<p>ಕೋಮುಗಲಭೆ ಹತ್ತಿಕ್ಕಲು ಜಾತ್ಯತೀತ ಪಕ್ಷಗಳ ಸಹಕಾರಕ್ಕೆ ಚವಾಣ್ ಕರೆ</p>.<p><strong>ನವದೆಹಲಿ, ಮೇ 12– </strong>ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸಂಭವಿಸಿದಂಥ ಕೋಮುಗಲಭೆಗಳನ್ನು ಹತ್ತಿಕ್ಕುವುದಕ್ಕಾಗಿ ಎಲ್ಲ ಪ್ರಜಾಸತ್ತಾತ್ಮಕ ಜಾತ್ಯತೀತ ಪಕ್ಷಗಳ ಸಹಕಾರವನ್ನು ಕೇಂದ್ರ ಗೃಹ ಮಂತ್ರಿ ಶ್ರೀ ವೈ.ಬಿ.ಚವಾಣ್ ಅವರು ಇಂದು ಕೋರಿದರು.</p>.<p>ಮಹಾರಾಷ್ಟ್ರದಲ್ಲಿ ಸಂಭವಿಸಿದ ಕೋಮುಗಲಭೆ ಬಗ್ಗೆ ನಿನ್ನೆ ಲೋಕಸಭೆಯಲ್ಲಿ ತಾವು ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ಕೇಳಿದ ಸದಸ್ಯರಿಗೆ ಉತ್ತರ ಕೊಡುತ್ತಿದ್ದ ಚವಾಣ್ ಅವರು ಮುಸ್ಲಿಂ ಕುಟುಂಬಗಳ ಮೇಲೆ ಅಮಾನುಷ ಹಲ್ಲೆ ನಡೆಯಿತೆಂಬುದು ವಾಸ್ತವಿಕ ಸಂಗತಿ ಎಂದರು.</p>.<p><strong>ವಾರ, ಚಿನ್ನ ಅರಿಯದ ಜನಾಂಗ</strong></p>.<p><strong>ಹೈದರಾಬಾದ್, ಮೇ 12– </strong>ಅಂಡಮಾನ್ ದ್ವೀಪದಲ್ಲಿ ಪುಟ್ಟದೊಂದು ಗುಂಪಿದೆ. ಈ ಗುಂಪು ‘ಓಂಗ್’ ಜನಾಂಗಕ್ಕೆ ಸೇರಿದ್ದು. ಈ ಜನಾಂಗದಲ್ಲಿ ಈಗಿರುವುದು ಕೇವಲ 129 ಜನ. ನಶಿಸಿಹೋಗುತ್ತಿರುವ ಜನಾಂಗವಿದು.</p>.<p>ಈ ಜನಾಂಗಕ್ಕೆ ಕಾಲ, ದೂರಗಳ ಅಳತೆಯ ಅರಿವಿಲ್ಲ. ಚಿನ್ನವನ್ನು ಕಂಡರಿಯದ ಜನ. ಪೌಷ್ಟಿಕಾಂಶ ರಾಷ್ಟ್ರೀಯ ಸಂಸ್ಥೆಯ ತಂಡವೊಂದು ಈ ಜನಾಂಗದ ಬಗ್ಗೆ ಸಮೀಕ್ಷೆ ನಡೆಸಿದೆ. ‘ಓಂಗ್’ ಜನಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಪೌಷ್ಟಿಕಾಂಶಗಳ ಕೊರತೆ ಕಾರಣವಲ್ಲವೆಂದು ಇದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಮುಗಲಭೆ ಹತ್ತಿಕ್ಕಲು ಜಾತ್ಯತೀತ ಪಕ್ಷಗಳ ಸಹಕಾರಕ್ಕೆ ಚವಾಣ್ ಕರೆ</p>.<p><strong>ನವದೆಹಲಿ, ಮೇ 12– </strong>ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸಂಭವಿಸಿದಂಥ ಕೋಮುಗಲಭೆಗಳನ್ನು ಹತ್ತಿಕ್ಕುವುದಕ್ಕಾಗಿ ಎಲ್ಲ ಪ್ರಜಾಸತ್ತಾತ್ಮಕ ಜಾತ್ಯತೀತ ಪಕ್ಷಗಳ ಸಹಕಾರವನ್ನು ಕೇಂದ್ರ ಗೃಹ ಮಂತ್ರಿ ಶ್ರೀ ವೈ.ಬಿ.ಚವಾಣ್ ಅವರು ಇಂದು ಕೋರಿದರು.</p>.<p>ಮಹಾರಾಷ್ಟ್ರದಲ್ಲಿ ಸಂಭವಿಸಿದ ಕೋಮುಗಲಭೆ ಬಗ್ಗೆ ನಿನ್ನೆ ಲೋಕಸಭೆಯಲ್ಲಿ ತಾವು ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ಕೇಳಿದ ಸದಸ್ಯರಿಗೆ ಉತ್ತರ ಕೊಡುತ್ತಿದ್ದ ಚವಾಣ್ ಅವರು ಮುಸ್ಲಿಂ ಕುಟುಂಬಗಳ ಮೇಲೆ ಅಮಾನುಷ ಹಲ್ಲೆ ನಡೆಯಿತೆಂಬುದು ವಾಸ್ತವಿಕ ಸಂಗತಿ ಎಂದರು.</p>.<p><strong>ವಾರ, ಚಿನ್ನ ಅರಿಯದ ಜನಾಂಗ</strong></p>.<p><strong>ಹೈದರಾಬಾದ್, ಮೇ 12– </strong>ಅಂಡಮಾನ್ ದ್ವೀಪದಲ್ಲಿ ಪುಟ್ಟದೊಂದು ಗುಂಪಿದೆ. ಈ ಗುಂಪು ‘ಓಂಗ್’ ಜನಾಂಗಕ್ಕೆ ಸೇರಿದ್ದು. ಈ ಜನಾಂಗದಲ್ಲಿ ಈಗಿರುವುದು ಕೇವಲ 129 ಜನ. ನಶಿಸಿಹೋಗುತ್ತಿರುವ ಜನಾಂಗವಿದು.</p>.<p>ಈ ಜನಾಂಗಕ್ಕೆ ಕಾಲ, ದೂರಗಳ ಅಳತೆಯ ಅರಿವಿಲ್ಲ. ಚಿನ್ನವನ್ನು ಕಂಡರಿಯದ ಜನ. ಪೌಷ್ಟಿಕಾಂಶ ರಾಷ್ಟ್ರೀಯ ಸಂಸ್ಥೆಯ ತಂಡವೊಂದು ಈ ಜನಾಂಗದ ಬಗ್ಗೆ ಸಮೀಕ್ಷೆ ನಡೆಸಿದೆ. ‘ಓಂಗ್’ ಜನಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಪೌಷ್ಟಿಕಾಂಶಗಳ ಕೊರತೆ ಕಾರಣವಲ್ಲವೆಂದು ಇದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>