<p><strong>ಮತ ಸ್ವಾತಂತ್ರ್ಯ ಬೇಕೆಂದು ಶಿವಪ್ಪ ನಿಯೋಗದ ಅಪೇಕ್ಷೆ</strong></p>.<p><strong>ನವದೆಹಲಿ, ಡಿ. 1– </strong>ಮಹಾಜನ್ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮಹಾರಾಷ್ಟ್ರ– ಮೈಸೂರು ಗಡಿ ವಿವಾದದ ಇತ್ಯರ್ಥಕ್ಕಾಗಿ ಸರ್ಕಾರವು ಸಂಸತ್ತಿನಲ್ಲಿ ಯಾವುದಾದರೂ ವಿಧೇಯಕ ಮಂಡಿಸಿದರೆ, ರಾಜಕೀಯ ಪಕ್ಷಗಳು ತಮ್ಮ ಸದಸ್ಯರಿಗೆ ಮತ ಸ್ವಾತಂತ್ರ್ಯ ನೀಡಬೇಕೆಂದು ಮೈಸೂರು ಶಾಸಕರ ಸರ್ವಪಕ್ಷ ನಿಯೋಗ ಬಯಸಿದೆ.</p>.<p>ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರೊಡನೆ ನಿಯೋಗ ನಿನ್ನೆ ನಡೆಸಿದ ಚರ್ಚೆಗಳ ಬಗೆಗೆ ಮೈಸೂರಿನ ಸಂಸತ್ ಸದಸ್ಯರಿಗೆ ಇಂದು ವಿವರ ಕೊಡುವಾಗ ನಿಯೋಗದ ನಾಯಕರಾದ ಶ್ರೀ ಎಸ್. ಶಿವಪ್ಪನವರು ಈ ವಿಷಯ ತಿಳಿಸಿದರು.</p>.<p><strong>ಅಣ್ವಸ್ತ್ರ ಸ್ಪರ್ಧೆ ನಿಲ್ಲಿಸಲು ಅಗ್ರ ರಾಷ್ಟ್ರಗಳಿಗೆ ರಾಜಕೀಯ ಸಮಿತಿ ಕರೆ</strong></p>.<p><strong>ವಿಶ್ವಸಂಸ್ಥೆ, ಡಿ. 1– </strong>ಅಣ್ವಸ್ತ್ರಗಳ ಸ್ಪರ್ಧೆಯನ್ನು ಕೂಡಲೇ ನಿಲ್ಲಿಸುವಂತೆ ಅಣ್ವಸ್ತ್ರ ಪಡೆದಿರುವ ರಾಷ್ಟ್ರಗಳನ್ನು ಒತ್ತಾಯಪಡಿಸಲು ಜನರಲ್ ಅಸೆಂಬ್ಲಿಯನ್ನು ಕೋರುವ ನಿರ್ಣಯವೊಂದನ್ನು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ರಾಜಕೀಯ ಸಮಿತಿಯು ನಿನ್ನೆ ಭಾರಿ ಬಹುಮತದಿಂದ ಅಂಗೀಕರಿಸಿತು.</p>.<p>ಭಾರತ ಮತ್ತಿತರ 14 ರಾಷ್ಟ್ರಗಳು ಮಂಡಿಸಿದ್ದ ಈ ನಿರ್ಣಯದಲ್ಲಿ ಅಣ್ವಸ್ತ್ರ ಸ್ಪರ್ಧೆ, ಅಣ್ವಸ್ತ್ರ ಪರೀಕ್ಷಾ ಸ್ಫೋಟಗಳೆಲ್ಲವನ್ನೂ ನಿಲ್ಲಿಸುವಂತೆ ಒತ್ತಾಯಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮತ ಸ್ವಾತಂತ್ರ್ಯ ಬೇಕೆಂದು ಶಿವಪ್ಪ ನಿಯೋಗದ ಅಪೇಕ್ಷೆ</strong></p>.<p><strong>ನವದೆಹಲಿ, ಡಿ. 1– </strong>ಮಹಾಜನ್ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮಹಾರಾಷ್ಟ್ರ– ಮೈಸೂರು ಗಡಿ ವಿವಾದದ ಇತ್ಯರ್ಥಕ್ಕಾಗಿ ಸರ್ಕಾರವು ಸಂಸತ್ತಿನಲ್ಲಿ ಯಾವುದಾದರೂ ವಿಧೇಯಕ ಮಂಡಿಸಿದರೆ, ರಾಜಕೀಯ ಪಕ್ಷಗಳು ತಮ್ಮ ಸದಸ್ಯರಿಗೆ ಮತ ಸ್ವಾತಂತ್ರ್ಯ ನೀಡಬೇಕೆಂದು ಮೈಸೂರು ಶಾಸಕರ ಸರ್ವಪಕ್ಷ ನಿಯೋಗ ಬಯಸಿದೆ.</p>.<p>ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರೊಡನೆ ನಿಯೋಗ ನಿನ್ನೆ ನಡೆಸಿದ ಚರ್ಚೆಗಳ ಬಗೆಗೆ ಮೈಸೂರಿನ ಸಂಸತ್ ಸದಸ್ಯರಿಗೆ ಇಂದು ವಿವರ ಕೊಡುವಾಗ ನಿಯೋಗದ ನಾಯಕರಾದ ಶ್ರೀ ಎಸ್. ಶಿವಪ್ಪನವರು ಈ ವಿಷಯ ತಿಳಿಸಿದರು.</p>.<p><strong>ಅಣ್ವಸ್ತ್ರ ಸ್ಪರ್ಧೆ ನಿಲ್ಲಿಸಲು ಅಗ್ರ ರಾಷ್ಟ್ರಗಳಿಗೆ ರಾಜಕೀಯ ಸಮಿತಿ ಕರೆ</strong></p>.<p><strong>ವಿಶ್ವಸಂಸ್ಥೆ, ಡಿ. 1– </strong>ಅಣ್ವಸ್ತ್ರಗಳ ಸ್ಪರ್ಧೆಯನ್ನು ಕೂಡಲೇ ನಿಲ್ಲಿಸುವಂತೆ ಅಣ್ವಸ್ತ್ರ ಪಡೆದಿರುವ ರಾಷ್ಟ್ರಗಳನ್ನು ಒತ್ತಾಯಪಡಿಸಲು ಜನರಲ್ ಅಸೆಂಬ್ಲಿಯನ್ನು ಕೋರುವ ನಿರ್ಣಯವೊಂದನ್ನು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ರಾಜಕೀಯ ಸಮಿತಿಯು ನಿನ್ನೆ ಭಾರಿ ಬಹುಮತದಿಂದ ಅಂಗೀಕರಿಸಿತು.</p>.<p>ಭಾರತ ಮತ್ತಿತರ 14 ರಾಷ್ಟ್ರಗಳು ಮಂಡಿಸಿದ್ದ ಈ ನಿರ್ಣಯದಲ್ಲಿ ಅಣ್ವಸ್ತ್ರ ಸ್ಪರ್ಧೆ, ಅಣ್ವಸ್ತ್ರ ಪರೀಕ್ಷಾ ಸ್ಫೋಟಗಳೆಲ್ಲವನ್ನೂ ನಿಲ್ಲಿಸುವಂತೆ ಒತ್ತಾಯಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>