<p><strong>ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ</strong></p>.<p>ನವದೆಹಲಿ, ಮಾರ್ಚ್ 28– ಮಣಿಪುರದ ಆಡಳಿತವನ್ನು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ವಹಿಸಿಕೊಂಡರು.</p>.<p>ಮಣಿಪುರದ ರಾಜ್ಯಪಾಲ ಶ್ರೀ ಬಿ.ಕೆ. ನೆಹರೂ ಅವರ ಶಿಫಾರಸಿನಂತೆ ವಿಧಾನ ಸಭೆಯನ್ನು ಸಸ್ಪೆನ್ಷನ್ನಲ್ಲಿಡುವುದರ ಬದಲು ಅದನ್ನು ರಾಷ್ಟ್ರಪತಿ ಅವರು ವಿಸರ್ಜಿಸಿದರು.</p>.<p>ರಾಷ್ಟ್ರಪತಿ ಆಡಳಿತ ಜಾರಿಗೆ ಬರುವಂತೆ ಕೇಂದ್ರ ಸಚಿವ ಸಂಪುಟ ಈ ಬೆಳಿಗ್ಗೆ ನಿರ್ಧರಿಸಿದ ತತ್ಕ್ಷಣವೇ ರಾಷ್ಟ್ರಪತಿ ಅವರು ಆಡಳಿತ ವಹಿಸಿಕೊಳ್ಳುವ ಬಗ್ಗೆ ಸಂವಿಧಾನದ 356ನೇ ವಿಧಿ ಮೇರೆಗೆ ಘೋಷಣೆ ಹೊರಡಿಸಿದರು.</p>.<p><strong>ಡಿ.ವಿ.ಜಿ.ಗೆ ಲಘು ಹೃದಯಾಘಾತ</strong></p>.<p>ಬೆಂಗಳೂರು, ಮಾರ್ಚ್ 28– ಸುಪ್ರಸಿದ್ಧ ಸಾಹಿತಿ ಡಾ|| ಡಿ.ವಿ.ಗುಂಡಪ್ಪ ಅವರು ಕಳೆದ ಎರಡು ದಿನಗಳ ಹಿಂದೆ ಮತ್ತೆ ಲ್ಯಾಂಗ್ಪೋರ್ಡ್ ರಸ್ತೆಯಲ್ಲಿರುವ ರಿಪಬ್ಲಿಕ್ ನರ್ಸಿಂಗ್ ಹೋಮನ್ನು ಸೇರಿದ್ದಾರೆ.</p>.<p>ಲಘು ಹೃದಯಾಘಾತ ಕಾರಣ ಚಿಕಿತ್ಸೆ ಪಡೆಯುತ್ತಿರುವ ಶ್ರೀಯುತರ ಸ್ಥಿತಿ ಈಗ ಉತ್ತಮಗೊಂಡಿದೆ.</p>.<p>ಡಾ|| ಗುಂಡಪ್ಪ ಅವರು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದು ತಮ್ಮ ವೃದ್ಧಾಪ್ಯದಲ್ಲಿ ತಮಗೆ ವಾಹನಗಳ ಹಾರನ್ಗಳಿಂದ ತೊಂದರೆಯಾಗಿದೆಯೆಂದು ತಿಸಿದ್ದಾರೆಂದೂ ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ</strong></p>.<p>ನವದೆಹಲಿ, ಮಾರ್ಚ್ 28– ಮಣಿಪುರದ ಆಡಳಿತವನ್ನು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ವಹಿಸಿಕೊಂಡರು.</p>.<p>ಮಣಿಪುರದ ರಾಜ್ಯಪಾಲ ಶ್ರೀ ಬಿ.ಕೆ. ನೆಹರೂ ಅವರ ಶಿಫಾರಸಿನಂತೆ ವಿಧಾನ ಸಭೆಯನ್ನು ಸಸ್ಪೆನ್ಷನ್ನಲ್ಲಿಡುವುದರ ಬದಲು ಅದನ್ನು ರಾಷ್ಟ್ರಪತಿ ಅವರು ವಿಸರ್ಜಿಸಿದರು.</p>.<p>ರಾಷ್ಟ್ರಪತಿ ಆಡಳಿತ ಜಾರಿಗೆ ಬರುವಂತೆ ಕೇಂದ್ರ ಸಚಿವ ಸಂಪುಟ ಈ ಬೆಳಿಗ್ಗೆ ನಿರ್ಧರಿಸಿದ ತತ್ಕ್ಷಣವೇ ರಾಷ್ಟ್ರಪತಿ ಅವರು ಆಡಳಿತ ವಹಿಸಿಕೊಳ್ಳುವ ಬಗ್ಗೆ ಸಂವಿಧಾನದ 356ನೇ ವಿಧಿ ಮೇರೆಗೆ ಘೋಷಣೆ ಹೊರಡಿಸಿದರು.</p>.<p><strong>ಡಿ.ವಿ.ಜಿ.ಗೆ ಲಘು ಹೃದಯಾಘಾತ</strong></p>.<p>ಬೆಂಗಳೂರು, ಮಾರ್ಚ್ 28– ಸುಪ್ರಸಿದ್ಧ ಸಾಹಿತಿ ಡಾ|| ಡಿ.ವಿ.ಗುಂಡಪ್ಪ ಅವರು ಕಳೆದ ಎರಡು ದಿನಗಳ ಹಿಂದೆ ಮತ್ತೆ ಲ್ಯಾಂಗ್ಪೋರ್ಡ್ ರಸ್ತೆಯಲ್ಲಿರುವ ರಿಪಬ್ಲಿಕ್ ನರ್ಸಿಂಗ್ ಹೋಮನ್ನು ಸೇರಿದ್ದಾರೆ.</p>.<p>ಲಘು ಹೃದಯಾಘಾತ ಕಾರಣ ಚಿಕಿತ್ಸೆ ಪಡೆಯುತ್ತಿರುವ ಶ್ರೀಯುತರ ಸ್ಥಿತಿ ಈಗ ಉತ್ತಮಗೊಂಡಿದೆ.</p>.<p>ಡಾ|| ಗುಂಡಪ್ಪ ಅವರು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದು ತಮ್ಮ ವೃದ್ಧಾಪ್ಯದಲ್ಲಿ ತಮಗೆ ವಾಹನಗಳ ಹಾರನ್ಗಳಿಂದ ತೊಂದರೆಯಾಗಿದೆಯೆಂದು ತಿಸಿದ್ದಾರೆಂದೂ ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>