ದೀರ್ಘ ಗೊಂದಲದಿಂದಾಗಿ, ಒಂದು ಘಟ್ಟದಲ್ಲಿ ಸಭೆಯು ಸುಮಾರು ಎರಡೂ ಮುಕ್ಕಾಲು ಗಂಟೆಗಳ ಕಾಲ ಮುಂದಕ್ಕೆ ಹೋಗಿ, ಕೊನೆಗೆ ಐದು ನಿಮಿಷಗಳ ಕಾಲ ಸೇರಿದಾಗ, ಸಚಿವ ಶ್ರೀ ಎಚ್.ಕೆ. ಪಾಟೀಲರು, ‘ತಮ್ಮ ನಿನ್ನೆಯ ಕೆಲವು ಮಾತುಗಳಿಂದ ಸದಸ್ಯರಿಗೆ ನೋವಾಗಿದ್ದರೆ, ಅಂಥ ಮಾತುಗಳನ್ನು ವಾಪಸು ಪಡೆದುಕೊಳ್ಳುವುದಾಗಿ ವಿಷಾದ’ ಸೂಚಿಸಿದರು.