<p><strong>ಹೆಚ್ಚು ಕಚ್ಚಾ ಎಣ್ಣೆಯ ಸರಬರಾಜಿಗೆ ಇರಾನ್ ಸಿದ್ಧ: ಸಾಲ ಸೌಲಭ್ಯ</strong></p><p>ಟೆಹರಾನ್, ಮೇ 1– ಫೆಬ್ರುವರಿ ತಿಂಗಳಲ್ಲಿ ಭಾರತ– ಇರಾನ್ ಜಂಟಿ ಆಯೋಗ ನಿರ್ಧರಿಸಿದ್ದ ಕಚ್ಚಾ ಎಣ್ಣೆ ಸರಬರಾಜು ಪ್ರಮಾಣಕ್ಕಿಂತಲೂ ಹೆಚ್ಚು ಪ್ರಮಾಣದ ಕಚ್ಚಾ ಎಣ್ಣೆಯ ಸರಬರಾಜಿಗೆ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಪ್ರಸಕ್ತ<br>ಮಾತುಕತೆಗಳಲ್ಲಿ ಒಪ್ಪಿಕೊಳ್ಳಲಾಗಿದೆ.</p><p>ಇದರಿಂದ ಮದರಾಸು ತೈಲ ಶುದ್ಧೀಕರಣಾ<br>ಗಾರವನ್ನು ಮತ್ತಷ್ಟು ವಿಸ್ತರಿಸಲು ಅನುಕೂಲ<br>ವಾಗುವುದು. 28 ಲಕ್ಷ ಟನ್ ಸಾಮರ್ಥ್ಯಕ್ಕೆ ಹೆಚ್ಚಿಸಲು ಜಂಟಿ ಆಯೋಗ ನಿರ್ಧರಿಸಿತ್ತು.</p><p>ಹತ್ತು ಲಕ್ಷ ಟನ್ ಕಚ್ಚಾ ಎಣ್ಣೆಗೆ ಸಾಲದ ಷರತ್ತುಗಳನ್ನು ಸಾಕಷ್ಟು ಸುಲಭಗೊಳಿಸಲು ಇರಾನ್ ತನ್ನಿಚ್ಛೆಯನ್ನು ವ್ಯಕ್ತಪಡಿಸಿದೆಯಲ್ಲದೆ ಹೆಚ್ಚಿನ ದಶಲಕ್ಷ ಟನ್ ಎಣ್ಣೆ ಸರಬರಾಜಿಗೆ ಪಾವತಿ ಮುಂದೂಡಿಕೆಗೂ ಒಪ್ಪಿದೆ.</p><p><strong>ಅರಸೀಕೆರೆ ಬಳಿ ಮರಕ್ಕೆ ಜೀಪ್ ಡಿಕ್ಕಿ: 9 ಜನರ ಸಾವು</strong></p><p>ಅರಸೀಕೆರೆ, ಮೇ 1– ಅರಸೀಕೆರೆಯಿಂದ ಬೈರಾಂಬುಧಿ ಗ್ರಾಮಕ್ಕೆ ಹೋಗುತ್ತಿದ್ದ ಅರಸೀಕೆರೆಯ ಜೀಪ್ ಒಂದು ನಿನ್ನೆ ಮಧ್ಯರಾತ್ರಿ ಸುಮಾರಿನಲ್ಲಿ ಇಲ್ಲಿಗೆ ಮೂರು ಮೈಲಿ ದೂರದಲ್ಲಿ ಮರವೊಂದಕ್ಕೆ ಡಿಕ್ಕಿ ಹೊಡೆದು ಜೀಪ್ನಲ್ಲಿದ್ದ 12 ಮಂದಿಯ ಪೈಕಿ 9 ಮಂದಿ ಸತ್ತರೆಂದೂ ಮೂವರು ಗಾಯಗೊಂಡರೆಂದೂ ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಚ್ಚು ಕಚ್ಚಾ ಎಣ್ಣೆಯ ಸರಬರಾಜಿಗೆ ಇರಾನ್ ಸಿದ್ಧ: ಸಾಲ ಸೌಲಭ್ಯ</strong></p><p>ಟೆಹರಾನ್, ಮೇ 1– ಫೆಬ್ರುವರಿ ತಿಂಗಳಲ್ಲಿ ಭಾರತ– ಇರಾನ್ ಜಂಟಿ ಆಯೋಗ ನಿರ್ಧರಿಸಿದ್ದ ಕಚ್ಚಾ ಎಣ್ಣೆ ಸರಬರಾಜು ಪ್ರಮಾಣಕ್ಕಿಂತಲೂ ಹೆಚ್ಚು ಪ್ರಮಾಣದ ಕಚ್ಚಾ ಎಣ್ಣೆಯ ಸರಬರಾಜಿಗೆ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಪ್ರಸಕ್ತ<br>ಮಾತುಕತೆಗಳಲ್ಲಿ ಒಪ್ಪಿಕೊಳ್ಳಲಾಗಿದೆ.</p><p>ಇದರಿಂದ ಮದರಾಸು ತೈಲ ಶುದ್ಧೀಕರಣಾ<br>ಗಾರವನ್ನು ಮತ್ತಷ್ಟು ವಿಸ್ತರಿಸಲು ಅನುಕೂಲ<br>ವಾಗುವುದು. 28 ಲಕ್ಷ ಟನ್ ಸಾಮರ್ಥ್ಯಕ್ಕೆ ಹೆಚ್ಚಿಸಲು ಜಂಟಿ ಆಯೋಗ ನಿರ್ಧರಿಸಿತ್ತು.</p><p>ಹತ್ತು ಲಕ್ಷ ಟನ್ ಕಚ್ಚಾ ಎಣ್ಣೆಗೆ ಸಾಲದ ಷರತ್ತುಗಳನ್ನು ಸಾಕಷ್ಟು ಸುಲಭಗೊಳಿಸಲು ಇರಾನ್ ತನ್ನಿಚ್ಛೆಯನ್ನು ವ್ಯಕ್ತಪಡಿಸಿದೆಯಲ್ಲದೆ ಹೆಚ್ಚಿನ ದಶಲಕ್ಷ ಟನ್ ಎಣ್ಣೆ ಸರಬರಾಜಿಗೆ ಪಾವತಿ ಮುಂದೂಡಿಕೆಗೂ ಒಪ್ಪಿದೆ.</p><p><strong>ಅರಸೀಕೆರೆ ಬಳಿ ಮರಕ್ಕೆ ಜೀಪ್ ಡಿಕ್ಕಿ: 9 ಜನರ ಸಾವು</strong></p><p>ಅರಸೀಕೆರೆ, ಮೇ 1– ಅರಸೀಕೆರೆಯಿಂದ ಬೈರಾಂಬುಧಿ ಗ್ರಾಮಕ್ಕೆ ಹೋಗುತ್ತಿದ್ದ ಅರಸೀಕೆರೆಯ ಜೀಪ್ ಒಂದು ನಿನ್ನೆ ಮಧ್ಯರಾತ್ರಿ ಸುಮಾರಿನಲ್ಲಿ ಇಲ್ಲಿಗೆ ಮೂರು ಮೈಲಿ ದೂರದಲ್ಲಿ ಮರವೊಂದಕ್ಕೆ ಡಿಕ್ಕಿ ಹೊಡೆದು ಜೀಪ್ನಲ್ಲಿದ್ದ 12 ಮಂದಿಯ ಪೈಕಿ 9 ಮಂದಿ ಸತ್ತರೆಂದೂ ಮೂವರು ಗಾಯಗೊಂಡರೆಂದೂ ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>