂವಿಧಾನದ (24ನೇ ತಿದ್ದುಪಡಿ) ಮಸೂದೆಯ ಉದ್ದೇಶ ಎಂದು ಕಾನೂನು ಸಚಿವ ಶ್ರೀ ಎಚ್‌.ಆರ್. ಗೋಖಲೆ ಅವರು ಇಂದು ಲೋಕಸಭೆಯಲ್ಲಿ ಹೇಳಿದರು.

ಈ ಮಸೂದೆಯ ಬಗ್ಗೆ ನಡೆದ ಚರ್ಚೆಗೆ ಉತ್ತರವೀಯುತ್ತಿದ್ದ ಗೋಖಲೆಯವರು, ‘ಭಾರತದ ಜನರು ತೀವ್ರ ಸಾಮಾಜಿಕ– ಆರ್ಥಿಕ ಬದಲಾವಣೆಗೆ ಒತ್ತಾಯ ಮಾಡುತ್ತಿ ದ್ದರು. ಈ ವಿಷಯದಲ್ಲಿ ಯಾವುದೇ ವಿಳಂಬ ವನ್ನೂ ಅವರು ಕ್ಷಮಿಸಲಾರರು’ ಎಂದು ನುಡಿದಾಗ ಸಭೆಯಲ್ಲಿ ಹರ್ಷೋದ್ಗಾರಗಳಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT