<p><strong>ತನಿಖಾ ನಿರ್ಣಯ ಚರ್ಚೆಗೆ ಸರ್ಕಾರದ ಒಪ್ಪಿಗೆ: ವಿರೋಧಪಕ್ಷಕ್ಕೆ ಜಯ</strong></p><p>ನವದೆಹಲಿ, ಸೆ. 6– ಆಮದು ಲೈಸೆನ್ಸ್ ಪ್ರಕರಣದ ಬಗ್ಗೆ ಸಂಸದೀಯ ತನಿಖೆ ನಡೆಸಬೇಕೆಂಬ ವಿರೋಧ ಪಕ್ಷದ ನಿರ್ಣಯ ಕುರಿತು ಲೋಕಸಭೆ ಚರ್ಚೆಗೆ ಸರ್ಕಾರ ಇಂದು ಒಪ್ಪಿಕೊಂಡಿದ್ದು ವಿರೋಧ ಪಕ್ಷಕ್ಕೆ ಭಾರೀ ಜಯವುಂಟಾಯಿತು.</p><p>ಲೋಕಸಭೆಯ ಕಲಾಪಗಳನ್ನೆಲ್ಲ ಮುಂದಕ್ಕೆ ಹಾಕುವ ಅಪರೂಪ ಕ್ರಮ ಕೈಗೊಂಡ ಸಭಾಧ್ಯಕ್ಷರು ಕಲಾಪ ಸಲಹಾ ಸಮಿತಿಯ ತೊಂಬತ್ತು ನಿಮಿಷದ ಸಭೆ ನಡೆಸಿದ ನಂತರ ನಿರ್ಣಯ ಕುರಿತು ಚರ್ಚೆಗೆ ಸರ್ಕಾರ ಒಪ್ಪಿರುವುದನ್ನು ಪ್ರಕಟಿಸಿದರು.</p><p>ಪ್ರಧಾನಿ ನಿವಾಸದಲ್ಲಿ ನಿನ್ನೆ ಮಧ್ಯರಾತ್ರಿ ನಡೆದ ಸಂಪುಟದ ಹಿರಿಯ ಸದಸ್ಯರ ಸಭೆಯನ್ನು ಅನುಸರಿಸಿ ಲೈಸೆನ್ಸ್ ಹಗರಣದ ಬಗ್ಗೆ ಸಂಸದೀಯ ತನಿಖೆಗೆ ವಿರೋಧ ಪಕ್ಷದ ಬೇಡಿಕೆ ವಿಷಯದಲ್ಲಿ ಸರ್ಕಾರ ತನ್ನ<br>ಬಿಗಿಧೋರಣೆಯನ್ನು ಸಡಿಲಿಸಿದೆ.</p><p><strong>ಭಾರತದ ಉದ್ದೇಶದ ಬಗ್ಗೆ ತನಗೆ ಯಾವುದೇ ಶಂಕೆ ಇಲ್ಲ: ನೇಪಾಳ</strong></p><p>ನವದೆಹಲಿ, ಸೆ. 6– ಸಿಕ್ಕಿಂಗೆ ಸಹ ಸದಸ್ಯ ಸ್ಥಾನಮಾನ ನೀಡುವ ಭಾರತದ ನಿರ್ಧಾರದ ಬಗ್ಗೆ ಕಳೆದ ಎರಡು ದಿನಗಳಿಂದ ಉಗ್ರ ಪ್ರದರ್ಶನ ನಡೆಸಿದ ನಂತರ ಭಾರತದ ಉದ್ದೇಶದ ಬಗ್ಗೆ ತನಗೆ ಯಾವುದೇ ಭೀತಿ ಇಲ್ಲವೆಂದು ನೇಪಾಳ ಭಾರತಕ್ಕೆ ಆಶ್ವಾಸನೆ ನೀಡಿದೆ.</p><p>ಭಾರತದ ರಾಯಭಾರಿ ಎಂ.ಕೆ.ರಸಗೋತ್ರ ಅವರು ಇಂದು ಕಠ್ಮಂಡುವಿನಲ್ಲಿ ನೇಪಾಳದ ವಿದೇಶಾಂಗ ಸಚಿವ ಜ್ಞಾನೇಂದ್ರ ಬಹಾದೂರ್ ಕರ್ಕಿ ಅವರನ್ನು ಭೇಟಿ ಮಾಡಿದಾಗ ಈ ಆಶ್ವಾಸನೆ ನೀಡಲಾಯಿತು.</p><p>ಭಾರತ ವಿರೋಧಿ ಪ್ರದರ್ಶನಗಳ ವಿರುದ್ಧ ಪೂರ್ಣ ಕ್ರಮ ಕೈಗೊಳ್ಳಲಾಗುವುದೆಂದೂ ನೇಪಾಳ ಸರ್ಕಾರ ಭಾರತಕ್ಕೆ ಆಶ್ವಾಸನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತನಿಖಾ ನಿರ್ಣಯ ಚರ್ಚೆಗೆ ಸರ್ಕಾರದ ಒಪ್ಪಿಗೆ: ವಿರೋಧಪಕ್ಷಕ್ಕೆ ಜಯ</strong></p><p>ನವದೆಹಲಿ, ಸೆ. 6– ಆಮದು ಲೈಸೆನ್ಸ್ ಪ್ರಕರಣದ ಬಗ್ಗೆ ಸಂಸದೀಯ ತನಿಖೆ ನಡೆಸಬೇಕೆಂಬ ವಿರೋಧ ಪಕ್ಷದ ನಿರ್ಣಯ ಕುರಿತು ಲೋಕಸಭೆ ಚರ್ಚೆಗೆ ಸರ್ಕಾರ ಇಂದು ಒಪ್ಪಿಕೊಂಡಿದ್ದು ವಿರೋಧ ಪಕ್ಷಕ್ಕೆ ಭಾರೀ ಜಯವುಂಟಾಯಿತು.</p><p>ಲೋಕಸಭೆಯ ಕಲಾಪಗಳನ್ನೆಲ್ಲ ಮುಂದಕ್ಕೆ ಹಾಕುವ ಅಪರೂಪ ಕ್ರಮ ಕೈಗೊಂಡ ಸಭಾಧ್ಯಕ್ಷರು ಕಲಾಪ ಸಲಹಾ ಸಮಿತಿಯ ತೊಂಬತ್ತು ನಿಮಿಷದ ಸಭೆ ನಡೆಸಿದ ನಂತರ ನಿರ್ಣಯ ಕುರಿತು ಚರ್ಚೆಗೆ ಸರ್ಕಾರ ಒಪ್ಪಿರುವುದನ್ನು ಪ್ರಕಟಿಸಿದರು.</p><p>ಪ್ರಧಾನಿ ನಿವಾಸದಲ್ಲಿ ನಿನ್ನೆ ಮಧ್ಯರಾತ್ರಿ ನಡೆದ ಸಂಪುಟದ ಹಿರಿಯ ಸದಸ್ಯರ ಸಭೆಯನ್ನು ಅನುಸರಿಸಿ ಲೈಸೆನ್ಸ್ ಹಗರಣದ ಬಗ್ಗೆ ಸಂಸದೀಯ ತನಿಖೆಗೆ ವಿರೋಧ ಪಕ್ಷದ ಬೇಡಿಕೆ ವಿಷಯದಲ್ಲಿ ಸರ್ಕಾರ ತನ್ನ<br>ಬಿಗಿಧೋರಣೆಯನ್ನು ಸಡಿಲಿಸಿದೆ.</p><p><strong>ಭಾರತದ ಉದ್ದೇಶದ ಬಗ್ಗೆ ತನಗೆ ಯಾವುದೇ ಶಂಕೆ ಇಲ್ಲ: ನೇಪಾಳ</strong></p><p>ನವದೆಹಲಿ, ಸೆ. 6– ಸಿಕ್ಕಿಂಗೆ ಸಹ ಸದಸ್ಯ ಸ್ಥಾನಮಾನ ನೀಡುವ ಭಾರತದ ನಿರ್ಧಾರದ ಬಗ್ಗೆ ಕಳೆದ ಎರಡು ದಿನಗಳಿಂದ ಉಗ್ರ ಪ್ರದರ್ಶನ ನಡೆಸಿದ ನಂತರ ಭಾರತದ ಉದ್ದೇಶದ ಬಗ್ಗೆ ತನಗೆ ಯಾವುದೇ ಭೀತಿ ಇಲ್ಲವೆಂದು ನೇಪಾಳ ಭಾರತಕ್ಕೆ ಆಶ್ವಾಸನೆ ನೀಡಿದೆ.</p><p>ಭಾರತದ ರಾಯಭಾರಿ ಎಂ.ಕೆ.ರಸಗೋತ್ರ ಅವರು ಇಂದು ಕಠ್ಮಂಡುವಿನಲ್ಲಿ ನೇಪಾಳದ ವಿದೇಶಾಂಗ ಸಚಿವ ಜ್ಞಾನೇಂದ್ರ ಬಹಾದೂರ್ ಕರ್ಕಿ ಅವರನ್ನು ಭೇಟಿ ಮಾಡಿದಾಗ ಈ ಆಶ್ವಾಸನೆ ನೀಡಲಾಯಿತು.</p><p>ಭಾರತ ವಿರೋಧಿ ಪ್ರದರ್ಶನಗಳ ವಿರುದ್ಧ ಪೂರ್ಣ ಕ್ರಮ ಕೈಗೊಳ್ಳಲಾಗುವುದೆಂದೂ ನೇಪಾಳ ಸರ್ಕಾರ ಭಾರತಕ್ಕೆ ಆಶ್ವಾಸನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>