ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಅದೇ ಮಾಮೂಲಿ: ವಸೂಲಿ ರೀತಿ ಬೇರೆ

Published 22 ಮಾರ್ಚ್ 2024, 23:58 IST
Last Updated 22 ಮಾರ್ಚ್ 2024, 23:58 IST
ಅಕ್ಷರ ಗಾತ್ರ

ಅದೇ ಮಾಮೂಲಿ: ವಸೂಲಿ ರೀತಿ ಬೇರೆ

ಬೆಂಗಳೂರು, ಮಾರ್ಚ್ 22– ಸಬ್ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಪತ್ರ ರಿಜಿಸ್ಟರ್ ಮಾಡಿಸುತ್ತಿದ್ದವರಿಂದ ಪಡೆಯುತ್ತಿದ್ದ ಮಾಮೂಲಿ ಈಗ ಕಚೇರಿಯ ಬಾಗಿಲ ಹೊರಗೇ ನಡೆಯುವ ವ್ಯವಹಾರ.

ಕಚೇರಿಯ ಮಾಮೂಲು ತಪ್ಪಿಸಲು ಸಚಿವರು ಕ್ರಮ ಕೈಗೊಳ್ಳಲಾರಂಭಿಸಿದ ಮೇಲೆ ಆಫೀಸನ್ನು ಬಿಟ್ಟು ವ್ಯವಹಾರವು ಪತ್ರ ಮಾರುವವರ ಹತ್ತಿರವೇ ನಡೆಯಲು ಶುರುವಾಗಿದೆ. ಜೊತೆಗೆ ಕೆಲಸ ಇಲ್ಲದೆ ಇರುವವರೂ ಅಲ್ಲಿ ಬಂದು ಮಾಮೂಲಿಯ ವಸೂಲಿಯಲ್ಲಿ ತೊಡಗುತ್ತಾರಂತೆ– ಇಂದು ಸಚಿವ ಎಚ್.ಹುಚ್ಚಮಾಸ್ತಿಗೌಡರು ವಿಧಾನ ಪರಿಷತ್ತಿನಲ್ಲಿ ಮಾಮೂಲಿ ವಸೂಲಿಯ ಸ್ಥಳ ಬದಲಾದ ಪರಿಸ್ಥಿತಿಯನ್ನು ವಿವರಿಸಿದರು.

‘ಮೊದಲು ಕಚೇರಿಗೆ ಹೋಗುವಾಗ ತಮ್ಮಲ್ಲಿದ್ದ ಹಣ ಘೋಷಿಸಿಕೊಳ್ಳಬೇಕು ಎಂದು ಸೂಚನೆ ಕೊಡಲಾಗಿತ್ತು. ಜೇಬಿನಲ್ಲಿ ಐದೇ ರೂಪಾಯಿ ಇದ್ದರೂ ನೂರು ರೂಪಾಯಿ ಇದೆ ಅಂತ ಘೋಷಿಸಿಕೊಳ್ಳಲು ಅದರಿಂದ ಅವಕಾಶವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT