<p><strong>‘ಸ್ಟ್ಯಾಂಡರ್ಡ್ ಎಕರೆ’ ಬಗ್ಗೆ ಒಂಬತ್ತು ಸದಸ್ಯರ ಸಮಿತಿ ವರದಿ ಇಂದು</strong></p>.<p><strong>ನವದೆಹಲಿ, ಮೇ 12– </strong>ಭೂ ಮಿತಿಯನ್ನು ಕಡಿಮೆಗೊಳಿಸುವ ಉದ್ದೇಶಕ್ಕೆ ಸರ್ಕಾರಿ ಮತ್ತು ಖಾಸಗಿ ನೀರಾವರಿ ಜಮೀನುಗಳನ್ನು ಸಮವಾಗಿ ಪರಿಗಣಿಸಬೇಕೇ ಎಂಬ ವಿವಾದವನ್ನು ಬಗೆಹರಿಸಲು ಕಾಂಗ್ರೆಸ್ ನಾಯಕರ ಸಮ್ಮೇಳನ ಇಂದು ಒಂಬತ್ತು ಸದಸ್ಯರ ಸಮಿತಿಯನ್ನು ರಚಿಸಿತು.</p>.<p>ರಾಷ್ಟ್ರದಾದ್ಯಂತ ಭೂ ಮಿತಿ ಕಾನೂನುಗಳಲ್ಲಿ ಏಕರೂಪತೆ ತರಲು ಸಾಧ್ಯವಾಗುವಂತೆ ‘ಸ್ಟ್ಯಾಂಡರ್ಡ್ ಎಕರೆ’ಯ ಅರ್ಥವನ್ನು ಈ ಸಮಿತಿಯು ರಚಿಸುವುದು.</p>.<p>ನಾಳೆ ಮಧ್ಯಾಹ್ನದ ವೇಳೆಗೆ ಈ ಸಮಿತಿ ತನ್ನ ವರದಿ ಕೊಡುತ್ತದೆ. ಸಮಿತಿಯಲ್ಲಿರುವ ಸದಸ್ಯರೆಂದರೆ ಸಿ.ಸುಬ್ರಮಣ್ಯಂ, ಫಕ್ರುದ್ದೀನ್ ಅಲಿ ಅಹ್ಮದ್, ವಿ.ಪಿ. ನಾಯಕ್, ದೇವರಾಜ ಅರಸು, ಕರುಣಾಕರನ್, ಶ್ರೀಮತಿ ರಾಜೇಂದ್ರ ಕುಮಾರಿ ವಾಜಪೈ, ಬರ್ಕತ್ ಉಲ್ಲಾಖಾನ್ ಮತ್ತು ಮೋಹನ ಕುಮಾರ ಮಂಗಳಂ.</p>.<p><strong>ಶೃಂಗಸಭೆಗೆ ತಾರೀಖು ಸೂಚಿಸಿ ಭುಟ್ಟೊಗೆ ಇಂದಿರಾ ಪತ್ರ</strong></p>.<p><strong>ನವದೆಹಲಿ, ಮೇ 12–</strong> ತಮ್ಮಿಬ್ಬರ ಭೇಟಿಗೆ ಖಚಿತ ದಿನವನ್ನು ಸೂಚಿಸಿ ಪ್ರಧಾನಿ ಇಂದಿರಾ ಗಾಂಧಿಯವರು ಪಾಕಿಸ್ತಾನದ ಅಧ್ಯಕ್ಷ ಜಡ್.ಎ. ಭುಟ್ಟೊ ಅವರಿಗೆ ಪತ್ರ ಬರೆದಿದ್ದಾರೆ.</p>.<p>ಪ್ರಧಾನಿ ಇಂದಿರಾ ಗಾಂಧಿಯವರು ಸೂಚಿಸಿರುವ ತಾರೀಖನ್ನು ರಹಸ್ಯವಾಗಿ ಇಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಸ್ಟ್ಯಾಂಡರ್ಡ್ ಎಕರೆ’ ಬಗ್ಗೆ ಒಂಬತ್ತು ಸದಸ್ಯರ ಸಮಿತಿ ವರದಿ ಇಂದು</strong></p>.<p><strong>ನವದೆಹಲಿ, ಮೇ 12– </strong>ಭೂ ಮಿತಿಯನ್ನು ಕಡಿಮೆಗೊಳಿಸುವ ಉದ್ದೇಶಕ್ಕೆ ಸರ್ಕಾರಿ ಮತ್ತು ಖಾಸಗಿ ನೀರಾವರಿ ಜಮೀನುಗಳನ್ನು ಸಮವಾಗಿ ಪರಿಗಣಿಸಬೇಕೇ ಎಂಬ ವಿವಾದವನ್ನು ಬಗೆಹರಿಸಲು ಕಾಂಗ್ರೆಸ್ ನಾಯಕರ ಸಮ್ಮೇಳನ ಇಂದು ಒಂಬತ್ತು ಸದಸ್ಯರ ಸಮಿತಿಯನ್ನು ರಚಿಸಿತು.</p>.<p>ರಾಷ್ಟ್ರದಾದ್ಯಂತ ಭೂ ಮಿತಿ ಕಾನೂನುಗಳಲ್ಲಿ ಏಕರೂಪತೆ ತರಲು ಸಾಧ್ಯವಾಗುವಂತೆ ‘ಸ್ಟ್ಯಾಂಡರ್ಡ್ ಎಕರೆ’ಯ ಅರ್ಥವನ್ನು ಈ ಸಮಿತಿಯು ರಚಿಸುವುದು.</p>.<p>ನಾಳೆ ಮಧ್ಯಾಹ್ನದ ವೇಳೆಗೆ ಈ ಸಮಿತಿ ತನ್ನ ವರದಿ ಕೊಡುತ್ತದೆ. ಸಮಿತಿಯಲ್ಲಿರುವ ಸದಸ್ಯರೆಂದರೆ ಸಿ.ಸುಬ್ರಮಣ್ಯಂ, ಫಕ್ರುದ್ದೀನ್ ಅಲಿ ಅಹ್ಮದ್, ವಿ.ಪಿ. ನಾಯಕ್, ದೇವರಾಜ ಅರಸು, ಕರುಣಾಕರನ್, ಶ್ರೀಮತಿ ರಾಜೇಂದ್ರ ಕುಮಾರಿ ವಾಜಪೈ, ಬರ್ಕತ್ ಉಲ್ಲಾಖಾನ್ ಮತ್ತು ಮೋಹನ ಕುಮಾರ ಮಂಗಳಂ.</p>.<p><strong>ಶೃಂಗಸಭೆಗೆ ತಾರೀಖು ಸೂಚಿಸಿ ಭುಟ್ಟೊಗೆ ಇಂದಿರಾ ಪತ್ರ</strong></p>.<p><strong>ನವದೆಹಲಿ, ಮೇ 12–</strong> ತಮ್ಮಿಬ್ಬರ ಭೇಟಿಗೆ ಖಚಿತ ದಿನವನ್ನು ಸೂಚಿಸಿ ಪ್ರಧಾನಿ ಇಂದಿರಾ ಗಾಂಧಿಯವರು ಪಾಕಿಸ್ತಾನದ ಅಧ್ಯಕ್ಷ ಜಡ್.ಎ. ಭುಟ್ಟೊ ಅವರಿಗೆ ಪತ್ರ ಬರೆದಿದ್ದಾರೆ.</p>.<p>ಪ್ರಧಾನಿ ಇಂದಿರಾ ಗಾಂಧಿಯವರು ಸೂಚಿಸಿರುವ ತಾರೀಖನ್ನು ರಹಸ್ಯವಾಗಿ ಇಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>