<p><strong>ಸೆ.1ರಿಂದ ಹುಬ್ಬಳ್ಳಿ– ಧಾರವಾಡ ಗದಗ, ಬೆಳವಾಗಿ ನಗರಗಳಲ್ಲಿ ಅನೌಪಚಾರಿಕ ಪಡಿತರ ಜಾರಿಗೆ </strong></p>.<p>ಬೆಂಗಳೂರು, ಆ. 8– ಸೆಪ್ಟೆಂಬರ್ ಒಂದರಿಂದ, ಮೈಸೂರು, ಹುಬ್ಬಳ್ಳಿ– ಧಾರವಾಡ, ಗದಗ ಮತ್ತು ಬೆಳಗಾವಿ ಪಟ್ಟಣಗಳಲ್ಲಿ ಅನೌಪಚಾರಿಕ ಪಡಿತರ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. </p>.<p>ಇದಕ್ಕೆ ಸಂಬಂಧಿಸಿದೆ ಸಿದ್ಧತೆಗಳಲ್ಲ ಮುಗಿದಿದೆ ಎಂದು ಆಹಾರ ಮಂತ್ರಿ ಶ್ರೀ ಕೆ.ಎಚ್. ಪಟೇಲ್ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p>.<p>ಅವಕಾಶವಾದಂತೆಲ್ಲ 50,000ಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪಟ್ಟಣಗಳಿಗೆ ಪಡಿತರ ವಿಸ್ತರಿಸುತ್ತಾ ಹೋಗಬೇಕೆನ್ನುವುದು ಸರ್ಕಾರದ ನೀತಿಯಾಗಿದೆ. ಈಗಾಗಲೇ ಬೆಂಗಳೂರು, ಕೆ.ಜಿ.ಎಫ್ ಮತ್ತು ಮಂಗಳೂರುಗಳಲ್ಲಿ ಅನೌಪಚಾರಿಕ ಪಡಿತರ ಜಾರಿಯಲ್ಲಿದೆ.</p>.<p><strong>ಪ್ರವಾಹ ಪೀಡಿತರಿಗೆ ತುರ್ತು ನೆರವು: ರಾಜ್ಯ ರೆಡ್ಕ್ರಾಸ್ ಪ್ರಯತ್ನ</strong></p>.<p>ಬೆಂಗಳೂರು, ಆ. 8– ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆಹಾವಳಿಯಿಂದ ನೊಂದವರಿಗೆ ನೀಡುವ ಸಲುವಾಗಿ ತುರ್ತಾಗಿ ಐದು ಸಾವಿರ ಕಂಳಿಗಳು, ಐದು ಟನ್ ಹಾಲಿನ ಪುಡಿ ಮತ್ತು ಒಂದು ಲಕ್ಷ ಅನ್ನಾಂಗ ಮಾತ್ರೆಗಳನ್ನು ರೆಡ್ಕ್ರಾಸ್ ಸೊಸೈಟಿಯ ಕರ್ನಾಟಕ ಶಾಖೆಯು ಆಗ್ರಹಪಡಿಸಿದೆ.</p>.<p>ನೆರೆಹಾವಳಿಗೆ ಸಿಕ್ಕಿದ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಹಿಂದಿರುಗಿದ ಶಾಖೆಯ ಉಪಾಧ್ಯಕ್ಷ ಕ್ಯಾ. ಕೆ. ತಿಮ್ಮಪ್ಪಯ್ಯ ಅವರು 20,000ಕ್ಕೂ ಹೆಚ್ಚು ಕುಟುಂಬಗಳು ನಿರ್ವಸತಿಗೊಂಡಿವೆ ಎಂದು ಅಂದಾಜು ಮಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೆ.1ರಿಂದ ಹುಬ್ಬಳ್ಳಿ– ಧಾರವಾಡ ಗದಗ, ಬೆಳವಾಗಿ ನಗರಗಳಲ್ಲಿ ಅನೌಪಚಾರಿಕ ಪಡಿತರ ಜಾರಿಗೆ </strong></p>.<p>ಬೆಂಗಳೂರು, ಆ. 8– ಸೆಪ್ಟೆಂಬರ್ ಒಂದರಿಂದ, ಮೈಸೂರು, ಹುಬ್ಬಳ್ಳಿ– ಧಾರವಾಡ, ಗದಗ ಮತ್ತು ಬೆಳಗಾವಿ ಪಟ್ಟಣಗಳಲ್ಲಿ ಅನೌಪಚಾರಿಕ ಪಡಿತರ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. </p>.<p>ಇದಕ್ಕೆ ಸಂಬಂಧಿಸಿದೆ ಸಿದ್ಧತೆಗಳಲ್ಲ ಮುಗಿದಿದೆ ಎಂದು ಆಹಾರ ಮಂತ್ರಿ ಶ್ರೀ ಕೆ.ಎಚ್. ಪಟೇಲ್ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p>.<p>ಅವಕಾಶವಾದಂತೆಲ್ಲ 50,000ಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪಟ್ಟಣಗಳಿಗೆ ಪಡಿತರ ವಿಸ್ತರಿಸುತ್ತಾ ಹೋಗಬೇಕೆನ್ನುವುದು ಸರ್ಕಾರದ ನೀತಿಯಾಗಿದೆ. ಈಗಾಗಲೇ ಬೆಂಗಳೂರು, ಕೆ.ಜಿ.ಎಫ್ ಮತ್ತು ಮಂಗಳೂರುಗಳಲ್ಲಿ ಅನೌಪಚಾರಿಕ ಪಡಿತರ ಜಾರಿಯಲ್ಲಿದೆ.</p>.<p><strong>ಪ್ರವಾಹ ಪೀಡಿತರಿಗೆ ತುರ್ತು ನೆರವು: ರಾಜ್ಯ ರೆಡ್ಕ್ರಾಸ್ ಪ್ರಯತ್ನ</strong></p>.<p>ಬೆಂಗಳೂರು, ಆ. 8– ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆಹಾವಳಿಯಿಂದ ನೊಂದವರಿಗೆ ನೀಡುವ ಸಲುವಾಗಿ ತುರ್ತಾಗಿ ಐದು ಸಾವಿರ ಕಂಳಿಗಳು, ಐದು ಟನ್ ಹಾಲಿನ ಪುಡಿ ಮತ್ತು ಒಂದು ಲಕ್ಷ ಅನ್ನಾಂಗ ಮಾತ್ರೆಗಳನ್ನು ರೆಡ್ಕ್ರಾಸ್ ಸೊಸೈಟಿಯ ಕರ್ನಾಟಕ ಶಾಖೆಯು ಆಗ್ರಹಪಡಿಸಿದೆ.</p>.<p>ನೆರೆಹಾವಳಿಗೆ ಸಿಕ್ಕಿದ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಹಿಂದಿರುಗಿದ ಶಾಖೆಯ ಉಪಾಧ್ಯಕ್ಷ ಕ್ಯಾ. ಕೆ. ತಿಮ್ಮಪ್ಪಯ್ಯ ಅವರು 20,000ಕ್ಕೂ ಹೆಚ್ಚು ಕುಟುಂಬಗಳು ನಿರ್ವಸತಿಗೊಂಡಿವೆ ಎಂದು ಅಂದಾಜು ಮಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>