<p><strong>ಸರ್ಕಾರಿ ಸಾಲ ಪತ್ರಗಳಲ್ಲಿ</strong><br />ಬಂಡವಾಳ: ಸಾಮಾನ್ಯ ವಿಮಾ ಸಂಸ್ಥೆಗಳಿಗೆ ಕೇಂದ್ರದ ಸೂಚನೆ</p>.<p><strong>ನವದೆಹಲಿ, ಸೆ. 5– </strong>ಸರ್ಕಾರಿ ಸಾಲಪತ್ರ ಮುಂತಾದ ಅಂಗೀಕೃತ ವರ್ಗಗಳಲ್ಲಿ ಬಂಡವಾಳವನ್ನು ತೊಡಗಿಸಬೇಕು ಎಂದು ಸಾಮಾನ್ಯ ವಿಮಾ ಸಂಸ್ಥೆಗಳ ಬಂಡವಾಳ ಹೂಡಿಕೆ ಬಗ್ಗೆ ಸರ್ಕಾರ ರೂಪಿಸಿರುವ ನೀತಿ ನಿರ್ದೇಶನಗಳಲ್ಲಿ ಒತ್ತಿ ಹೇಳಲಾಗಿದೆ.</p>.<p>ಈ ನಿರ್ದೇಶನಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಸಾಮಾನ್ಯ ವಿಮಾ ಸಂಸ್ಥೆಗಳಲ್ಲಿ ಬಂಡವಾಳವಾಗಿ ತೊಡಗಿಸಬಲ್ಲ ಸಂಪನ್ಮೂಲಗಳು ಪ್ರತಿವರ್ಷ 15 ಕೋಟಿ ರೂ.ಗಳಷ್ಟು ಹೆಚ್ಚುವುದೆಂದು ಅಂದಾಜು ಮಾಡಲಾಗಿದೆ.</p>.<p><strong>ಭಾರತ– ರಷ್ಯಾ ಒಪ್ಪಂದ: ಕಟುಟೀಕೆ</strong></p>.<p><strong>ನವದೆಹಲಿ, ಸೆ. 5– </strong>ಸಂಸತ್ನ ವಿರೋಧ ಪಕ್ಷಗಳ ಸದಸ್ಯರು, ಇಂದು ಇಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿಯೊಂದರಲ್ಲಿ ಭಾರತ– ರಷ್ಯಾ ಮೈತ್ರಿ ಒಪ್ಪಂದವನ್ನು ಒಂದೇ ಸಮನೆ ತೀವ್ರ ವಾಗಿ ಟೀಕಿಸಿದರು.</p>.<p>ಸ್ವತಂತ್ರ ಪಕ್ಷದ ನಾಯಕರುಗಳಾದ ಶ್ರೀ ಮೀನುಮಸಾನಿ, ಶ್ರೀ ಪೀಲೂಮೋದಿ ಮತ್ತು ಜನಸಂಘದ ನಾಯಕ ಶ್ರೀ ಬಲರಾಜ ಮಧೋಕ್ ಅವರು ಮಾತನಾಡುತ್ತ, ‘ಈ ಒಪ್ಪಂದವು ರಾಷ್ಟ್ರವನ್ನು ಪ್ರತ್ಯೇಕಗೊಳಿಸಿ, ರಷ್ಯಾದ ಬಾಲುಬಡುಕ ರಾಷ್ಟ್ರವನ್ನಾಗಿ ಮಾಡುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸರ್ಕಾರಿ ಸಾಲ ಪತ್ರಗಳಲ್ಲಿ</strong><br />ಬಂಡವಾಳ: ಸಾಮಾನ್ಯ ವಿಮಾ ಸಂಸ್ಥೆಗಳಿಗೆ ಕೇಂದ್ರದ ಸೂಚನೆ</p>.<p><strong>ನವದೆಹಲಿ, ಸೆ. 5– </strong>ಸರ್ಕಾರಿ ಸಾಲಪತ್ರ ಮುಂತಾದ ಅಂಗೀಕೃತ ವರ್ಗಗಳಲ್ಲಿ ಬಂಡವಾಳವನ್ನು ತೊಡಗಿಸಬೇಕು ಎಂದು ಸಾಮಾನ್ಯ ವಿಮಾ ಸಂಸ್ಥೆಗಳ ಬಂಡವಾಳ ಹೂಡಿಕೆ ಬಗ್ಗೆ ಸರ್ಕಾರ ರೂಪಿಸಿರುವ ನೀತಿ ನಿರ್ದೇಶನಗಳಲ್ಲಿ ಒತ್ತಿ ಹೇಳಲಾಗಿದೆ.</p>.<p>ಈ ನಿರ್ದೇಶನಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಸಾಮಾನ್ಯ ವಿಮಾ ಸಂಸ್ಥೆಗಳಲ್ಲಿ ಬಂಡವಾಳವಾಗಿ ತೊಡಗಿಸಬಲ್ಲ ಸಂಪನ್ಮೂಲಗಳು ಪ್ರತಿವರ್ಷ 15 ಕೋಟಿ ರೂ.ಗಳಷ್ಟು ಹೆಚ್ಚುವುದೆಂದು ಅಂದಾಜು ಮಾಡಲಾಗಿದೆ.</p>.<p><strong>ಭಾರತ– ರಷ್ಯಾ ಒಪ್ಪಂದ: ಕಟುಟೀಕೆ</strong></p>.<p><strong>ನವದೆಹಲಿ, ಸೆ. 5– </strong>ಸಂಸತ್ನ ವಿರೋಧ ಪಕ್ಷಗಳ ಸದಸ್ಯರು, ಇಂದು ಇಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿಯೊಂದರಲ್ಲಿ ಭಾರತ– ರಷ್ಯಾ ಮೈತ್ರಿ ಒಪ್ಪಂದವನ್ನು ಒಂದೇ ಸಮನೆ ತೀವ್ರ ವಾಗಿ ಟೀಕಿಸಿದರು.</p>.<p>ಸ್ವತಂತ್ರ ಪಕ್ಷದ ನಾಯಕರುಗಳಾದ ಶ್ರೀ ಮೀನುಮಸಾನಿ, ಶ್ರೀ ಪೀಲೂಮೋದಿ ಮತ್ತು ಜನಸಂಘದ ನಾಯಕ ಶ್ರೀ ಬಲರಾಜ ಮಧೋಕ್ ಅವರು ಮಾತನಾಡುತ್ತ, ‘ಈ ಒಪ್ಪಂದವು ರಾಷ್ಟ್ರವನ್ನು ಪ್ರತ್ಯೇಕಗೊಳಿಸಿ, ರಷ್ಯಾದ ಬಾಲುಬಡುಕ ರಾಷ್ಟ್ರವನ್ನಾಗಿ ಮಾಡುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>