‘ಪರಿಶಿಷ್ಟ ವರ್ಗಗಳ ಪಟ್ಟಿ ತಯಾರಿಕೆಯಲ್ಲಿ ಧರ್ಮದ ಪ್ರಸ್ತಾಪ ಬೇಡ’
ನವದೆಹಲಿ, ನ. 23– ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳಲ್ಲಿ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ವರ್ಗಗಳು ಮತ್ತು ಗುಡ್ಡಗಾಡು ಜನರ ಮರುಪಟ್ಟಿ ಮಾಡುವಾಗ ಧರ್ಮದ ವಿಷಯವನ್ನು ಪ್ರಸ್ತಾಪಿಸುವುದರಿಂದ ರಾಷ್ಟ್ರದ ಭದ್ರತೆ ಹಾಗೂ ಏಕತೆಗೆ ಅಪಾಯ ಉಂಟಾಗುತ್ತದೆಂದು ಸರ್ಕಾರದ ಸಚಿವರೊಬ್ಬರು ಇಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.