<p><strong>ಲಿಂಗನಮಕ್ಕಿ ಪ್ರದೇಶಕ್ಕೆ ಹನಿ ಮಳೆಯ ತಂಪು: ಜಡಿ ಆರಂಭಕ್ಕೆ ಸೂಚಿ</strong></p>.<p>ಬೆಂಗಳೂರು, ಜೂನ್ 27– ಲಿಂಗನಮಕ್ಕಿ ಜಲಾಶಯದ ಸುತ್ತಮುತ್ತಲ ಪ್ರದೇಶದಲ್ಲಿ, ರಾಜ್ಯದ ಜನಜೀವನವೇ ಕುಸಿದುಬೀಳುವ ಅನಾಹುತವನ್ನು ತಪ್ಪಿಸಬಹುದಾದ ಮುಂಗಾರು ಹನಿ ಆರಂಭ.</p>.<p>ಇದರ ಬೆನ್ನ ಹಿಂದೆಯೇ ಭಾರಿ ಮಳೆ ಆರಂಭವಾಗುವ ಸ್ಪಷ್ಟ ಲಕ್ಷಣ– ಈ ಸಂತಸದ ಸುದ್ದಿ ರಾಜಧಾನಿಯನ್ನು ತಲುಪಿದೆ.</p>.<p>ಇದುವರೆಗಿನ ಹನಿಮಳೆಯ ಪರಿಣಾಮವಾಗಿ, ಸುಮಾರು 18 ಗಂಟೆಗಳ ಕಾಲ ವಿದ್ಯುತ್ ಉತ್ಪಾದನೆಗೆ ಸಾಕಾಗುಷ್ಟು ಹೊಸ ನೀರು ಜಲಾಶಯ ಸೇರಿದೆ (ನೀರಿನಮಟ್ಟ 1,230.2 ಅಡಿ) ಎಂದು ಲೋಕೋಪಯೋಗಿ ಇಲಾಖೆ ಮಂತ್ರಿ ಶ್ರೀ ಎಚ್. ಎಂ. ಚನ್ನಬಸ್ಸಪ್ಪ ಅವರು ಇಂದು ಸಂಜೆ ವರದಿಗಾರರಿಗೆ ತಿಳಿಸಿದರು.</p>.<p><strong>ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆಗೆ ಮಹಾಬಲಶೆಟ್ಟಿ ಸ್ಪರ್ಧೆ ಸಂಭವ</strong></p>.<p>ಬೆಂಗಳೂರು, ಜೂನ್ 27– ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಕೆ.ಪಿ.ಸಿ.ಸಿ. ವಲಯಗಳಲ್ಲೇ ಅಭಿಪ್ರಾಯವಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಯುವಕ ಅಧ್ಯಕ್ಷ ಶ್ರೀ ಕೆ. ಮಹಾಬಲಶೆಟ್ಟಿ ಜುಲೈ 7ರಂದು ನಡೆಯುವ ಪ್ರದೇಶ ಸಮಿತಿ ಅಧ್ಯಕ್ಷ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಸಂಭವ ಉಂಟು.</p>.<p>‘ಯಾವ ಗುಂಪಿಗೂ’ ಸೇರದ ಶ್ರೀ ಮಹಾಬಲಶೆಟ್ಟಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬುದು ಅವರ ಸ್ವಂತ ತೀರ್ಮಾನವಲ್ಲ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸರ್ವಾನುಮತದಿಂದ ಕೈಗೊಂಡಿರುವ ತೀರ್ಮಾನ.</p>.<p>ಮುಖ್ಯಮಂತ್ರಿ ಶ್ರೀ ಅರಸು ಹಾಗೂ ಪ್ರದೇಶ ಅಧ್ಯಕ್ಷ ಶ್ರೀ ಕೆ. ಎಚ್. ರಂಗನಾಥ್ ಅವರು ಸೇರಿ ಪಕ್ಷದ ಕಾರ್ಯಕ್ರಮಗಳನ್ನು ನಿಷ್ಠೆಯಿಂದ ಜಾರಿಗೆ ತರುವ ವ್ಯಕ್ತಿಯನ್ನು ಅಧ್ಯಕ್ಷ ಪದವಿಗೆ ಆರಿಸಿದರೆ ಶ್ರೀ ಶೆಟ್ಟರು ಸ್ಪರ್ಧಿಸುವುದಿಲ್ಲ. ಈ ಇಬ್ಬರು ನಾಯಕರ ನಿರ್ಧಾರವನ್ನ ಇವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒಪ್ಪಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗನಮಕ್ಕಿ ಪ್ರದೇಶಕ್ಕೆ ಹನಿ ಮಳೆಯ ತಂಪು: ಜಡಿ ಆರಂಭಕ್ಕೆ ಸೂಚಿ</strong></p>.<p>ಬೆಂಗಳೂರು, ಜೂನ್ 27– ಲಿಂಗನಮಕ್ಕಿ ಜಲಾಶಯದ ಸುತ್ತಮುತ್ತಲ ಪ್ರದೇಶದಲ್ಲಿ, ರಾಜ್ಯದ ಜನಜೀವನವೇ ಕುಸಿದುಬೀಳುವ ಅನಾಹುತವನ್ನು ತಪ್ಪಿಸಬಹುದಾದ ಮುಂಗಾರು ಹನಿ ಆರಂಭ.</p>.<p>ಇದರ ಬೆನ್ನ ಹಿಂದೆಯೇ ಭಾರಿ ಮಳೆ ಆರಂಭವಾಗುವ ಸ್ಪಷ್ಟ ಲಕ್ಷಣ– ಈ ಸಂತಸದ ಸುದ್ದಿ ರಾಜಧಾನಿಯನ್ನು ತಲುಪಿದೆ.</p>.<p>ಇದುವರೆಗಿನ ಹನಿಮಳೆಯ ಪರಿಣಾಮವಾಗಿ, ಸುಮಾರು 18 ಗಂಟೆಗಳ ಕಾಲ ವಿದ್ಯುತ್ ಉತ್ಪಾದನೆಗೆ ಸಾಕಾಗುಷ್ಟು ಹೊಸ ನೀರು ಜಲಾಶಯ ಸೇರಿದೆ (ನೀರಿನಮಟ್ಟ 1,230.2 ಅಡಿ) ಎಂದು ಲೋಕೋಪಯೋಗಿ ಇಲಾಖೆ ಮಂತ್ರಿ ಶ್ರೀ ಎಚ್. ಎಂ. ಚನ್ನಬಸ್ಸಪ್ಪ ಅವರು ಇಂದು ಸಂಜೆ ವರದಿಗಾರರಿಗೆ ತಿಳಿಸಿದರು.</p>.<p><strong>ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆಗೆ ಮಹಾಬಲಶೆಟ್ಟಿ ಸ್ಪರ್ಧೆ ಸಂಭವ</strong></p>.<p>ಬೆಂಗಳೂರು, ಜೂನ್ 27– ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಕೆ.ಪಿ.ಸಿ.ಸಿ. ವಲಯಗಳಲ್ಲೇ ಅಭಿಪ್ರಾಯವಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಯುವಕ ಅಧ್ಯಕ್ಷ ಶ್ರೀ ಕೆ. ಮಹಾಬಲಶೆಟ್ಟಿ ಜುಲೈ 7ರಂದು ನಡೆಯುವ ಪ್ರದೇಶ ಸಮಿತಿ ಅಧ್ಯಕ್ಷ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಸಂಭವ ಉಂಟು.</p>.<p>‘ಯಾವ ಗುಂಪಿಗೂ’ ಸೇರದ ಶ್ರೀ ಮಹಾಬಲಶೆಟ್ಟಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬುದು ಅವರ ಸ್ವಂತ ತೀರ್ಮಾನವಲ್ಲ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸರ್ವಾನುಮತದಿಂದ ಕೈಗೊಂಡಿರುವ ತೀರ್ಮಾನ.</p>.<p>ಮುಖ್ಯಮಂತ್ರಿ ಶ್ರೀ ಅರಸು ಹಾಗೂ ಪ್ರದೇಶ ಅಧ್ಯಕ್ಷ ಶ್ರೀ ಕೆ. ಎಚ್. ರಂಗನಾಥ್ ಅವರು ಸೇರಿ ಪಕ್ಷದ ಕಾರ್ಯಕ್ರಮಗಳನ್ನು ನಿಷ್ಠೆಯಿಂದ ಜಾರಿಗೆ ತರುವ ವ್ಯಕ್ತಿಯನ್ನು ಅಧ್ಯಕ್ಷ ಪದವಿಗೆ ಆರಿಸಿದರೆ ಶ್ರೀ ಶೆಟ್ಟರು ಸ್ಪರ್ಧಿಸುವುದಿಲ್ಲ. ಈ ಇಬ್ಬರು ನಾಯಕರ ನಿರ್ಧಾರವನ್ನ ಇವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒಪ್ಪಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>