<p><strong>ಹಿಂದಿನ ಸರ್ಕಾರ ನಿರ್ಧಾರ ಮಾರ್ಪಾಡಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯರ ಖಂಡನೆ</strong></p>.<p><strong>ಬೆಂಗಳೂರು, ಸೆ.9– </strong>ಇಂದು ಇಲ್ಲಿ ನಡೆದ ವಿಧಾನ ಪರಿಷತ್ತಿನ ಸದಸ್ಯರ ಉದ್ರಿಕ್ತ ಸಭೆ ಅಧಿಕಾರಿಗಳಿಗೆ ವಸತಿ ನಿರ್ಮಿಸುವ ಪ್ರಯತ್ನವನ್ನು ಕೈಬಿಟ್ಟು ಹಿಂದಿನ ಸರ್ಕಾರದ ತೀರ್ಮಾನದಂತೆ ಆ ಸ್ಥಳದಲ್ಲಿ ಶಾಸಕಾಂಗ ಭವನವನ್ನು ಕೂಡಲೇ ನಿರ್ಮಿಸಬೇಕೆಂದು ಆಗ್ರಹಪಡಿಸಿತು.</p>.<p>ಸಭಾಪತಿ ಎಸ್.ಪಿ. ರಾಜಣ್ಣ ಅವರು ಕರೆದಿದ್ದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಸದಸ್ಯರು ರಾಷ್ಟ್ರಪತಿ ಆಡಳಿತದ ಸರ್ಕಾರ ಹಿಂದಿನ ಸರ್ಕಾರದ ನಿರ್ಧಾರವನ್ನು ಬದಲಾಯಿಸಿರುವುದನ್ನು ಉಗ್ರವಾಗಿ ಟೀಕಿಸಿದರು.</p>.<p><strong>ಕರ್ನಾಟಕ ಎಕ್ಸ್ಪ್ರೆಸ್</strong></p>.<p><strong>ಹುಬ್ಬಳ್ಳಿ. ಸೆ.9– </strong>ಮೀರಜ್– ಬೆಂಗಳೂರು ನಡುವೆ ಸಂಚರಿಸುವ ಡೆಕ್ಕನ್ ಎಕ್ಸ್ಪ್ರೆಸ್ ರೈಲುಗಾಡಿಗೆ ಅಕ್ಟೋಬರ್ 1 ರಿಂದ ‘ಕರ್ನಾಟಕ ಎಕ್ಸ್ಪ್ರೆಸ್’ ಎಂದು ಪುನರ್ ನಾಮಕರಣ ಮಾಡಲಾಗುವುದೆಂದು ಕೇಂದ್ರದ ರೈಲ್ವೆ ಸಚಿವ ಕೆ. ಹನುಮಂತಯ್ಯ ಅವರು ಇಂದು ಇಲ್ಲಿ ಪ್ರಕಟಿಸಿದರು.</p>.<p>ಬೆಳಿಗ್ಗೆ ಹನುಮಂತಯ್ಯ ಅವರು ಹುಬ್ಬಳ್ಳಿ– ಧಾರವಾಡ ಕೊಳಚೆ ಪ್ರದೇಶ ನಿವಾಸಿಗಳ ಸಮ್ಮೇಳನವನ್ನು ಉದ್ಘಾಟಿಸಿದಾಗ ಎಂಪಿಸಿಸಿ (ಆಡಳಿತ) ಪ್ರಧಾನ ಕಾರ್ಯದರ್ಶಿ ಕೆ.ಎಚ್. ಪಾಟೀಲ್ ಅವರು ಮಾಡಿದ ಒತ್ತಾಯಪೂರ್ವಕ ಮನವಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿಂದಿನ ಸರ್ಕಾರ ನಿರ್ಧಾರ ಮಾರ್ಪಾಡಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯರ ಖಂಡನೆ</strong></p>.<p><strong>ಬೆಂಗಳೂರು, ಸೆ.9– </strong>ಇಂದು ಇಲ್ಲಿ ನಡೆದ ವಿಧಾನ ಪರಿಷತ್ತಿನ ಸದಸ್ಯರ ಉದ್ರಿಕ್ತ ಸಭೆ ಅಧಿಕಾರಿಗಳಿಗೆ ವಸತಿ ನಿರ್ಮಿಸುವ ಪ್ರಯತ್ನವನ್ನು ಕೈಬಿಟ್ಟು ಹಿಂದಿನ ಸರ್ಕಾರದ ತೀರ್ಮಾನದಂತೆ ಆ ಸ್ಥಳದಲ್ಲಿ ಶಾಸಕಾಂಗ ಭವನವನ್ನು ಕೂಡಲೇ ನಿರ್ಮಿಸಬೇಕೆಂದು ಆಗ್ರಹಪಡಿಸಿತು.</p>.<p>ಸಭಾಪತಿ ಎಸ್.ಪಿ. ರಾಜಣ್ಣ ಅವರು ಕರೆದಿದ್ದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಸದಸ್ಯರು ರಾಷ್ಟ್ರಪತಿ ಆಡಳಿತದ ಸರ್ಕಾರ ಹಿಂದಿನ ಸರ್ಕಾರದ ನಿರ್ಧಾರವನ್ನು ಬದಲಾಯಿಸಿರುವುದನ್ನು ಉಗ್ರವಾಗಿ ಟೀಕಿಸಿದರು.</p>.<p><strong>ಕರ್ನಾಟಕ ಎಕ್ಸ್ಪ್ರೆಸ್</strong></p>.<p><strong>ಹುಬ್ಬಳ್ಳಿ. ಸೆ.9– </strong>ಮೀರಜ್– ಬೆಂಗಳೂರು ನಡುವೆ ಸಂಚರಿಸುವ ಡೆಕ್ಕನ್ ಎಕ್ಸ್ಪ್ರೆಸ್ ರೈಲುಗಾಡಿಗೆ ಅಕ್ಟೋಬರ್ 1 ರಿಂದ ‘ಕರ್ನಾಟಕ ಎಕ್ಸ್ಪ್ರೆಸ್’ ಎಂದು ಪುನರ್ ನಾಮಕರಣ ಮಾಡಲಾಗುವುದೆಂದು ಕೇಂದ್ರದ ರೈಲ್ವೆ ಸಚಿವ ಕೆ. ಹನುಮಂತಯ್ಯ ಅವರು ಇಂದು ಇಲ್ಲಿ ಪ್ರಕಟಿಸಿದರು.</p>.<p>ಬೆಳಿಗ್ಗೆ ಹನುಮಂತಯ್ಯ ಅವರು ಹುಬ್ಬಳ್ಳಿ– ಧಾರವಾಡ ಕೊಳಚೆ ಪ್ರದೇಶ ನಿವಾಸಿಗಳ ಸಮ್ಮೇಳನವನ್ನು ಉದ್ಘಾಟಿಸಿದಾಗ ಎಂಪಿಸಿಸಿ (ಆಡಳಿತ) ಪ್ರಧಾನ ಕಾರ್ಯದರ್ಶಿ ಕೆ.ಎಚ್. ಪಾಟೀಲ್ ಅವರು ಮಾಡಿದ ಒತ್ತಾಯಪೂರ್ವಕ ಮನವಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>