<p><strong>ಪಂಚಾಯಿತಿಗೆ ಜಲವಿವಾದ ಒಪ್ಪಿಸಿದರೆ ಅನಿಷ್ಟ ಪರಿಣಾಮ: ಕೇಂದ್ರಕ್ಕೆ ಎಚ್ಚರಿಕೆ</strong></p>.<p>ಬೆಂಗಳೂರು, ಅ. 28– ಅನೇಕ ವರ್ಷಗಳಿಂದ ತನ್ನ ಮುಂದಿರುವ ಕಾವೇರಿ ಯೋಜನೆಗಳಿಗೆ ಮಂಜೂರಾತಿ ನೀಡದೆ, ಕಾವೇರಿ ನೀರು ವಿವಾದವನ್ನು ಕೇಂದ್ರ ಸರ್ಕಾರ ಪಂಚಾಯಿತಿಗೆ ಒಪ್ಪಿಸಿದಲ್ಲಿ, ‘ಅನಿಷ್ಟ ಪರಿಣಾಮಗಳಿಗೆ’ ಅವಕಾಶವಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಲ್ಲಿ ಇಂದು ಎಚ್ಚರಿಕೆ ನೀಡಿದರು.</p>.<p>‘ಕೇಂದ್ರ ಸರ್ಕಾರ ತನ್ನ ತೀರ್ಮಾನವನ್ನು ಪ್ರಕಟಿಸಲಿ. ನಾನು ನನ್ನ ಕಾರ್ಯಕ್ರಮವನ್ನು ಪ್ರಕಟಿಸುತ್ತೇನೆ’ ಎಂದು ಘೋಷಿಸಿದರು.</p>.<p><strong>17 ಮಂದಿಗೆ ರಾಜ್ಯ ಪ್ರಶಸ್ತಿ</strong></p>.<p>ಬೆಂಗಳೂರು, ಅ. 28– ಈ ವರ್ಷದ ರಾಜ್ಯೋತ್ಸವದಂದು ಹದಿನೇಳು ಮಂದಿಗೆ ರಾಜ್ಯ ಪ್ರಶಸ್ತಿ ನೀಡಲಾಗುವುದು.</p>.<p>ಪ್ರಶಸ್ತಿಗೆ ಸಮಾಜ ಸೇವಕರು, ಸಾಹಿತಿಗಳು, ಕಲಾವಿದರು, ಪ್ರಮುಖ ಸರ್ಕಾರಿ ಅಧಿಕಾರಿಗಳನ್ನು ಆರಿಸಲಾಗಿದೆ. ಸರ್ವಶ್ರೀ ಪಿ.ಐ. ಜೋಸೆಫ್, ಎಚ್.ವಿ. ನಾರಾಯಣರಾವ್, ಶ್ರೀಮತಿ ಗಂಗೂಬಾಯಿ ಹಾನಗಲ್, ಜಿ.ಪಿ ರಾಜರತ್ನಂ, ಬಿ.ಆರ್.ಪಂತುಲು, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಪಂಡಿತ ಪುಟ್ಟರಾಜ ಗವಾಯಿ ಮೊದಲಾದವರು ಇವರಲ್ಲಿ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಂಚಾಯಿತಿಗೆ ಜಲವಿವಾದ ಒಪ್ಪಿಸಿದರೆ ಅನಿಷ್ಟ ಪರಿಣಾಮ: ಕೇಂದ್ರಕ್ಕೆ ಎಚ್ಚರಿಕೆ</strong></p>.<p>ಬೆಂಗಳೂರು, ಅ. 28– ಅನೇಕ ವರ್ಷಗಳಿಂದ ತನ್ನ ಮುಂದಿರುವ ಕಾವೇರಿ ಯೋಜನೆಗಳಿಗೆ ಮಂಜೂರಾತಿ ನೀಡದೆ, ಕಾವೇರಿ ನೀರು ವಿವಾದವನ್ನು ಕೇಂದ್ರ ಸರ್ಕಾರ ಪಂಚಾಯಿತಿಗೆ ಒಪ್ಪಿಸಿದಲ್ಲಿ, ‘ಅನಿಷ್ಟ ಪರಿಣಾಮಗಳಿಗೆ’ ಅವಕಾಶವಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಲ್ಲಿ ಇಂದು ಎಚ್ಚರಿಕೆ ನೀಡಿದರು.</p>.<p>‘ಕೇಂದ್ರ ಸರ್ಕಾರ ತನ್ನ ತೀರ್ಮಾನವನ್ನು ಪ್ರಕಟಿಸಲಿ. ನಾನು ನನ್ನ ಕಾರ್ಯಕ್ರಮವನ್ನು ಪ್ರಕಟಿಸುತ್ತೇನೆ’ ಎಂದು ಘೋಷಿಸಿದರು.</p>.<p><strong>17 ಮಂದಿಗೆ ರಾಜ್ಯ ಪ್ರಶಸ್ತಿ</strong></p>.<p>ಬೆಂಗಳೂರು, ಅ. 28– ಈ ವರ್ಷದ ರಾಜ್ಯೋತ್ಸವದಂದು ಹದಿನೇಳು ಮಂದಿಗೆ ರಾಜ್ಯ ಪ್ರಶಸ್ತಿ ನೀಡಲಾಗುವುದು.</p>.<p>ಪ್ರಶಸ್ತಿಗೆ ಸಮಾಜ ಸೇವಕರು, ಸಾಹಿತಿಗಳು, ಕಲಾವಿದರು, ಪ್ರಮುಖ ಸರ್ಕಾರಿ ಅಧಿಕಾರಿಗಳನ್ನು ಆರಿಸಲಾಗಿದೆ. ಸರ್ವಶ್ರೀ ಪಿ.ಐ. ಜೋಸೆಫ್, ಎಚ್.ವಿ. ನಾರಾಯಣರಾವ್, ಶ್ರೀಮತಿ ಗಂಗೂಬಾಯಿ ಹಾನಗಲ್, ಜಿ.ಪಿ ರಾಜರತ್ನಂ, ಬಿ.ಆರ್.ಪಂತುಲು, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಪಂಡಿತ ಪುಟ್ಟರಾಜ ಗವಾಯಿ ಮೊದಲಾದವರು ಇವರಲ್ಲಿ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>