<p><strong>ಎರಡೂವರೆ ಲಕ್ಷ ಮಂದಿ ಸರ್ಕಾರಿ ನೌಕರರಿಗೆ ಭತ್ಯೆಗಳ ಏರಿಕೆ ಮತ್ತಿತರ ಸೌಲಭ್ಯ</strong></p>.<p>ಬೆಂಗಳೂರು, ಜ. 18– ಇಂದು ಮಂತ್ರಿಮಂಡಲ ಕೈಗೊಂಡ ಕೆಲವು ತೀರ್ಮಾನಗಳ ಪರಿಣಾಮವಾಗಿ ರಾಜ್ಯ ಸರ್ಕಾರದ ಸುಮಾರು ಎರಡೂವರೆ ಲಕ್ಷ ಮಂದಿ ನೌಕರರು ಹೆಚ್ಚಿನ ಮನೆ ಬಾಡಿಗೆ ಭತ್ಯೆ, ಹೆಚ್ಚಿನ ದಿನಭತ್ಯೆ ಮತ್ತು ಪ್ರಯಾಣ ಭತ್ಯೆಯನ್ನು ಪಡೆಯಲಿದ್ದಾರೆ.</p>.<p>ಕಡಿಮೆ ಸಮಯದಲ್ಲಿ ಹೆಚ್ಚಿನ ಬಡ್ತಿಗಳೂ ಸಿಕ್ಕುವಂತೆ ವೇತನ ಸ್ಕೇಲುಗಳನ್ನು ಶಾಸ್ತ್ರೀಯಗೊಳಿಸಿರುವುದು, ‘ವೇತನ ಗೊತ್ತು ಮಾಡಿರುವುದು ಹೊರತು ಉಳಿದೆಲ್ಲ ಉದ್ದೇಶಗಳಿಗಾಗಿ’ತುಟ್ಟಿ ಭತ್ಯದ ಒಂದು ಭಾಗವನ್ನು ‘ಅಡಿಷನಲ್ ಮೂಲವೇತನ’ ಎಂದು ಲೆಕ್ಕ ಮಾಡುವುದು, ಇವು ನೌಕರರುಇಂದು ಪಡೆದ ಮತ್ತೆರಡು ಸೌಲಭ್ಯಗಳು. ಇದರ ಪರಿಣಾಮವಾಗಿ ಕನಿಷ್ಠ ಮೂಲವೇತನ 65 ರೂ.ನಿಂದ ನೂರು ರೂ. ಮೀರುತ್ತದೆ.</p>.<p><strong>ಕಾಂಗ್ರೆಸ್ನ ಜೆ.ಲಿಂಗಯ್ಯ ಮೇಯರ್, ಚಂದ್ರಶೇಖರನ್ ಉಪಮೇಯರ್</strong></p>.<p>ಬೆಂಗಳೂರು, ಜ. 18– ಸುಮಾರು 40 ವರ್ಷಗಳ ಹಿಂದೆ ನಾಲ್ಕಾಣೆ ದಿನಗೂಲಿಯ ಮೇಲೆ ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಸ್ವಾತಂತ್ರ್ಯ ಸಂಗ್ರಾಮ ಹಾಗೂ ಕಾರ್ಮಿಕ ಚಳವಳಿಯಲ್ಲಿ ನಿರಂತರವಾಗಿ ಭಾಗವಹಿಸಿರುವ ಕಾಂಗ್ರೆಸ್ನ ಶ್ರೀ ಜೆ. ಲಿಂಗಯ್ಯ ಅವರು ಇಂದು ನಗರದ ‘ಪ್ರಥಮ ಪ್ರಜೆ’ಯಾಗಿ ಹಾಗೂ ವಿ.ಎಂ. ಚಂದ್ರಶೇಖರನ್ ಅವರು ಉಪಮೇಯರ್ ಆಗಿ ಚುನಾಯಿತರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎರಡೂವರೆ ಲಕ್ಷ ಮಂದಿ ಸರ್ಕಾರಿ ನೌಕರರಿಗೆ ಭತ್ಯೆಗಳ ಏರಿಕೆ ಮತ್ತಿತರ ಸೌಲಭ್ಯ</strong></p>.<p>ಬೆಂಗಳೂರು, ಜ. 18– ಇಂದು ಮಂತ್ರಿಮಂಡಲ ಕೈಗೊಂಡ ಕೆಲವು ತೀರ್ಮಾನಗಳ ಪರಿಣಾಮವಾಗಿ ರಾಜ್ಯ ಸರ್ಕಾರದ ಸುಮಾರು ಎರಡೂವರೆ ಲಕ್ಷ ಮಂದಿ ನೌಕರರು ಹೆಚ್ಚಿನ ಮನೆ ಬಾಡಿಗೆ ಭತ್ಯೆ, ಹೆಚ್ಚಿನ ದಿನಭತ್ಯೆ ಮತ್ತು ಪ್ರಯಾಣ ಭತ್ಯೆಯನ್ನು ಪಡೆಯಲಿದ್ದಾರೆ.</p>.<p>ಕಡಿಮೆ ಸಮಯದಲ್ಲಿ ಹೆಚ್ಚಿನ ಬಡ್ತಿಗಳೂ ಸಿಕ್ಕುವಂತೆ ವೇತನ ಸ್ಕೇಲುಗಳನ್ನು ಶಾಸ್ತ್ರೀಯಗೊಳಿಸಿರುವುದು, ‘ವೇತನ ಗೊತ್ತು ಮಾಡಿರುವುದು ಹೊರತು ಉಳಿದೆಲ್ಲ ಉದ್ದೇಶಗಳಿಗಾಗಿ’ತುಟ್ಟಿ ಭತ್ಯದ ಒಂದು ಭಾಗವನ್ನು ‘ಅಡಿಷನಲ್ ಮೂಲವೇತನ’ ಎಂದು ಲೆಕ್ಕ ಮಾಡುವುದು, ಇವು ನೌಕರರುಇಂದು ಪಡೆದ ಮತ್ತೆರಡು ಸೌಲಭ್ಯಗಳು. ಇದರ ಪರಿಣಾಮವಾಗಿ ಕನಿಷ್ಠ ಮೂಲವೇತನ 65 ರೂ.ನಿಂದ ನೂರು ರೂ. ಮೀರುತ್ತದೆ.</p>.<p><strong>ಕಾಂಗ್ರೆಸ್ನ ಜೆ.ಲಿಂಗಯ್ಯ ಮೇಯರ್, ಚಂದ್ರಶೇಖರನ್ ಉಪಮೇಯರ್</strong></p>.<p>ಬೆಂಗಳೂರು, ಜ. 18– ಸುಮಾರು 40 ವರ್ಷಗಳ ಹಿಂದೆ ನಾಲ್ಕಾಣೆ ದಿನಗೂಲಿಯ ಮೇಲೆ ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಸ್ವಾತಂತ್ರ್ಯ ಸಂಗ್ರಾಮ ಹಾಗೂ ಕಾರ್ಮಿಕ ಚಳವಳಿಯಲ್ಲಿ ನಿರಂತರವಾಗಿ ಭಾಗವಹಿಸಿರುವ ಕಾಂಗ್ರೆಸ್ನ ಶ್ರೀ ಜೆ. ಲಿಂಗಯ್ಯ ಅವರು ಇಂದು ನಗರದ ‘ಪ್ರಥಮ ಪ್ರಜೆ’ಯಾಗಿ ಹಾಗೂ ವಿ.ಎಂ. ಚಂದ್ರಶೇಖರನ್ ಅವರು ಉಪಮೇಯರ್ ಆಗಿ ಚುನಾಯಿತರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>