l ಬಲಪ್ರಯೋಗ ಬಳಸದೆಯೇ ಎಲ್ಲ ಸಮಸ್ಯೆಗಳ ಇತ್ಯರ್ಥ: ಭಾರತ – ಪಾಕ್ ನಡುವೆ ಒಪ್ಪಂದ
ಸಿಮ್ಲಾ, ಜುಲೈ 2 – ತಮ್ಮಎಲ್ಲ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಹಾಗೂ ಬಲಪ್ರಯೋಗ ಬಳಸದೇ ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಭಾರತ ಮತ್ತು ಪಾಕಿಸ್ತಾನಗಳು ಇಂದು ಸಮ್ಮತಿಸಿದವು.
ಹಿಮಾಚಲ ಭವನದವಿಶಾಲ ಸಭಾಂಗಣದಲ್ಲಿನಡೆದ ಸಮಾರಂಭದಲ್ಲಿ ಈ ಒಪ್ಪಂದಕ್ಕೆ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಜುಲ್ಫಿಕರ್ ಅಲೀಭುಟ್ಟೊ ಅವರು ಇಂದು ರಾತ್ರಿ, 12:40 ಗಂಟೆಯಲ್ಲಿ ಸಹಿ ಹಾಕಿದರು.