<p>ಗುರುವಾರ 26–09–1974</p>.<p>ಕೇಂದ್ರದ ನೆರವನ್ನು ಅವಲಂಬಿಸಬೇಡಿ: ರಾಜ್ಯಗಳಿಗೆ ಸಲಹೆ</p>.<p>ಲಖನೌ, ಸೆ. 25– ರಾಜ್ಯ ಸರ್ಕಾರಗಳು ತಮ್ಮ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಲು ಹೆಚ್ಚಾಗಿ ಕೇಂದ್ರ ಸರ್ಕಾರವನ್ನು ಅವಲಂಬಿಸಿಕೊಂಡಿರದೆ, ತಮ್ಮದೇ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಳ್ಳಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಜಿತ್ ಯಾದವ್ ಅವರು ಇಂದು ಇಲ್ಲಿ ಸಲಹೆ ಇತ್ತರು.</p>.<p>ಯಾದವ್ ಅವರು ಪತ್ರಕರ್ತರೊಡನೆ ಮಾತನಾಡುತ್ತ, ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರವಾಹ ಮತ್ತು ಅಭಾವ ಪರಿಸ್ಥಿತಿಯಿಂದಾಗಿ ತೀವ್ರ ಬಿಕ್ಕಟ್ಟು ಸಂಭವಿಸಿರುವುದಾಗಿ ನುಡಿದರು.</p>.<p>‘ನಿಧಿ ಸಂಗ್ರಹಿಸುವುದು ಇಲ್ಲವೆ ವಿದೇಶಗಳಿಂದ ಹಣವನ್ನು ಸಾಲಪಡೆಯುವುದು ಇವು ಎರಡೇ ಕೇಂದ್ರ ಸರ್ಕಾರಕ್ಕೆ ಈಗಿರುವ ಮಾರ್ಗಗಳು. ಆದರೆ, ಬೇರೆ ದೇಶಗಳಿಂದ ಹಣವನ್ನು ಸಾಲವಾಗಿ ಪಡೆಯಲು ಸರ್ಕಾರ ಸಿದ್ಧವಿಲ್ಲ’ ಎಂದು ಅವರು ತಿಳಿಸಿದರು.</p>.<p>ಹುಂಜಾ ಪಾಕ್ನಲ್ಲಿ ವಿಲೀನ: ಭುಟ್ಟೋ ಕ್ರಮಕ್ಕೆ ಭಾರತ ಆಕ್ಷೇಪ</p>.<p>ನವದೆಹಲಿ, ಸೆ. 25– ಭಾರತದ ಅವಿಭಾಜ್ಯ ಭಾಗವಾಗಿರುವ ಹುಂಜಾ ರಾಜ್ಯವನ್ನು ಪಾಕಿಸ್ತಾನದ ಉತ್ತರಪ್ರದೇಶದಲ್ಲಿ ವಿಲೀನ ಮಾಡಿರುವುದಾಗಿ ಪಾಕಿಸ್ತಾನದ ಪ್ರಧಾನಿ ಭುಟ್ಟೋ ಅವರು ಹೇಳಿಕೆ ನೀಡಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.</p>.<p>ವಿದೇಶಾಂಗ ಖಾತೆಯ ವಕ್ತಾರರು ಇಂದು ಇಲ್ಲಿ ನೀಡಿದ ಹೇಳಿಕೆಯಲ್ಲಿ ‘ಪಾಕಿಸ್ತಾನದ ಈ ಏಕಪಕ್ಷೀಯ ಕ್ರಮವು ಜಮ್ಮು–ಕಾಶ್ಮೀರದ ಉತ್ತರ ಭಾಗದಲ್ಲಿ ವಾಸ್ತವಿಕ ಬದಲಾವಣೆಯುಂಟು ಮಾಡಿದೆ. ಇಂಥ ಬದಲಾವಣೆ ಮಾಡುವುದಕ್ಕೆ ಪಾಕಿಸ್ತಾನಕ್ಕೆ ಯಾವ ಹಕ್ಕೂ ಇಲ್ಲ’ ಎಂದು ತಿಳಿಸಿದ್ದಾರೆ.</p>.<p>ಹುಂಜಾವು ಜಮ್ಮು–ಕಾಶ್ಮೀರದ ಸಣ್ಣ ರಾಜ್ಯವಾಗಿರುವುದರಿಂದ ಇದನ್ನು ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿದೆ ಎಂದೂ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುರುವಾರ 26–09–1974</p>.<p>ಕೇಂದ್ರದ ನೆರವನ್ನು ಅವಲಂಬಿಸಬೇಡಿ: ರಾಜ್ಯಗಳಿಗೆ ಸಲಹೆ</p>.<p>ಲಖನೌ, ಸೆ. 25– ರಾಜ್ಯ ಸರ್ಕಾರಗಳು ತಮ್ಮ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಲು ಹೆಚ್ಚಾಗಿ ಕೇಂದ್ರ ಸರ್ಕಾರವನ್ನು ಅವಲಂಬಿಸಿಕೊಂಡಿರದೆ, ತಮ್ಮದೇ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಳ್ಳಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಜಿತ್ ಯಾದವ್ ಅವರು ಇಂದು ಇಲ್ಲಿ ಸಲಹೆ ಇತ್ತರು.</p>.<p>ಯಾದವ್ ಅವರು ಪತ್ರಕರ್ತರೊಡನೆ ಮಾತನಾಡುತ್ತ, ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರವಾಹ ಮತ್ತು ಅಭಾವ ಪರಿಸ್ಥಿತಿಯಿಂದಾಗಿ ತೀವ್ರ ಬಿಕ್ಕಟ್ಟು ಸಂಭವಿಸಿರುವುದಾಗಿ ನುಡಿದರು.</p>.<p>‘ನಿಧಿ ಸಂಗ್ರಹಿಸುವುದು ಇಲ್ಲವೆ ವಿದೇಶಗಳಿಂದ ಹಣವನ್ನು ಸಾಲಪಡೆಯುವುದು ಇವು ಎರಡೇ ಕೇಂದ್ರ ಸರ್ಕಾರಕ್ಕೆ ಈಗಿರುವ ಮಾರ್ಗಗಳು. ಆದರೆ, ಬೇರೆ ದೇಶಗಳಿಂದ ಹಣವನ್ನು ಸಾಲವಾಗಿ ಪಡೆಯಲು ಸರ್ಕಾರ ಸಿದ್ಧವಿಲ್ಲ’ ಎಂದು ಅವರು ತಿಳಿಸಿದರು.</p>.<p>ಹುಂಜಾ ಪಾಕ್ನಲ್ಲಿ ವಿಲೀನ: ಭುಟ್ಟೋ ಕ್ರಮಕ್ಕೆ ಭಾರತ ಆಕ್ಷೇಪ</p>.<p>ನವದೆಹಲಿ, ಸೆ. 25– ಭಾರತದ ಅವಿಭಾಜ್ಯ ಭಾಗವಾಗಿರುವ ಹುಂಜಾ ರಾಜ್ಯವನ್ನು ಪಾಕಿಸ್ತಾನದ ಉತ್ತರಪ್ರದೇಶದಲ್ಲಿ ವಿಲೀನ ಮಾಡಿರುವುದಾಗಿ ಪಾಕಿಸ್ತಾನದ ಪ್ರಧಾನಿ ಭುಟ್ಟೋ ಅವರು ಹೇಳಿಕೆ ನೀಡಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.</p>.<p>ವಿದೇಶಾಂಗ ಖಾತೆಯ ವಕ್ತಾರರು ಇಂದು ಇಲ್ಲಿ ನೀಡಿದ ಹೇಳಿಕೆಯಲ್ಲಿ ‘ಪಾಕಿಸ್ತಾನದ ಈ ಏಕಪಕ್ಷೀಯ ಕ್ರಮವು ಜಮ್ಮು–ಕಾಶ್ಮೀರದ ಉತ್ತರ ಭಾಗದಲ್ಲಿ ವಾಸ್ತವಿಕ ಬದಲಾವಣೆಯುಂಟು ಮಾಡಿದೆ. ಇಂಥ ಬದಲಾವಣೆ ಮಾಡುವುದಕ್ಕೆ ಪಾಕಿಸ್ತಾನಕ್ಕೆ ಯಾವ ಹಕ್ಕೂ ಇಲ್ಲ’ ಎಂದು ತಿಳಿಸಿದ್ದಾರೆ.</p>.<p>ಹುಂಜಾವು ಜಮ್ಮು–ಕಾಶ್ಮೀರದ ಸಣ್ಣ ರಾಜ್ಯವಾಗಿರುವುದರಿಂದ ಇದನ್ನು ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿದೆ ಎಂದೂ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>