ಮಂಗಳೂರು, ನ.5 – ‘ಇಂದು ಪಟ್ಟಣಗಳಲ್ಲಿ ನಿರುದ್ಯೋಗ ಸಮಸ್ಯೆ ನಮ್ಮನ್ನು ಕಾಡುತ್ತಿದ್ದರೆ, ಹಳ್ಳಿಗಳಲ್ಲಿ ವರ್ಷದಲ್ಲಿ 3–4 ತಿಂಗಳಿಗಿಂತ ಹೆಚ್ಚು ದುಡಿಮೆಗೆ ಅವಕಾಶ ಇಲ್ಲ. ನಮಗೆ ಸಮಯದ ಅರಿವು ಅಗತ್ಯ. ಮಾನವ ಶಕ್ತಿಯ ನಷ್ಟ ಆಗದಂತೆ ಮುಂದಾಗಿ ಯೋಜನೆಗಳನ್ನು ಹಾಕಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಲ್ಲಿ ಹೇಳಿದರು.