<p><strong>ಗಡಿಯಲ್ಲಿ ಪಾಕ್ ಸೇನೆ ‘ಅಸಾಧಾರಣ’ ಚಲನೆ, ವ್ಯೂಹಗಳ ರಚನೆ</strong></p><p>ನವದೆಹಲಿ, ಜುಲೈ 12– ಭಾರತ–ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನಿ ಸೇನಾ ತುಕಡಿಗಳು ಭಾರಿ ಪ್ರಮಾಣದ ಸೈನಿಕರ ಚಲನವಲನ ಹಾಗೂ ವ್ಯೂಹರಚನೆಯನ್ನು ಆರಂಭಿಸಿವೆಯೆಂದು ಅಧಿಕೃತ ವಕ್ತಾರ<br>ರೊಬ್ಬರು ತಿಳಿಸಿದರು.</p><p>ಇದನ್ನು ಭಾರತ ಗಡಿ ಬಳಿ ನಡೆಯುತ್ತಿರುವ ಅಸಾಧಾರಣ ಮಿಲಿಟರಿ ಚಟುವಟಿಕೆ ಎಂದು ವಕ್ತಾರರು ಕರೆದರು. ಭಾರತದಿಂದ ಬೆದರಿಕೆ ಇದೆಯೆಂಬ ಭಾವನೆಯನ್ನು ಪಾಕಿಸ್ತಾನದಲ್ಲುಂಟು ಮಾಡುವ ಯತ್ನದ ಅಂಗವಾಗಿ ಈ ಪ್ರಯತ್ನ ನಡೆದಿದೆಯೆಂದೂ ಅವರು ಹೇಳಿದರು.</p><p><strong>ಬಿಹಾರ ಚಳವಳಿಯಲ್ಲಿ ಪಾಲ್ಗೊಳ್ಳಲು ಸರ್ವೋದಯ ಕಾರ್ಯಕರ್ತರಿಗೆ ಸ್ವಾತಂತ್ರ್ಯ</strong></p><p>ವಾರ್ಧಾ, ಜುಲೈ 12– ಜಯಪ್ರಕಾಶ ನಾರಾಯಣ್ ಅವರು ಬಿಹಾರದಲ್ಲಿ ಆರಂಭಿಸಿರುವ ಚಳವಳಿ ಬಗ್ಗೆ ಅಖಿಲ ಭಾರತ ಸರ್ವಸೇವಾ ಸಂಘದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಆಚಾರ್ಯ ವಿನೋಬಾ ಭಾವೆಯವರ ಮಧ್ಯ<br>ಪ್ರವೇಶದಿಂದಾಗಿ ಕೊನೆಗೊಂಡಿತು.</p><p>ಸರ್ವೋದಯ ಕಾರ್ಯಕರ್ತರು ಚಳವಳಿಯಲ್ಲಿ ಭಾಗವಹಿಸುವುದಕ್ಕೆ ಭಾವೆ ಒಪ್ಪಿಗೆ ನೀಡಿದ್ದಾರೆ. ಚಳವಳಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರುವುದರಲ್ಲಿ ವಿಫಲರಾಗಿ ಸರ್ವ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ 17 ಮಂದಿ ರಾಜೀನಾಮೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಡಿಯಲ್ಲಿ ಪಾಕ್ ಸೇನೆ ‘ಅಸಾಧಾರಣ’ ಚಲನೆ, ವ್ಯೂಹಗಳ ರಚನೆ</strong></p><p>ನವದೆಹಲಿ, ಜುಲೈ 12– ಭಾರತ–ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನಿ ಸೇನಾ ತುಕಡಿಗಳು ಭಾರಿ ಪ್ರಮಾಣದ ಸೈನಿಕರ ಚಲನವಲನ ಹಾಗೂ ವ್ಯೂಹರಚನೆಯನ್ನು ಆರಂಭಿಸಿವೆಯೆಂದು ಅಧಿಕೃತ ವಕ್ತಾರ<br>ರೊಬ್ಬರು ತಿಳಿಸಿದರು.</p><p>ಇದನ್ನು ಭಾರತ ಗಡಿ ಬಳಿ ನಡೆಯುತ್ತಿರುವ ಅಸಾಧಾರಣ ಮಿಲಿಟರಿ ಚಟುವಟಿಕೆ ಎಂದು ವಕ್ತಾರರು ಕರೆದರು. ಭಾರತದಿಂದ ಬೆದರಿಕೆ ಇದೆಯೆಂಬ ಭಾವನೆಯನ್ನು ಪಾಕಿಸ್ತಾನದಲ್ಲುಂಟು ಮಾಡುವ ಯತ್ನದ ಅಂಗವಾಗಿ ಈ ಪ್ರಯತ್ನ ನಡೆದಿದೆಯೆಂದೂ ಅವರು ಹೇಳಿದರು.</p><p><strong>ಬಿಹಾರ ಚಳವಳಿಯಲ್ಲಿ ಪಾಲ್ಗೊಳ್ಳಲು ಸರ್ವೋದಯ ಕಾರ್ಯಕರ್ತರಿಗೆ ಸ್ವಾತಂತ್ರ್ಯ</strong></p><p>ವಾರ್ಧಾ, ಜುಲೈ 12– ಜಯಪ್ರಕಾಶ ನಾರಾಯಣ್ ಅವರು ಬಿಹಾರದಲ್ಲಿ ಆರಂಭಿಸಿರುವ ಚಳವಳಿ ಬಗ್ಗೆ ಅಖಿಲ ಭಾರತ ಸರ್ವಸೇವಾ ಸಂಘದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಆಚಾರ್ಯ ವಿನೋಬಾ ಭಾವೆಯವರ ಮಧ್ಯ<br>ಪ್ರವೇಶದಿಂದಾಗಿ ಕೊನೆಗೊಂಡಿತು.</p><p>ಸರ್ವೋದಯ ಕಾರ್ಯಕರ್ತರು ಚಳವಳಿಯಲ್ಲಿ ಭಾಗವಹಿಸುವುದಕ್ಕೆ ಭಾವೆ ಒಪ್ಪಿಗೆ ನೀಡಿದ್ದಾರೆ. ಚಳವಳಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರುವುದರಲ್ಲಿ ವಿಫಲರಾಗಿ ಸರ್ವ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ 17 ಮಂದಿ ರಾಜೀನಾಮೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>