ಮೈಸೂರು, ಆ.5– ‘ಮುಂದಿನ ವರ್ಷದ ಆಗಸ್ಟ್ 15ರ ಒಳಗೆ ಕನ್ನಡ ಭಾಷೆ ವಿಧಾನ
ಸೌಧದ ಎತ್ತರದ ಮೆಟ್ಟಿಲುಗಳನ್ನು ಏರುವ ಹಾಗಾಗಲಿ. ಟಿಪ್ಪಣಿಗಾರರ ತಂಪುಕೋಣೆ
ಗಳಲ್ಲೂ ಸುತ್ತಾಡಲಿ. ಬೆರಳಚ್ಚಿನ ಯಂತ್ರಗಳಿಂದ ಕನ್ನಡ ಸುಸ್ವರ ಕೇಳಿಬರಲಿ. ನ್ಯಾಯಾಲಯ, ವಿಶ್ವವಿದ್ಯಾನಿಲಯಗಳಲ್ಲೂ ಇದರದೇ ಸಂಭ್ರಮ ಮೆರೆಯಲಿ’ ಎಂದು ಪ್ರೋ ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ) ಅವರು ಅಪೇಕ್ಷಿಸಿದರು.