ನವದೆಹಲಿ, ನ. 24– ಯೋಗಿಗಳು ಮತ್ತು ಗುರುಗಳು ರಾಷ್ಟ್ರದಲ್ಲಿ ನಡೆಸುತ್ತಿರುವ ಗೂಢಚರ್ಯೆ ಚಟುವಟಿಕೆಗಳ ವಿರುದ್ಧ ಇಂದು ರಾಜ್ಯಸಭೆಯಲ್ಲಿ ಅನೇಕ ಸದಸ್ಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಅವರಿಗೆ ಹಣದ ಸೌಲಭ್ಯ ನೀಡುತ್ತಿರುವ ಮೂಲಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಇನ್ನೂ ಕೆಲವರು ಸಲಹೆ ಮಾಡಿದರು. ಇದಕ್ಕೆ ಒಲವು ವ್ಯಕ್ತಪಡಿಸಿದ ಗೃಹ ಶಾಖೆ ರಾಜ್ಯ ಸಚಿವ ಕೆ.ಸಿ. ಪಂತ್ ಅವರು, ಚಾಣಕ್ಯನ ಕಾಲದಿಂದಲೂ ಬೇಹುಗಾರಿಕೆಗಾಗಿ ಸಾಧುಗಳನ್ನು ಬಳಸಿಕೊಳ್ಳುತ್ತಿರುವ ಉದಾಹರಣೆ ನೀಡಿದರು.