<p>ಬೆಂಗಳೂರು, ಡಿ. 1– ‘ಅಳಿಸಿ ಹಾಕಿಸಿದವನು ನಾನು. ಅದು ನಿಜ. ನಿಜಲಿಂಗಪ್ಪನವರಿಗೆ ಗೊತ್ತಿಲ್ಲದಂತೆ ಅಳಿಸಿ ಹಾಕಿದೆನೆಂಬುದು ನಿಜವಲ್ಲ’.</p><p>ಮಾಜಿ ಲೋಕೋಪಯೋಗಿ ಸಚಿವ ಎಚ್.ಕೆ. ವೀರಣ್ಣಗೌಡರ ಪ್ರತಿಕ್ರಿಯೆ ಇದು.</p><p>ವಿಧಾನಸೌಧ ನಿರ್ಮಾಣ ಪೂರ್ತಿಯಾದುದು 1956ರಲ್ಲಿ. ನಿರ್ಮಾಣ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ವಿಧಾನಸೌಧದ ದ್ವಾರದಲ್ಲಿ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಕೆತ್ತಿಸಿದ್ದರು.</p><p>ನಿಜಲಿಂಗಪ್ಪನವರ ಮಂತ್ರಿಮಂಡಲ ಅಧಿಕಾರದಲ್ಲಿದ್ದಾಗ ಆ ಬರಹವನ್ನು ಅಳಿಸಿ ಹಾಕಿಸಲಾಯಿತು. ಆಗ ವೀರಣ್ಣಗೌಡರು ಲೋಕೋಪಯೋಗಿ ಸಚಿವರಾಗಿದ್ದರು.</p><p>ಅಳಿಸಿ ಹಾಕಿಸಿದಾಗ ಅದು ಸಾಕಷ್ಟು ವಾಗ್ವಾದಕ್ಕೆ ಎಡೆಕೊಟ್ಟಿತು.</p><p>ವಿಧಾನಸೌಧದ ಮೇಲೆ ಹನುಮಂತಯ್ಯನವರು ಬರೆಸಿದ ಸುಭಾಷಿತಗಳನ್ನು ಅಳಿಸಿಹಾಕಲು ತಾವು ಹೊಣೆಯಲ್ಲವೆಂದೂ, ತಮಗೆ ಗೊತ್ತಿಲ್ಲದ ಹಾಗೆ ಆಗಿನ ಲೋಕೋಪಯೋಗಿ ಸಚಿವ ಎಚ್.ಕೆ. ವೀರಣ್ಣಗೌಡರು ಆ ಕೆಲಸವನ್ನು ಮಾಡಿಸಿದರೆಂದೂ ನಿಜಲಿಂಗಪ್ಪನವರು ಮಡಿಕೇರಿಯಲ್ಲಿ ಹೇಳಿದರೆಂದು ಪತ್ರಿಕಾ ವರದಿ.</p><p>ವರದಿಗೆ ವೀರಣ್ಣಗೌಡರ ಪ್ರತಿಕ್ರಿಯೆ; ‘ಅಳಿಸಿ ಹಾಕುವ ವಿಷಯವನ್ನು ನಿಜಲಿಂಗಪ್ಪನವರ ಗಮನಕ್ಕೆ ಒಂದಲ್ಲ ಎರಡು ಬಾರಿ ತಂದಿದ್ದೆ’.</p><p>ಅಳಿಸಿ ಹಾಕಿದ ಹಿನ್ನೆಲೆಯನ್ನು ಗೌಡರು ಇಂದು ‘ಪ್ರಜಾವಾಣಿ’ಗೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು, ಡಿ. 1– ‘ಅಳಿಸಿ ಹಾಕಿಸಿದವನು ನಾನು. ಅದು ನಿಜ. ನಿಜಲಿಂಗಪ್ಪನವರಿಗೆ ಗೊತ್ತಿಲ್ಲದಂತೆ ಅಳಿಸಿ ಹಾಕಿದೆನೆಂಬುದು ನಿಜವಲ್ಲ’.</p><p>ಮಾಜಿ ಲೋಕೋಪಯೋಗಿ ಸಚಿವ ಎಚ್.ಕೆ. ವೀರಣ್ಣಗೌಡರ ಪ್ರತಿಕ್ರಿಯೆ ಇದು.</p><p>ವಿಧಾನಸೌಧ ನಿರ್ಮಾಣ ಪೂರ್ತಿಯಾದುದು 1956ರಲ್ಲಿ. ನಿರ್ಮಾಣ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ವಿಧಾನಸೌಧದ ದ್ವಾರದಲ್ಲಿ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಕೆತ್ತಿಸಿದ್ದರು.</p><p>ನಿಜಲಿಂಗಪ್ಪನವರ ಮಂತ್ರಿಮಂಡಲ ಅಧಿಕಾರದಲ್ಲಿದ್ದಾಗ ಆ ಬರಹವನ್ನು ಅಳಿಸಿ ಹಾಕಿಸಲಾಯಿತು. ಆಗ ವೀರಣ್ಣಗೌಡರು ಲೋಕೋಪಯೋಗಿ ಸಚಿವರಾಗಿದ್ದರು.</p><p>ಅಳಿಸಿ ಹಾಕಿಸಿದಾಗ ಅದು ಸಾಕಷ್ಟು ವಾಗ್ವಾದಕ್ಕೆ ಎಡೆಕೊಟ್ಟಿತು.</p><p>ವಿಧಾನಸೌಧದ ಮೇಲೆ ಹನುಮಂತಯ್ಯನವರು ಬರೆಸಿದ ಸುಭಾಷಿತಗಳನ್ನು ಅಳಿಸಿಹಾಕಲು ತಾವು ಹೊಣೆಯಲ್ಲವೆಂದೂ, ತಮಗೆ ಗೊತ್ತಿಲ್ಲದ ಹಾಗೆ ಆಗಿನ ಲೋಕೋಪಯೋಗಿ ಸಚಿವ ಎಚ್.ಕೆ. ವೀರಣ್ಣಗೌಡರು ಆ ಕೆಲಸವನ್ನು ಮಾಡಿಸಿದರೆಂದೂ ನಿಜಲಿಂಗಪ್ಪನವರು ಮಡಿಕೇರಿಯಲ್ಲಿ ಹೇಳಿದರೆಂದು ಪತ್ರಿಕಾ ವರದಿ.</p><p>ವರದಿಗೆ ವೀರಣ್ಣಗೌಡರ ಪ್ರತಿಕ್ರಿಯೆ; ‘ಅಳಿಸಿ ಹಾಕುವ ವಿಷಯವನ್ನು ನಿಜಲಿಂಗಪ್ಪನವರ ಗಮನಕ್ಕೆ ಒಂದಲ್ಲ ಎರಡು ಬಾರಿ ತಂದಿದ್ದೆ’.</p><p>ಅಳಿಸಿ ಹಾಕಿದ ಹಿನ್ನೆಲೆಯನ್ನು ಗೌಡರು ಇಂದು ‘ಪ್ರಜಾವಾಣಿ’ಗೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>