<p>l→ಪ್ರಧಾನಿ ಹತ್ಯೆ ಯತ್ನದಲ್ಲಿ<br />ಸಿ.ಐ.ಎ. ಕೈವಾಡ ಕುರಿತು<br />ಸರ್ಕಾರಿ ಹೇಳಿಕೆಗೆ ಆಗ್ರಹ</p>.<p>ನವದೆಹಲಿ, ಡಿಸೆಂಬರ್ 4– ಕಳೆದೆರಡು ವರ್ಷಗಳಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ನಡೆದ ಮೂರು–ನಾಲ್ಕು ಯತ್ನಗಳಲ್ಲಿ ಅಮೆರಿಕದ ಕೇಂದ್ರ ಗೂಢಚರ್ಯೆ ಸಂಸ್ಥೆಯ (ಸಿ.ಐ.ಎ) ಕೈವಾಡವಿತ್ತೆಂಬ ಕುವೈತ್ ವರದಿಗಳ ಬಗೆಗೆ ರಾಜ್ಯಸಭೆ ಸದಸ್ಯರು ಇಂದು ತೀವ್ರ ಆತಂಕ ವ್ಯಕ್ತಪಡಿಸಿದರು.</p>.<p>‘ವಿಶ್ವ ತತ್ತರಿಸುವಂತಹ’ ಆ ವರದಿ ಕುರಿತು ಹೇಳಿಕೆ ನೀಡಬೇಕೆಂದು ಎಲ್ಲ ವಿಭಾಗದ ಸದಸ್ಯರೂ ಸರ್ಕಾರವನ್ನು ಒತ್ತಾಯ<br />ಪಡಿಸಿದರು. ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ<br />ಓಂ ಮೆಹ್ತಾ ಅವರು, ವರದಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಕ್ಕಾಗಿ ಸದಸ್ಯರನ್ನು ವಂದಿಸಿದರು.</p>.<p>l 5ನೇ ಯೋಜನೆ: ನೀರಾವರಿಗೆ ಆದ್ಯತೆ</p>.<p>ಬೆಂಗಳೂರು, ಡಿಸೆಂಬರ್ 4– ರಾಜ್ಯದ ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿದರು.</p>.<p>ಎಂ.ಎಸ್. ಕೃಷ್ಣನ್ (ಸಿ.ಪಿ.ಐ) ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ ವಿವರವಾದ ಐದನೇ ಪಂಚವಾರ್ಷಿಕ ಯೋಜನೆಯನ್ನು ತಯಾರಿಸುವುದಕ್ಕೆ ಆಧಾರರೂಪವಾಗಿ ಮಾರ್ಗದರ್ಶಕ ಯೋಜನೆಯೊಂದನ್ನು ತಯಾರಿಸಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>l→ಪ್ರಧಾನಿ ಹತ್ಯೆ ಯತ್ನದಲ್ಲಿ<br />ಸಿ.ಐ.ಎ. ಕೈವಾಡ ಕುರಿತು<br />ಸರ್ಕಾರಿ ಹೇಳಿಕೆಗೆ ಆಗ್ರಹ</p>.<p>ನವದೆಹಲಿ, ಡಿಸೆಂಬರ್ 4– ಕಳೆದೆರಡು ವರ್ಷಗಳಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ನಡೆದ ಮೂರು–ನಾಲ್ಕು ಯತ್ನಗಳಲ್ಲಿ ಅಮೆರಿಕದ ಕೇಂದ್ರ ಗೂಢಚರ್ಯೆ ಸಂಸ್ಥೆಯ (ಸಿ.ಐ.ಎ) ಕೈವಾಡವಿತ್ತೆಂಬ ಕುವೈತ್ ವರದಿಗಳ ಬಗೆಗೆ ರಾಜ್ಯಸಭೆ ಸದಸ್ಯರು ಇಂದು ತೀವ್ರ ಆತಂಕ ವ್ಯಕ್ತಪಡಿಸಿದರು.</p>.<p>‘ವಿಶ್ವ ತತ್ತರಿಸುವಂತಹ’ ಆ ವರದಿ ಕುರಿತು ಹೇಳಿಕೆ ನೀಡಬೇಕೆಂದು ಎಲ್ಲ ವಿಭಾಗದ ಸದಸ್ಯರೂ ಸರ್ಕಾರವನ್ನು ಒತ್ತಾಯ<br />ಪಡಿಸಿದರು. ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ<br />ಓಂ ಮೆಹ್ತಾ ಅವರು, ವರದಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಕ್ಕಾಗಿ ಸದಸ್ಯರನ್ನು ವಂದಿಸಿದರು.</p>.<p>l 5ನೇ ಯೋಜನೆ: ನೀರಾವರಿಗೆ ಆದ್ಯತೆ</p>.<p>ಬೆಂಗಳೂರು, ಡಿಸೆಂಬರ್ 4– ರಾಜ್ಯದ ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿದರು.</p>.<p>ಎಂ.ಎಸ್. ಕೃಷ್ಣನ್ (ಸಿ.ಪಿ.ಐ) ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ ವಿವರವಾದ ಐದನೇ ಪಂಚವಾರ್ಷಿಕ ಯೋಜನೆಯನ್ನು ತಯಾರಿಸುವುದಕ್ಕೆ ಆಧಾರರೂಪವಾಗಿ ಮಾರ್ಗದರ್ಶಕ ಯೋಜನೆಯೊಂದನ್ನು ತಯಾರಿಸಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>