<p><u><strong>ಪೆಟ್ರೋಲು, ಸಿಗರೇಟು, ಉಕ್ಕು, ಭೋಗವಸ್ತುಗಳು ಮತ್ತಷ್ಟು ತುಟ್ಟಿ</strong></u></p>.<p>ನವದೆಹಲಿ, ಫೆ. 28– ಜನಸಾಮಾನ್ಯರ ದಿನಬಳಕೆ ವಸ್ತುಗಳತ್ತ ಕೈಹಾಕದೆ, ಕೇಂದ್ರ ಹಣಕಾಸು ಸಚಿವ ವೈ.ಬಿ.ಚವಾಣ್ ಅವರು 292 ಕೋಟಿ 60 ಲಕ್ಷ ರೂ.ಗಳಷ್ಟು ಭಾರಿಯಾದ ತೆರಿಗೆ ಏರಿಕೆಗಳನ್ನು ಸೂಚಿಸಿ, ಮಧ್ಯಮ ವರ್ಗ ಬಳಸುವ ಭೋಗವಸ್ತುಗಳ ಮೇಲೆ ದೊಡ್ಡ ಹೊರೆ ಹೇರಿದರು.</p>.<p>1973–74ರ ಕೇಂದ್ರ ಆಯವ್ಯಯ ಮುಂಗಡ ಪತ್ರವನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದ ಚವಾಣ್ ಅವರು, ಸಿಗರೇಟು, ಪೆಟ್ರೋಲ್, ಏರ್ಕಂಡೀಷನರ್ಗಳು ಹಾಗೂ ವಿದ್ಯುಚ್ಛಕ್ತಿ ಕುಲುಮೆಯ ಉಕ್ಕು ಇವುಗಳ ಮೇಲೆ ಅಬಕಾರಿ ಸುಂಕ ಹೆಚ್ಚಿಸಿ, ಆಮದಾಗುವ ಎಲ್ಲ ವಿಧದ ಯಂತ್ರೋಪಕರಣಗಳ ಮೇಲೆ ಆಮದು ಸುಂಕವನ್ನು ಮೇಲಕ್ಕೇರಿಸಿದರು.</p>.<p><u><strong>ಟ್ರಾಲಿ ಮೇಲೆ ಬಾಹುಬಲಿ</strong></u></p>.<p>ಮಂಗಳೂರು, ಫೆ. 28– ಕಾರ್ಕಳದಿಂದ ಧರ್ಮಸ್ಥಳಕ್ಕೆ ಸಾಗಿಸಲಿರುವ 170 ಟನ್ ತೂಕದ ಬಾಹುಬಲಿ ವಿಗ್ರಹವನ್ನು ಸಾವಿರಾರು ಜನ ಮತ್ತು ಯಂತ್ರಗಳ ನೆರವಿನಿಂದ 9 ಗಂಟೆಗಳ ಕಾಲ ಶ್ರಮಿಸಿ, ಟ್ರಾಲಿಯ ಮೇಲೆ ಏರಿಸಲಾಯಿತು.</p>.<p>ಈ ಶುಭ ಸಂದರ್ಭದಲ್ಲಿ ನಿನ್ನೆ ರಾತ್ರಿ ಕಾರ್ಕಳದಲ್ಲಿ ಬಾಹುಬಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಗ್ರಹದ ಶಿಲ್ಪಿ ಶ್ರೀ ಆರ್.ಗೋಪಾಲಶೆಣೈ ಮತ್ತು ವಿಗ್ರಹವನ್ನು ಕೆತ್ತಿಸಿದ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><u><strong>ಪೆಟ್ರೋಲು, ಸಿಗರೇಟು, ಉಕ್ಕು, ಭೋಗವಸ್ತುಗಳು ಮತ್ತಷ್ಟು ತುಟ್ಟಿ</strong></u></p>.<p>ನವದೆಹಲಿ, ಫೆ. 28– ಜನಸಾಮಾನ್ಯರ ದಿನಬಳಕೆ ವಸ್ತುಗಳತ್ತ ಕೈಹಾಕದೆ, ಕೇಂದ್ರ ಹಣಕಾಸು ಸಚಿವ ವೈ.ಬಿ.ಚವಾಣ್ ಅವರು 292 ಕೋಟಿ 60 ಲಕ್ಷ ರೂ.ಗಳಷ್ಟು ಭಾರಿಯಾದ ತೆರಿಗೆ ಏರಿಕೆಗಳನ್ನು ಸೂಚಿಸಿ, ಮಧ್ಯಮ ವರ್ಗ ಬಳಸುವ ಭೋಗವಸ್ತುಗಳ ಮೇಲೆ ದೊಡ್ಡ ಹೊರೆ ಹೇರಿದರು.</p>.<p>1973–74ರ ಕೇಂದ್ರ ಆಯವ್ಯಯ ಮುಂಗಡ ಪತ್ರವನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದ ಚವಾಣ್ ಅವರು, ಸಿಗರೇಟು, ಪೆಟ್ರೋಲ್, ಏರ್ಕಂಡೀಷನರ್ಗಳು ಹಾಗೂ ವಿದ್ಯುಚ್ಛಕ್ತಿ ಕುಲುಮೆಯ ಉಕ್ಕು ಇವುಗಳ ಮೇಲೆ ಅಬಕಾರಿ ಸುಂಕ ಹೆಚ್ಚಿಸಿ, ಆಮದಾಗುವ ಎಲ್ಲ ವಿಧದ ಯಂತ್ರೋಪಕರಣಗಳ ಮೇಲೆ ಆಮದು ಸುಂಕವನ್ನು ಮೇಲಕ್ಕೇರಿಸಿದರು.</p>.<p><u><strong>ಟ್ರಾಲಿ ಮೇಲೆ ಬಾಹುಬಲಿ</strong></u></p>.<p>ಮಂಗಳೂರು, ಫೆ. 28– ಕಾರ್ಕಳದಿಂದ ಧರ್ಮಸ್ಥಳಕ್ಕೆ ಸಾಗಿಸಲಿರುವ 170 ಟನ್ ತೂಕದ ಬಾಹುಬಲಿ ವಿಗ್ರಹವನ್ನು ಸಾವಿರಾರು ಜನ ಮತ್ತು ಯಂತ್ರಗಳ ನೆರವಿನಿಂದ 9 ಗಂಟೆಗಳ ಕಾಲ ಶ್ರಮಿಸಿ, ಟ್ರಾಲಿಯ ಮೇಲೆ ಏರಿಸಲಾಯಿತು.</p>.<p>ಈ ಶುಭ ಸಂದರ್ಭದಲ್ಲಿ ನಿನ್ನೆ ರಾತ್ರಿ ಕಾರ್ಕಳದಲ್ಲಿ ಬಾಹುಬಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಗ್ರಹದ ಶಿಲ್ಪಿ ಶ್ರೀ ಆರ್.ಗೋಪಾಲಶೆಣೈ ಮತ್ತು ವಿಗ್ರಹವನ್ನು ಕೆತ್ತಿಸಿದ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>