<p><strong>ಸ್ಯಾಂಕಿ ರಸ್ತೆಯಲ್ಲಿ ಹೊಸ ಶಾಸಕರ ಭವನ<br />ಬೆಂಗಳೂರು, ಆ. 13–</strong> ಸ್ಯಾಂಕಿ ರಸ್ತೆಯಲ್ಲಿ ಸರ್ಕಾರ ಕೊಂಡಿರುವ ಮಾಣಿಕ್ಯವೇಲು ಬಂಗಲೆಯ 9 ಎಕರೆ ಆವರಣದ ಒಂದು ಭಾಗದಲ್ಲಿ 250 ‘ಕೊಠಡಿಗಳ’ ಶಾಸಕರ ಭವನವನ್ನು ನಿರ್ಮಿಸಲಾಗುವುದು.</p>.<p>ಪ್ರತೀ ಶಾಸಕನಿಗೆ ಎಂಟು ಚದರದ ವಸತಿಯನ್ನು ನಿರ್ಮಿಸಲಾಗುವುದು, ಇದರಲ್ಲಿ ಅಡುಗೆ ಮನೆಯೂ ಸೇರಿರುತ್ತದೆ.</p>.<p>ಶಾಸಕರ ಭವನ ನಿರ್ಮಾಣವನ್ನು ಹೌಸಿಂಗ್ ಬೋರ್ಡ್ಗೆ ಒಪ್ಪಿಸಲಾಗಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಕಾರ್ಯಾರಂಭವಾಗುವ ನಿರೀಕ್ಷೆ ಇದೆ.</p>.<p><strong>ಸಂಪುಟ ಗಾತ್ರದ ಮೇಲೆ ಪರಿಮಿತಿಗೆ ಶೀಘ್ರವೇ ಮಸೂದೆ<br />ನವದೆಹಲಿ, ಆ. 13– </strong>ರಾಜ್ಯಗಳಲ್ಲಿ ಸಚಿವ ಸಂಖ್ಯೆಯನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರವು ಮಸೂದೆಯನ್ನು ಸಿದ್ಧಪಡಿಸುತ್ತಿದೆ.</p>.<p>ಸಂಪುಟದ ಗಾತ್ರ ತಗ್ಗಿಸಬೇಕೆಂದು ಆಡಳಿತ ಸುಧಾರಣಾ ಆಯೋಗ ಮಾಡಿರುವ ಶಿಫಾರಸುಗಳನ್ನು ಕೇಂದ್ರ ಸಂಪುಟ ಈಗಾಗಲೇ ಮಾನ್ಯ ಮಾಡಿದೆ.</p>.<p>ಸಚಿವರ ಸಂಖ್ಯೆ ಮಿತಿಗೊಳಿಸಬೇಕೆಂಬ ತತ್ವಕ್ಕೆ ಸರ್ವ ಪಕ್ಷಗಳ ಸಮಿತಿಯೂ ಈಗಾಗಲೇ ತನ್ನ ಒಪ್ಪಿಗೆ ಕೊಟ್ಟಿದೆ. ಈ ತತ್ವದಂತೆ ಪ್ರತೀ ಹತ್ತು ಮಂದಿ ವಿಧಾನಸಭಾ ಸದಸ್ಯರಿಗೆ ಬಬ್ಬರಿಗಿಂತ ಹೆಚ್ಚು ಸಚಿವರ ನೇಮಕಕ್ಕೆ ಅವಕಾಶವಿರುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸ್ಯಾಂಕಿ ರಸ್ತೆಯಲ್ಲಿ ಹೊಸ ಶಾಸಕರ ಭವನ<br />ಬೆಂಗಳೂರು, ಆ. 13–</strong> ಸ್ಯಾಂಕಿ ರಸ್ತೆಯಲ್ಲಿ ಸರ್ಕಾರ ಕೊಂಡಿರುವ ಮಾಣಿಕ್ಯವೇಲು ಬಂಗಲೆಯ 9 ಎಕರೆ ಆವರಣದ ಒಂದು ಭಾಗದಲ್ಲಿ 250 ‘ಕೊಠಡಿಗಳ’ ಶಾಸಕರ ಭವನವನ್ನು ನಿರ್ಮಿಸಲಾಗುವುದು.</p>.<p>ಪ್ರತೀ ಶಾಸಕನಿಗೆ ಎಂಟು ಚದರದ ವಸತಿಯನ್ನು ನಿರ್ಮಿಸಲಾಗುವುದು, ಇದರಲ್ಲಿ ಅಡುಗೆ ಮನೆಯೂ ಸೇರಿರುತ್ತದೆ.</p>.<p>ಶಾಸಕರ ಭವನ ನಿರ್ಮಾಣವನ್ನು ಹೌಸಿಂಗ್ ಬೋರ್ಡ್ಗೆ ಒಪ್ಪಿಸಲಾಗಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಕಾರ್ಯಾರಂಭವಾಗುವ ನಿರೀಕ್ಷೆ ಇದೆ.</p>.<p><strong>ಸಂಪುಟ ಗಾತ್ರದ ಮೇಲೆ ಪರಿಮಿತಿಗೆ ಶೀಘ್ರವೇ ಮಸೂದೆ<br />ನವದೆಹಲಿ, ಆ. 13– </strong>ರಾಜ್ಯಗಳಲ್ಲಿ ಸಚಿವ ಸಂಖ್ಯೆಯನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರವು ಮಸೂದೆಯನ್ನು ಸಿದ್ಧಪಡಿಸುತ್ತಿದೆ.</p>.<p>ಸಂಪುಟದ ಗಾತ್ರ ತಗ್ಗಿಸಬೇಕೆಂದು ಆಡಳಿತ ಸುಧಾರಣಾ ಆಯೋಗ ಮಾಡಿರುವ ಶಿಫಾರಸುಗಳನ್ನು ಕೇಂದ್ರ ಸಂಪುಟ ಈಗಾಗಲೇ ಮಾನ್ಯ ಮಾಡಿದೆ.</p>.<p>ಸಚಿವರ ಸಂಖ್ಯೆ ಮಿತಿಗೊಳಿಸಬೇಕೆಂಬ ತತ್ವಕ್ಕೆ ಸರ್ವ ಪಕ್ಷಗಳ ಸಮಿತಿಯೂ ಈಗಾಗಲೇ ತನ್ನ ಒಪ್ಪಿಗೆ ಕೊಟ್ಟಿದೆ. ಈ ತತ್ವದಂತೆ ಪ್ರತೀ ಹತ್ತು ಮಂದಿ ವಿಧಾನಸಭಾ ಸದಸ್ಯರಿಗೆ ಬಬ್ಬರಿಗಿಂತ ಹೆಚ್ಚು ಸಚಿವರ ನೇಮಕಕ್ಕೆ ಅವಕಾಶವಿರುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>