<h3>ಕರ್ನಾಟಕಕ್ಕೆ ಬೆಳಗಾವಿ ಮಹಾಜನ್ ವರದಿಗೆ ಒಪ್ಪಿಗೆ </h3>.<p>ನವದೆಹಲಿ, ಏ. 29– ಬೆಳಗಾವಿ ಕರ್ನಾಟಕದಲ್ಲೇ ಉಳಿಯಬೇಕೆಂಬುದೂ ಸೇರಿದಂತೆ ಮಹಾಜನ್ ಆಯೋಗದ ಪ್ರಮುಖ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಕಾರ್ಯಗತಗೊಳಿಸಬೇಕೆಂಬ ತೀರ್ಮಾನಕ್ಕೆ ಗೃಹ ಸಚಿವಾಲಯ ಬಂದಿದೆ.</p>.<p>ಆಯೋಗದ ಶಿಫಾರಸುಗಳ ಪರೀಕ್ಷೆಯನ್ನು ಸಚಿವಾಲಯವು ಪೂರ್ಣಗೊಳಿಸಿದೆ.</p>.<p>ಗೃಹ ಸಚಿವ ಕೆ. ಬ್ರಹ್ಮಾನಂದ ರೆಡ್ಡಿ ಅವರು ಈಗಾಗಲೇ ಈ ಸಂಬಂಧದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರೊಡನೆ ಮಾತುಕತೆ ನಡೆಸಿದ್ದಾರೆ.</p>.<p>ಆಯೋಗದ ಪ್ರಮುಖ ಶಿಫಾರಸುಗಳನ್ನು ತಿರಸ್ಕರಿಸುವುದಕ್ಕೆ ಗಾಂಧಿ ಅವರು ವಿರೋಧವಾಗಿದ್ದಾರೆಂದು ವರದಿಯಾಗಿದೆ. ಹೀಗೆ ಮಾಡಿದರೆ ಅದು ಅಪಾಯಕಾರಕ ಸಂಪ್ರದಾಯ ಹಾಕಿಕೊಟ್ಟಂತೆ ಆಗುವುದು ಎಂಬುದು ಅವರ ಅಭಿಪ್ರಾಯ.</p>.<h3>ಚುನಾವಣೆ ವೆಚ್ಚದ ಮಿತಿ ಏರಿಕೆ ಪ್ರಶ್ನೆ ಪರಿಶೀಲನೆಯಲ್ಲಿ</h3>.<p>ನವದೆಹಲಿ, ಏ. 29– ಚುನಾವಣೆ ವೆಚ್ಚದ ಮಿತಿಯನ್ನು ಹೆಚ್ಚಿಸುವ ಪ್ರಶ್ನೆಯನ್ನು ಸರ್ಕಾರವು ರಾಜಕೀಯ ಪಕ್ಷಗಳ ಜತೆ ಸಮಾಲೋಚಿಸಿ, ಪರಿಶೀಲಿಸುತ್ತಿದೆ ಎಂದು ಕಾನೂನು ಸಚಿವ ಎಚ್.ಆರ್. ಗೋಖಲೆ ಇಂದು ಲೋಕಸಭೆಗೆ ತಿಳಿಸಿದರು.</p>.<p>ಅಲ್ಲದೆ ಅಭ್ಯರ್ಥಿಗಳ ವೆಚ್ಚವನ್ನು ತುಂಬಿಕೊಡುವ ಪ್ರಶ್ನೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದೂ ಅವರು ಸ್ವರಣ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h3>ಕರ್ನಾಟಕಕ್ಕೆ ಬೆಳಗಾವಿ ಮಹಾಜನ್ ವರದಿಗೆ ಒಪ್ಪಿಗೆ </h3>.<p>ನವದೆಹಲಿ, ಏ. 29– ಬೆಳಗಾವಿ ಕರ್ನಾಟಕದಲ್ಲೇ ಉಳಿಯಬೇಕೆಂಬುದೂ ಸೇರಿದಂತೆ ಮಹಾಜನ್ ಆಯೋಗದ ಪ್ರಮುಖ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಕಾರ್ಯಗತಗೊಳಿಸಬೇಕೆಂಬ ತೀರ್ಮಾನಕ್ಕೆ ಗೃಹ ಸಚಿವಾಲಯ ಬಂದಿದೆ.</p>.<p>ಆಯೋಗದ ಶಿಫಾರಸುಗಳ ಪರೀಕ್ಷೆಯನ್ನು ಸಚಿವಾಲಯವು ಪೂರ್ಣಗೊಳಿಸಿದೆ.</p>.<p>ಗೃಹ ಸಚಿವ ಕೆ. ಬ್ರಹ್ಮಾನಂದ ರೆಡ್ಡಿ ಅವರು ಈಗಾಗಲೇ ಈ ಸಂಬಂಧದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರೊಡನೆ ಮಾತುಕತೆ ನಡೆಸಿದ್ದಾರೆ.</p>.<p>ಆಯೋಗದ ಪ್ರಮುಖ ಶಿಫಾರಸುಗಳನ್ನು ತಿರಸ್ಕರಿಸುವುದಕ್ಕೆ ಗಾಂಧಿ ಅವರು ವಿರೋಧವಾಗಿದ್ದಾರೆಂದು ವರದಿಯಾಗಿದೆ. ಹೀಗೆ ಮಾಡಿದರೆ ಅದು ಅಪಾಯಕಾರಕ ಸಂಪ್ರದಾಯ ಹಾಕಿಕೊಟ್ಟಂತೆ ಆಗುವುದು ಎಂಬುದು ಅವರ ಅಭಿಪ್ರಾಯ.</p>.<h3>ಚುನಾವಣೆ ವೆಚ್ಚದ ಮಿತಿ ಏರಿಕೆ ಪ್ರಶ್ನೆ ಪರಿಶೀಲನೆಯಲ್ಲಿ</h3>.<p>ನವದೆಹಲಿ, ಏ. 29– ಚುನಾವಣೆ ವೆಚ್ಚದ ಮಿತಿಯನ್ನು ಹೆಚ್ಚಿಸುವ ಪ್ರಶ್ನೆಯನ್ನು ಸರ್ಕಾರವು ರಾಜಕೀಯ ಪಕ್ಷಗಳ ಜತೆ ಸಮಾಲೋಚಿಸಿ, ಪರಿಶೀಲಿಸುತ್ತಿದೆ ಎಂದು ಕಾನೂನು ಸಚಿವ ಎಚ್.ಆರ್. ಗೋಖಲೆ ಇಂದು ಲೋಕಸಭೆಗೆ ತಿಳಿಸಿದರು.</p>.<p>ಅಲ್ಲದೆ ಅಭ್ಯರ್ಥಿಗಳ ವೆಚ್ಚವನ್ನು ತುಂಬಿಕೊಡುವ ಪ್ರಶ್ನೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದೂ ಅವರು ಸ್ವರಣ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>