‘ಈಗ ದೇಶದ ಪರಿಸ್ಥಿತಿ ಹೆಚ್ಚು ಕಷ್ಟಕರವಾಗಿದೆ, ಈ ಪರಿಸ್ಥಿತಿಯನ್ನು ನಾವು ಎದುರಿಸಿ ನಮ್ಮ ಗುರಿಯನ್ನು ಸಾಧನೆ ಮಾಡುವ ದಾರಿಯಲ್ಲಿ ಸಾಗಬೇಕಾದರೆ ಜನತೆಯ ಹೆಚ್ಚು ಪ್ರಮಾಣದ ಸಹಕಾರ, ಸಹಾನುಭೂತಿ ಸರ್ಕಾರಕ್ಕೆ ಬೇಕಾಗಿದೆ. ಈ ಕನ್ನಡ ರಾಜ್ಯ ಚೆನ್ನಾಗಿ ಅಭಿವೃದ್ಧಿಯಾಗ ಬೇಕಾದದ್ದು ನಮ್ಮೆಲ್ಲರ ಆಶೋತ್ತರವಿರುವಾಗ ಈ ಸಹಕಾರವನ್ನು ನಾನು ಬಹುದೊಡ್ಡ ಪ್ರಮಾಣದಲ್ಲಿ ನಮ್ಮ ಜನತೆಯಿಂದ ನಿರೀಕ್ಷೆ ಮಾಡುತ್ತಿದ್ದೇನೆ. ಕೊಡಬೇಕು ಎನ್ನುವುದೇ ಸಂದೇಶ. ಇದೇ ಅವರನ್ನು ಕೇಳಿಕೊಳ್ಳುವುದು’ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.