ಚರ್ಚೆಗಾಗಿ ವಿಧೇಯಕ ಮಂಡಿಸಿದ ಕೇಂದ್ರ ಕಾನೂನು ಸಚಿವ ಎಚ್.ಆರ್. ಗೋಖಲೆ ಅವರು, ‘ಪ್ರಗತಿಯ ಹಾದಿಯಲ್ಲಿ ಅಡ್ಡಬಂದಿರುವ ಕೆಲವು ನ್ಯಾಯಾಂಗ ನಿರ್ಧಾರಗಳ ಅಡಚಣೆಗಳನ್ನು ನಿವಾರಿಸಲು ಹಾಗೂ ಸಂವಿಧಾನದ ಯಾವ ಭಾಗವನ್ನೇ ಆಗಲಿ ತಿದ್ದುಲು ಸಂಸತ್ತಿಗೆ ಇರುವ ಪರಮಾಧಿಕಾರವನ್ನು ಮತ್ತೆ ಸ್ಥಾಪಿಸುವುದೇ ವಿಧೇಯಕದ ಉದ್ದೇಶವೆಂದು ವಿವರಿಸಿದರು.