ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| 23-7-1971

Last Updated 23 ಜುಲೈ 2021, 19:30 IST
ಅಕ್ಷರ ಗಾತ್ರ

ಗ್ರಾಮಾಂತರ ಶಿಕ್ಷಕರಿಗೆ ವಿಮೆ ಸಂಗ್ರಹಣೆ ಕಾರ್ಯ: ಅನುಮತಿ ರದ್ದು

ಬೆಂಗಳೂರು, ಜುಲೈ 24– ತಮ್ಮ ವೃತ್ತಿಯ ಜೊತೆಗೆ ಜೀವನಿಮೆ ಮಾಡುವ ಕಾರ್ಯವನ್ನೂ ಕೈಗೊಳ್ಳಬಹುದುದೆಂದು ಗ್ರಾಮಗಳಲ್ಲಿ ಕೆಲಸ ಮಾಡುವ ಅಧ್ಯಾಪಕರಿಗೆ ನೀಡಲಾಗಿದ್ದ ಅನುಮತಿಯನ್ನು ಸರಕಾರ ವಾಪಸು ಪಡೆದಿದೆ.

ಪಾಠ ಹೇಳುವುದಕ್ಕಿಂತ ಜೀವವಿಮೆ ಸಂಗ್ರಹಣೆ ಕೆಲಸವೇ ನಡೆಯುತ್ತಿದೆ ಎಂದು ಅನೇಕ ದೂರುಗಳು ಬಂದ ಕಾರಣ, ಅನುಮತಿಯನ್ನು ವಾಪಸು ಪಡೆಯಲಾಗಿದೆಯೆಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ವರದಿಗಾರರಿಗೆ ತಿಳಿಸಿದರು.

ಭಾರತದ ವಾಯು ಪ್ರದೇಶ ಉಲ್ಲಂಘಿಸುವ ಪಾಕ್ ವಿಮಾನಕ್ಕೆ ಗುಂಡೇಟಿಗೆ ಆದೇಶ

ನವದೆಹಲಿ, ಜುಲೈ 24– ನಮ್ಮ ವಾಯುಪ್ರದೇಶ ಉಲ್ಲಂಘಿಸುವ ಯಾವುದೇ ಪಾಕಿಸ್ತಾನ ವಿಮಾನವನ್ನು ಗುಂಡಿಕ್ಕಿ ಹೊಡೆಯುವಂತೆ ಸರ್ಕಾರ ಆದೇಶ ನೀಡಿರುವುದನ್ನು ರಕ್ಷಣಾ ಮಂತ್ರಿ ಜಗಜೀವನರಾಂ ಇಂದು ರಾಜ್ಯಸಭೆಯಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT