<p><strong>ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರರಿಗೆ ರೈಲ್ವೆ ಕಾಂಟ್ರ್ಯಾಕ್ಟ್, ಸಾಲದ ಸೌಲಭ್ಯ: ಕೆಂಗಲ್<br />ಪುಣೆ, ಜುಲೈ 4–</strong> ರಾಷ್ಟ್ರದಲ್ಲಿ ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಲು ತಮ್ಮ ಇಲಾಖೆ ಯೋಜನೆ ಹಾಕಿಕೊಂಡಿರುವುದನ್ನು ರೈಲ್ವೆ ಸಚಿವ ಕೆ. ಹನುಮಂತಯ್ಯ ಅವರು ಇಂದು ಇಲ್ಲಿ ಪ್ರಕಟಿಸಿದರು.</p>.<p>ಇಲಾಖೆಯ ಭಾರಿ ನಿರ್ಮಾಣಗಳನ್ನು ಸಂಸ್ಥೆಗಳಿಗೆ ವಹಿಸುವ ಪುರಾತನ ಕಾಂಟ್ರ್ಯಾಕ್ಟ್ ಪದ್ಧತಿಯಿಂದ ಈಗ ದೂರ ಸರಿಯುತ್ತಿರುವುದಾಗಿ ಅವರು ಹೇಳಿದರು.</p>.<p>ನಿರ್ದಿಷ್ಟ ಕಾಲದಲ್ಲಿ ನಿರ್ಮಾಣ ಕಾರ್ಯಗಳನ್ನು ಮುಗಿಸಲು ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರರಿಗೆ ಕಾಂಟ್ರ್ಯಾಕ್ಟ್ ಮತ್ತು ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ಕಲ್ಪಿಸುವುದನ್ನು ತಮ್ಮ ಇಲಾಖೆ ಪರಿಶೀಲಿಸುತ್ತಿರುವುದೆಂದು ಅವರು ತಿಳಿಸಿದರು.</p>.<p><strong>ಗಂಗಾ, ಕಾವೇರಿ ಸಂಪರ್ಕಕ್ಕೆ ಸರ್ವೆ: ಕೇಂದ್ರದ ನಿರ್ಧಾರ</strong><br /><strong>ಪುಣೆ, ಜುಲೈ 4–</strong> ಗಂಗಾ ಮತ್ತು ಕಾವೇರಿ ನದಿಗಳಿಗೆ ಸಂಪರ್ಕ ಕಲ್ಪಿಸಲು ವಿಶ್ವರಾಷ್ಟ್ರ ಸಂಸ್ಥೆ ತಜ್ಞರ ನೆರವಿನಿಂದ ಸರ್ವೆ ಕಾರ್ಯ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಯೋಜನಾ ಖಾತೆ ರಾಜ್ಯ ಸಚಿವ ಶ್ರೀ ಮೋಹನ ಧಾರಿಯ ಇಂದು ಇಲ್ಲಿ ತಿಳಿಸಿದರು.</p>.<p>ಯೋಜನಾ ಆಯೋಗವು ಈಗಾಗಲೆ ಈ ಕಾರ್ಯಕ್ಕೆ ಅನುಮತಿ ನೀಡಿರುವುದಾಗಿಯೂ ಹಾಗೂ ಸರ್ವೆ ಕಾರ್ಯವನ್ನು ಕೇಂದ್ರ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸಚಿವ ಖಾತೆಗೆ ವಹಿಸಿರುವುದಾಗಿಯೂ ಅವರು ಪತ್ರಕರ್ತರೊಡನೆ ಮಾತನಾಡುತ್ತ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರರಿಗೆ ರೈಲ್ವೆ ಕಾಂಟ್ರ್ಯಾಕ್ಟ್, ಸಾಲದ ಸೌಲಭ್ಯ: ಕೆಂಗಲ್<br />ಪುಣೆ, ಜುಲೈ 4–</strong> ರಾಷ್ಟ್ರದಲ್ಲಿ ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಲು ತಮ್ಮ ಇಲಾಖೆ ಯೋಜನೆ ಹಾಕಿಕೊಂಡಿರುವುದನ್ನು ರೈಲ್ವೆ ಸಚಿವ ಕೆ. ಹನುಮಂತಯ್ಯ ಅವರು ಇಂದು ಇಲ್ಲಿ ಪ್ರಕಟಿಸಿದರು.</p>.<p>ಇಲಾಖೆಯ ಭಾರಿ ನಿರ್ಮಾಣಗಳನ್ನು ಸಂಸ್ಥೆಗಳಿಗೆ ವಹಿಸುವ ಪುರಾತನ ಕಾಂಟ್ರ್ಯಾಕ್ಟ್ ಪದ್ಧತಿಯಿಂದ ಈಗ ದೂರ ಸರಿಯುತ್ತಿರುವುದಾಗಿ ಅವರು ಹೇಳಿದರು.</p>.<p>ನಿರ್ದಿಷ್ಟ ಕಾಲದಲ್ಲಿ ನಿರ್ಮಾಣ ಕಾರ್ಯಗಳನ್ನು ಮುಗಿಸಲು ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರರಿಗೆ ಕಾಂಟ್ರ್ಯಾಕ್ಟ್ ಮತ್ತು ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ಕಲ್ಪಿಸುವುದನ್ನು ತಮ್ಮ ಇಲಾಖೆ ಪರಿಶೀಲಿಸುತ್ತಿರುವುದೆಂದು ಅವರು ತಿಳಿಸಿದರು.</p>.<p><strong>ಗಂಗಾ, ಕಾವೇರಿ ಸಂಪರ್ಕಕ್ಕೆ ಸರ್ವೆ: ಕೇಂದ್ರದ ನಿರ್ಧಾರ</strong><br /><strong>ಪುಣೆ, ಜುಲೈ 4–</strong> ಗಂಗಾ ಮತ್ತು ಕಾವೇರಿ ನದಿಗಳಿಗೆ ಸಂಪರ್ಕ ಕಲ್ಪಿಸಲು ವಿಶ್ವರಾಷ್ಟ್ರ ಸಂಸ್ಥೆ ತಜ್ಞರ ನೆರವಿನಿಂದ ಸರ್ವೆ ಕಾರ್ಯ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಯೋಜನಾ ಖಾತೆ ರಾಜ್ಯ ಸಚಿವ ಶ್ರೀ ಮೋಹನ ಧಾರಿಯ ಇಂದು ಇಲ್ಲಿ ತಿಳಿಸಿದರು.</p>.<p>ಯೋಜನಾ ಆಯೋಗವು ಈಗಾಗಲೆ ಈ ಕಾರ್ಯಕ್ಕೆ ಅನುಮತಿ ನೀಡಿರುವುದಾಗಿಯೂ ಹಾಗೂ ಸರ್ವೆ ಕಾರ್ಯವನ್ನು ಕೇಂದ್ರ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸಚಿವ ಖಾತೆಗೆ ವಹಿಸಿರುವುದಾಗಿಯೂ ಅವರು ಪತ್ರಕರ್ತರೊಡನೆ ಮಾತನಾಡುತ್ತ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>