<p><strong>ನವದೆಹಲಿ</strong>, ಜೂನ್ 27– ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ನಾಳೆ ಇಲ್ಲಿ ಸೇರಲಿರುವ ಪಕ್ಷದ ಸಂಸದೀಯ ಮಂಡಲಿ ಆಯ್ಕೆ ಮಾಡುವುದು ಬಹುತೇಕ ಖಚಿತವೆಂದು ವೀಕ್ಷಕರು ಭಾವಿಸಿದ್ದಾರೆ.</p>.<p>ಪ್ರಧಾನಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಶಂಕರದಯಾಳ ಶರ್ಮಾ ಹಾಗೂ ಇತರ ಹಿರಿಯ ಸಹೋದ್ಯೋಗಿಗಳ ಜತೆ ನಿನ್ನೆ ಸಂಜೆ ಅಂತಿಮ ಚರ್ಚೆ ನಡೆಸಿದರು. ಸ್ವರಣ್ಸಿಂಗ್, ಜಗಜೀವನರಾಂ ಹಾಗೂ ಡಿ.ಕೆ. ಬರೂವಾ ಅವರು ಹಾಜರಿದ್ದರು.</p>.<p>ಶ್ರೀಲಂಕಾಕ್ಕೆ ಕಛತೀವು ಬಿಟ್ಟುಕೊಡಲು ಒಪ್ಪಿಗೆ</p>.<p>ಕೊಲಂಬೊ, ಜೂನ್ 27– ಪಾಕ್ ಜಲಸಂಧಿಯಲ್ಲಿ ವಿವಾದಕ್ಕೊಳಗಾಗಿರುವ ಕಛತೀವು ದ್ವೀಪದ ಪರಮಾಧಿಕಾರವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡಲು ಭಾರತವು ನಿರ್ಧರಿಸಿರುವುದಾಗಿ ಇಂದು ತಿಳಿದುಬಂದಿದೆ.</p>.<p>ಉಭಯ ರಾಷ್ಟ್ರಗಳು ಸಹಿ ಮಾಡಿರುವ ಈ ಒಪ್ಪಂದದ ಅಧಿಕೃತ ಪ್ರಕಟಣೆ ನಾಳೆ ಹೊರಬೀಳುವ ನಿರೀಕ್ಷೆ ಇದೆ. ಪಾಕ್ ಜಲಸಂಧಿಯಲ್ಲಿ ಗಡಿ ಗುರುತಿಸುವ ವಿಷಯದಲ್ಲಿಯೂ ಸಮಗ್ರ ಒಪ್ಪಂದ ಏರ್ಪಟ್ಟಿರುವುದಾಗಿ ದೆಹಲಿಯಲ್ಲಿನ ಬಲ್ಲ ವಲಯಗಳಿಂದ ತಿಳಿದುಬಂದಿದೆ. </p>.<p>ನವದೆಹಲಿ ಮತ್ತು ಕೊಲಂಬೊದಲ್ಲಿ ಏಕಕಾಲದಲ್ಲಿ ನಾಳೆ ಪ್ರಕಟಿಸಲಾಗುವ ಈ ಒಪ್ಪಂದದ ವಿವರಗಳನ್ನು ಈ ವಲಯಗಳು ವರದಿ ಮಾಡಿಲ್ಲ.</p>.<p>ಶ್ರೀಮತಿ ಸಿರಿಮಾವೊ ಬಂಡಾರನಾಯಕೆ ಅವರು ಕಳೆದ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ, ಕಛತೀವು ಬಗ್ಗೆ ಒಂದು ದಶಕದ ವಿವಾದವನ್ನು ಮುಕ್ತಾಯಗೊಳಿಸಬೇಕೆಂದು ಉಭಯ ರಾಷ್ಟ್ರಗಳ ಪ್ರಧಾನಿಯವರೂ ತೀರ್ಮಾನಕ್ಕೆ ಬಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>, ಜೂನ್ 27– ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ನಾಳೆ ಇಲ್ಲಿ ಸೇರಲಿರುವ ಪಕ್ಷದ ಸಂಸದೀಯ ಮಂಡಲಿ ಆಯ್ಕೆ ಮಾಡುವುದು ಬಹುತೇಕ ಖಚಿತವೆಂದು ವೀಕ್ಷಕರು ಭಾವಿಸಿದ್ದಾರೆ.</p>.<p>ಪ್ರಧಾನಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಶಂಕರದಯಾಳ ಶರ್ಮಾ ಹಾಗೂ ಇತರ ಹಿರಿಯ ಸಹೋದ್ಯೋಗಿಗಳ ಜತೆ ನಿನ್ನೆ ಸಂಜೆ ಅಂತಿಮ ಚರ್ಚೆ ನಡೆಸಿದರು. ಸ್ವರಣ್ಸಿಂಗ್, ಜಗಜೀವನರಾಂ ಹಾಗೂ ಡಿ.ಕೆ. ಬರೂವಾ ಅವರು ಹಾಜರಿದ್ದರು.</p>.<p>ಶ್ರೀಲಂಕಾಕ್ಕೆ ಕಛತೀವು ಬಿಟ್ಟುಕೊಡಲು ಒಪ್ಪಿಗೆ</p>.<p>ಕೊಲಂಬೊ, ಜೂನ್ 27– ಪಾಕ್ ಜಲಸಂಧಿಯಲ್ಲಿ ವಿವಾದಕ್ಕೊಳಗಾಗಿರುವ ಕಛತೀವು ದ್ವೀಪದ ಪರಮಾಧಿಕಾರವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡಲು ಭಾರತವು ನಿರ್ಧರಿಸಿರುವುದಾಗಿ ಇಂದು ತಿಳಿದುಬಂದಿದೆ.</p>.<p>ಉಭಯ ರಾಷ್ಟ್ರಗಳು ಸಹಿ ಮಾಡಿರುವ ಈ ಒಪ್ಪಂದದ ಅಧಿಕೃತ ಪ್ರಕಟಣೆ ನಾಳೆ ಹೊರಬೀಳುವ ನಿರೀಕ್ಷೆ ಇದೆ. ಪಾಕ್ ಜಲಸಂಧಿಯಲ್ಲಿ ಗಡಿ ಗುರುತಿಸುವ ವಿಷಯದಲ್ಲಿಯೂ ಸಮಗ್ರ ಒಪ್ಪಂದ ಏರ್ಪಟ್ಟಿರುವುದಾಗಿ ದೆಹಲಿಯಲ್ಲಿನ ಬಲ್ಲ ವಲಯಗಳಿಂದ ತಿಳಿದುಬಂದಿದೆ. </p>.<p>ನವದೆಹಲಿ ಮತ್ತು ಕೊಲಂಬೊದಲ್ಲಿ ಏಕಕಾಲದಲ್ಲಿ ನಾಳೆ ಪ್ರಕಟಿಸಲಾಗುವ ಈ ಒಪ್ಪಂದದ ವಿವರಗಳನ್ನು ಈ ವಲಯಗಳು ವರದಿ ಮಾಡಿಲ್ಲ.</p>.<p>ಶ್ರೀಮತಿ ಸಿರಿಮಾವೊ ಬಂಡಾರನಾಯಕೆ ಅವರು ಕಳೆದ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ, ಕಛತೀವು ಬಗ್ಗೆ ಒಂದು ದಶಕದ ವಿವಾದವನ್ನು ಮುಕ್ತಾಯಗೊಳಿಸಬೇಕೆಂದು ಉಭಯ ರಾಷ್ಟ್ರಗಳ ಪ್ರಧಾನಿಯವರೂ ತೀರ್ಮಾನಕ್ಕೆ ಬಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>