<p>ಇಸ್ಲಾಮಾಬಾದ್ನಲ್ಲಿ ಅಧಿಕಾರಿ ಮಟ್ಟದ ಸಭೆ: ಭಾರತದ ಒಪ್ಪಿಗೆ</p><p>ನವದೆಹಲಿ, ಜುಲೈ 12– 1971ರ ಯುದ್ಧದಿಂದ ಉದ್ಭವಿಸಿರುವ ಮಾನವೀಯ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಭಾರತ ಮತ್ತು ಪಾಕಿಸ್ತಾನದ ಉನ್ನತ ಪ್ರತಿನಿಧಿಗಳು ಈ ತಿಂಗಳ 24ರಂದು ಇಸ್ಲಾಮಾಬಾದ್ನಲ್ಲಿ ಸಭೆ ಸೇರುವರು.</p><p>ಈ ಮಾತುಕತೆಯು ಎರಡು ಅಥವಾ ಮೂರು ದಿನಗಳ ಕಾಲ ನಡೆಯುವ ನಿರೀಕ್ಷೆ ಇದೆ. </p><p>ಪ್ರಧಾನಿ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ಎನ್. ಹಕ್ಸರ್ ಅವರು ಈ ಮಾತುಕತೆಯಲ್ಲಿ ಭಾಗವಹಿಸುವ ಭಾರತ ನಿಯೋಗದ ನಾಯಕರು.</p><p>ಪಾಕಿಸ್ತಾನದ ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅಜೀಜ್ ಅಹ್ಮದ್ ಅವರು ಮಾತುಕತೆಯಲ್ಲಿ ಭಾಗವಹಿಸುವ ಪಾಕಿಸ್ತಾನದ ನಿಯೋಗದ ನಾಯಕರು. ಭಾರತ ಮತ್ತು ಪಾಕಿಸ್ತಾನ ತುರ್ತು ಪತ್ರ ವ್ಯವಹಾರ ನಡೆಸಿದ ಬಳಿಕ ಮಾತುಕತೆಯ ಸ್ಥಳ ಹಾಗೂ ದಿನ ನಿರ್ಧಾರವಾಯಿತು.</p><p>ಮುಂದಿನ ಸಂಸತ್ ಅಧಿವೇಶನದಲ್ಲಿ ‘ಕರ್ನಾಟಕ’ ನಾಮಕರಣ</p><p>ಬೆಂಗಳೂರು, ಜುಲೈ 12– ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಬದಲಾಯಿಸುವ ಸಂವಿಧಾನದ ತಿದ್ದುಪಡಿ ವಿಧೇಯಕ ಅಂಗೀಕಾರವಾಗಲಿದೆ ಎಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p><p>ರಾಜ್ಯದ ಹೆಸರನ್ನು ಬದಲಾಯಿಸುವ ಕಾರ್ಯವನ್ನು ಮುಂದಕ್ಕೆ ಹಾಕಲಾಗುವು<br>ದೆಂದು ಎದ್ದಿರುವ ಊಹಾಪೋಹವನ್ನು ಮುಖ್ಯಮಂತ್ರಿ ಅಲ್ಲಗಳೆದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಸ್ಲಾಮಾಬಾದ್ನಲ್ಲಿ ಅಧಿಕಾರಿ ಮಟ್ಟದ ಸಭೆ: ಭಾರತದ ಒಪ್ಪಿಗೆ</p><p>ನವದೆಹಲಿ, ಜುಲೈ 12– 1971ರ ಯುದ್ಧದಿಂದ ಉದ್ಭವಿಸಿರುವ ಮಾನವೀಯ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಭಾರತ ಮತ್ತು ಪಾಕಿಸ್ತಾನದ ಉನ್ನತ ಪ್ರತಿನಿಧಿಗಳು ಈ ತಿಂಗಳ 24ರಂದು ಇಸ್ಲಾಮಾಬಾದ್ನಲ್ಲಿ ಸಭೆ ಸೇರುವರು.</p><p>ಈ ಮಾತುಕತೆಯು ಎರಡು ಅಥವಾ ಮೂರು ದಿನಗಳ ಕಾಲ ನಡೆಯುವ ನಿರೀಕ್ಷೆ ಇದೆ. </p><p>ಪ್ರಧಾನಿ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ಎನ್. ಹಕ್ಸರ್ ಅವರು ಈ ಮಾತುಕತೆಯಲ್ಲಿ ಭಾಗವಹಿಸುವ ಭಾರತ ನಿಯೋಗದ ನಾಯಕರು.</p><p>ಪಾಕಿಸ್ತಾನದ ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅಜೀಜ್ ಅಹ್ಮದ್ ಅವರು ಮಾತುಕತೆಯಲ್ಲಿ ಭಾಗವಹಿಸುವ ಪಾಕಿಸ್ತಾನದ ನಿಯೋಗದ ನಾಯಕರು. ಭಾರತ ಮತ್ತು ಪಾಕಿಸ್ತಾನ ತುರ್ತು ಪತ್ರ ವ್ಯವಹಾರ ನಡೆಸಿದ ಬಳಿಕ ಮಾತುಕತೆಯ ಸ್ಥಳ ಹಾಗೂ ದಿನ ನಿರ್ಧಾರವಾಯಿತು.</p><p>ಮುಂದಿನ ಸಂಸತ್ ಅಧಿವೇಶನದಲ್ಲಿ ‘ಕರ್ನಾಟಕ’ ನಾಮಕರಣ</p><p>ಬೆಂಗಳೂರು, ಜುಲೈ 12– ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಬದಲಾಯಿಸುವ ಸಂವಿಧಾನದ ತಿದ್ದುಪಡಿ ವಿಧೇಯಕ ಅಂಗೀಕಾರವಾಗಲಿದೆ ಎಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p><p>ರಾಜ್ಯದ ಹೆಸರನ್ನು ಬದಲಾಯಿಸುವ ಕಾರ್ಯವನ್ನು ಮುಂದಕ್ಕೆ ಹಾಕಲಾಗುವು<br>ದೆಂದು ಎದ್ದಿರುವ ಊಹಾಪೋಹವನ್ನು ಮುಖ್ಯಮಂತ್ರಿ ಅಲ್ಲಗಳೆದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>