ಬೆಂಗಳೂರು, ಫೆ. 26– ಪಶ್ಚಿಮಘಟ್ಟಗಳ ಅಭಿವೃದ್ಧಿ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ಸಮಿತಿಯೊಂದನ್ನು ಯೋಜನಾ ಆಯೋಗ ರಚಿಸಿದೆಯೆಂದು ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
‘ಅದರಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪ್ರತಿನಿಧಿಗಳು ಸದಸ್ಯ
ರಾಗಿದ್ದಾರೆ’ ಎಂದು ಹೇಳಿದರು.
ಕರ್ನಾಟಕ ಎಕ್ಸ್ಪ್ರೆಸ್ ರೈಲಿಗೆ ನಾಳೆಯಿಂದ ಡೀಸೆಲ್ ಎಂಜಿನ್
ಹೈದರಾಬಾದ್, ಫೆ. 26– ಬೆಂಗಳೂರು ನಗರದಿಂದ ಮೀರಜ್ಗೆ ಹೋಗುವ ಕರ್ನಾಟಕ ಎಕ್ಸ್ಪ್ರೆಸ್ ರೈಲಿಗೆ ಈ ತಿಂಗಳ 28ರಿಂದ ಡೀಸೆಲ್ ಎಂಜಿನ್ ಅಳವಡಿಸಲಾಗು ವುದು. ದಕ್ಷಿಣ– ಮಧ್ಯ ರೈಲ್ವೆ ವಿಭಾಗದಲ್ಲಿ ಮೀಟರ್ ಗೇಜ್ನಲ್ಲಿ ಎಕ್ಸ್ಪ್ರೆಸ್ ರೈಲೊಂದಕ್ಕೆ ಡೀಸೆಲ್ ಎಂಜಿನ್ ಅಳವಡಿಸುತ್ತಿರುವುದು ಇದೇ ಪ್ರಪ್ರಥಮ ಎಂದು ರೈಲ್ವೆ ಪತ್ರಿಕಾ ಪ್ರಕಟಣೆ ತಿಳಿಸಿದೆ.