ನವದೆಹಲಿ, ಅ. 23– ಜನತೆ ತಮ್ಮ ಪಕ್ಷಗಳ ಮತ್ತು ಧರ್ಮಗಳ ಭಿನ್ನಾಭಿಪ್ರಾಯಗಳನ್ನೂ ಮರೆತು, ರಾಷ್ಟ್ರದ ಸ್ವಾತಂತ್ರ್ಯ ಮತ್ತು ಏಕತೆಯನ್ನು ಸಂರಕ್ಷಿ ಸಲು ಸಂಘಟಿತರಾಗಿರಬೇಕು ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಕರೆ ನೀಡಿದರು.
ಮೂರು ವಾರಗಳ ವಿದೇಶ ಪ್ರವಾಸ ಹೊರಡುವ ಮುನ್ನ ಇಂದು ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ ಅವರು, ‘ರಾಷ್ಟ್ರವು ಈಗ ಅಪಾಯ ಪರಿಸ್ಥಿತಿಯನ್ನೆದುರಿಸುತ್ತಿರುವುದರಿಂದ ನಮ್ಮ ರಕ್ಷಣಾ ಪಡೆಗಳು ಮಾತ್ರವೇ ಅಲ್ಲದೆ ಜನತೆಯೂ ಜಾಗೃತರಾಗಿರುವುದು ಅತ್ಯಗತ್ಯ’ ಎಂದರು.