<p><strong>ಆಡಳಿತ ಪ್ರಭುಗಳಿಂದ ಹಸಿದ ಜನತೆಯ ಅಲಕ್ಷ್ಯ</strong></p><p>ನವದೆಹಲಿ, ಸೆ. 30– ಆಹಾರ ರಂಗದಲ್ಲಿ ತೀವ್ರಗೊಂಡಿರುವ ಬಿಕ್ಕಟ್ಟಿನಿಂದಲೂ ಸಹ ಕೇಂದ್ರವಾಗಲಿ, ರಾಜ್ಯ ಸರ್ಕಾರಗಳಾಗಲಿ ವಿಚಲಿತಗೊಂಡಂತೆ ಕಾಣುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಅದರಲ್ಲೂ ವಿಶೇಷವಾಗಿ ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಒಳಜಗಳ ಮುಂತಾದವುಗಳಿಂದ ಇನ್ನೂ ಅಸ್ತವ್ಯಸ್ತ ಸ್ಥಿತಿಯಲ್ಲೇ ಇವೆ.</p> <p>ಹಸಿವಿನಿಂದ ಜನ ಸತ್ತಿರುವ ಪ್ರಕರಣಗಳ ವರದಿ ಬರುತ್ತಿದ್ದರೂ ಆ ರಾಜ್ಯಗಳು ಬೃಹತ್ ಪರಿಹಾರ ಕ್ರಮ ಕೈಗೊಂಡಿರುವ ಅಥವಾ ಸಾರ್ವಜನಿಕ ಹಂಚಿಕೆ ವ್ಯವಸ್ಥೆ ತೀವ್ರಗೊಳಿಸಿ ರುವ ಸೂಚನೆಗಳೇ ಕಂಡುಬರುತ್ತಿಲ್ಲ.</p> <p><strong>ಕಳ್ಳ ಸಾಗಣೆ ಚಟುವಟಿಕೆ ಪಶ್ಚಿಮದಿಂದ ಪೂರ್ವ ಕರಾವಳಿಗೆ ಸ್ಥಳಾಂತರ</strong></p><p>ಮದ್ರಾಸ್, ಸೆ. 30– ರಾಷ್ಟ್ರದಲ್ಲಿ ಕಳ್ಳ ಸಾಗಣೆ ಚಟುವಟಿಕೆಗಳು ನಾನಾ ಕಾರಣಗಳಿಂದ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಗೆ ಸ್ಥಳಾಂತರಗೊಳ್ಳಬಹುದು.</p> <p>ಚಿನ್ನದ ಬೆಲೆ ಏರುತ್ತಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಪ್ರಮಾಣ ಕುಗ್ಗುತ್ತಿರುವುದರಿಂದ ಚಿನ್ನಕ್ಕಿಂತ ಜವಳಿಯಲ್ಲಿ ಕಳ್ಳ ಸಾಗಣೆ ಹೆಚ್ಚಾಗುವ ನಿರೀಕ್ಷೆಯೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಡಳಿತ ಪ್ರಭುಗಳಿಂದ ಹಸಿದ ಜನತೆಯ ಅಲಕ್ಷ್ಯ</strong></p><p>ನವದೆಹಲಿ, ಸೆ. 30– ಆಹಾರ ರಂಗದಲ್ಲಿ ತೀವ್ರಗೊಂಡಿರುವ ಬಿಕ್ಕಟ್ಟಿನಿಂದಲೂ ಸಹ ಕೇಂದ್ರವಾಗಲಿ, ರಾಜ್ಯ ಸರ್ಕಾರಗಳಾಗಲಿ ವಿಚಲಿತಗೊಂಡಂತೆ ಕಾಣುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಅದರಲ್ಲೂ ವಿಶೇಷವಾಗಿ ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಒಳಜಗಳ ಮುಂತಾದವುಗಳಿಂದ ಇನ್ನೂ ಅಸ್ತವ್ಯಸ್ತ ಸ್ಥಿತಿಯಲ್ಲೇ ಇವೆ.</p> <p>ಹಸಿವಿನಿಂದ ಜನ ಸತ್ತಿರುವ ಪ್ರಕರಣಗಳ ವರದಿ ಬರುತ್ತಿದ್ದರೂ ಆ ರಾಜ್ಯಗಳು ಬೃಹತ್ ಪರಿಹಾರ ಕ್ರಮ ಕೈಗೊಂಡಿರುವ ಅಥವಾ ಸಾರ್ವಜನಿಕ ಹಂಚಿಕೆ ವ್ಯವಸ್ಥೆ ತೀವ್ರಗೊಳಿಸಿ ರುವ ಸೂಚನೆಗಳೇ ಕಂಡುಬರುತ್ತಿಲ್ಲ.</p> <p><strong>ಕಳ್ಳ ಸಾಗಣೆ ಚಟುವಟಿಕೆ ಪಶ್ಚಿಮದಿಂದ ಪೂರ್ವ ಕರಾವಳಿಗೆ ಸ್ಥಳಾಂತರ</strong></p><p>ಮದ್ರಾಸ್, ಸೆ. 30– ರಾಷ್ಟ್ರದಲ್ಲಿ ಕಳ್ಳ ಸಾಗಣೆ ಚಟುವಟಿಕೆಗಳು ನಾನಾ ಕಾರಣಗಳಿಂದ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಗೆ ಸ್ಥಳಾಂತರಗೊಳ್ಳಬಹುದು.</p> <p>ಚಿನ್ನದ ಬೆಲೆ ಏರುತ್ತಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಪ್ರಮಾಣ ಕುಗ್ಗುತ್ತಿರುವುದರಿಂದ ಚಿನ್ನಕ್ಕಿಂತ ಜವಳಿಯಲ್ಲಿ ಕಳ್ಳ ಸಾಗಣೆ ಹೆಚ್ಚಾಗುವ ನಿರೀಕ್ಷೆಯೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>