ನವದೆಹಲಿ, ಡಿ. 6– ಬಾಂಗ್ಲಾದೇಶ ಹಾಗೂ ಅಲ್ಲಿನ ಜನತಾ ಸರ್ಕಾರಕ್ಕೆ ಇಂದು ಭಾರತ ಸರ್ಕಾರ ರಾಜತಾಂತ್ರಿಕ ಮಾನ್ಯತೆ ನೀಡಿತು.
ಈ ‘ಐತಿಹಾಸಿಕ ಘೋಷಣೆ’ಯನ್ನು ಅಪೂರ್ವ ಉದ್ವಿಗ್ನತೆಯಿಂದ ಸ್ವಾಗತಿಸಿದ ಸಂಸತ್ ಸದಸ್ಯರು ಕೇಕೆ ಹಾಕುತ್ತ ಮೇಜುಗಳನ್ನು ಕುಟ್ಟಿ ‘ಜೈ ಬಾಂಗ್ಲಾದೇಶ್’ ಎಂದು ಒಕ್ಕೊರಲಿನಿಂದ ಘೋಷಣೆ ಮಾಡಿ, ಪ್ರಧಾನಿ ಪ್ರಕಟಿಸಿದ ನಿರ್ಧಾರಕ್ಕೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ಭಾರತದ ಜತೆ ಪಾಕಿಸ್ತಾನದ ರಾಜತಾಂತ್ರಿಕ ಬಾಂಧವ್ಯ ರದ್ದು
ನವದೆಹಲಿ, ಡಿ. 6– ಭಾರತದ ಜತೆ ರಾಜತಾಂತ್ರಿಕ ಬಾಂಧವ್ಯವನ್ನು ಪಾಕಿಸ್ತಾನ ಕಡಿದುಕೊಂಡಿದೆ.
ಪಾಕಿಸ್ತಾನ ರೇಡಿಯೊ ಇಸ್ಲಾಮಾಬಾದಿನ ಘೋಷಣೆಯನ್ನು ಉದ್ಧರಿಸಿ ತನ್ನ ಬಂಗಾಳಿ ಸುದ್ದಿ ಪ್ರಸಾರದಲ್ಲಿ ಈ ವಿಷಯವನ್ನು ಇಂದು ಪ್ರಕಟಿಸಿತು.
ಬಾಂಗ್ಲಾದೇಶಕ್ಕೆ ಭಾರತ ಮಾನ್ಯತೆ ನೀಡಿರುವುದನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೇಡಿಯೊ ಸಾರಿತು.