ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಬುಧವಾರ, 2–12–1970

Last Updated 1 ಡಿಸೆಂಬರ್ 2020, 19:15 IST
ಅಕ್ಷರ ಗಾತ್ರ

ಮತ ಸ್ವಾತಂತ್ರ್ಯ ಬೇಕೆಂದು ಶಿವಪ್ಪ ನಿಯೋಗದ ಅಪೇಕ್ಷೆ

ನವದೆಹಲಿ, ಡಿ. 1– ಮಹಾಜನ್‌ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮಹಾರಾಷ್ಟ್ರ– ಮೈಸೂರು ಗಡಿ ವಿವಾದದ ಇತ್ಯರ್ಥಕ್ಕಾಗಿ ಸರ್ಕಾರವು ಸಂಸತ್ತಿನಲ್ಲಿ ಯಾವುದಾದರೂ ವಿಧೇಯಕ ಮಂಡಿಸಿದರೆ, ರಾಜಕೀಯ ಪಕ್ಷಗಳು ತಮ್ಮ ಸದಸ್ಯರಿಗೆ ಮತ ಸ್ವಾತಂತ್ರ್ಯ ನೀಡಬೇಕೆಂದು ಮೈಸೂರು ಶಾಸಕರ ಸರ್ವಪಕ್ಷ ನಿಯೋಗ ಬಯಸಿದೆ.

ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರೊಡನೆ ನಿಯೋಗ ನಿನ್ನೆ ನಡೆಸಿದ ಚರ್ಚೆಗಳ ಬಗೆಗೆ ಮೈಸೂರಿನ ಸಂಸತ್‌ ಸದಸ್ಯರಿಗೆ ಇಂದು ವಿವರ ಕೊಡುವಾಗ ನಿಯೋಗದ ನಾಯಕರಾದ ಶ್ರೀ ಎಸ್‌. ಶಿವಪ್ಪನವರು ಈ ವಿಷಯ ತಿಳಿಸಿದರು.

ಅಣ್ವಸ್ತ್ರ ಸ್ಪರ್ಧೆ ನಿಲ್ಲಿಸಲು ಅಗ್ರ ರಾಷ್ಟ್ರಗಳಿಗೆ ರಾಜಕೀಯ ಸಮಿತಿ ಕರೆ

ವಿಶ್ವಸಂಸ್ಥೆ, ಡಿ. 1– ಅಣ್ವಸ್ತ್ರಗಳ ಸ್ಪರ್ಧೆಯನ್ನು ಕೂಡಲೇ ನಿಲ್ಲಿಸುವಂತೆ ಅಣ್ವಸ್ತ್ರ ಪಡೆದಿರುವ ರಾಷ್ಟ್ರಗಳನ್ನು ಒತ್ತಾಯಪಡಿಸಲು ಜನರಲ್‌ ಅಸೆಂಬ್ಲಿಯನ್ನು ಕೋರುವ ನಿರ್ಣಯವೊಂದನ್ನು ವಿಶ್ವಸಂಸ್ಥೆ ಜನರಲ್‌ ಅಸೆಂಬ್ಲಿಯ ರಾಜಕೀಯ ಸಮಿತಿಯು ನಿನ್ನೆ ಭಾರಿ ಬಹುಮತದಿಂದ ಅಂಗೀಕರಿಸಿತು.

ಭಾರತ ಮತ್ತಿತರ 14 ರಾಷ್ಟ್ರಗಳು ಮಂಡಿಸಿದ್ದ ಈ ನಿರ್ಣಯದಲ್ಲಿ ಅಣ್ವಸ್ತ್ರ ಸ್ಪರ್ಧೆ, ಅಣ್ವಸ್ತ್ರ ಪರೀಕ್ಷಾ ಸ್ಫೋಟಗಳೆಲ್ಲವನ್ನೂ ನಿಲ್ಲಿಸುವಂತೆ ಒತ್ತಾಯಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT