ವಿಜಯವಾಡ, ನ. 22– ಮುಲ್ಕಿ ನಿಯಮಗಳ ವಿರುದ್ಧ ಆಂಧ್ರ ವಿಭಾಗಗಳಲ್ಲಿ ಚಳವಳಿ ಇಂದು ಇನ್ನಷ್ಟು ಉಲ್ಬಣಗೊಂಡು, ಮೂರು ರೈಲು ನಿಲ್ದಾಣಗಳಿಗೆ ಉದ್ರಿಕ್ತ ಗುಂಪು ಬೆಂಕಿ ಇಟ್ಟಿತು. ಚೀರಾಲಾದಲ್ಲಿ ನಿಂತಿದ್ದ ಗೂಡ್ಸ್ ಗಾಡಿಯೊಂದಕ್ಕೆ ಏಳು ಸಾವಿರ ಜನರ ತಂಡ ಬೆಂಕಿ ಹಚ್ಚಿದ್ದರಿಂದ ಡೀಸೆಲ್ ಎಂಜಿನ್ ಹಾಗೂ 30 ವ್ಯಾಗನ್ಗಳು ಸುಟ್ಟುಹೋದವು.