<h2>ಗಿರಿ, ಜೆ.ಪಿ. ಸಲಹೆಗಳ ವಿಮರ್ಶೆ ನಂತರವೂ ಸರ್ಕಾರದ ನಿಲುವು ಅಚಲ</h2><p><strong>ನವದೆಹಲಿ, ಮೇ 17–</strong> ರೈಲು ಮುಷ್ಕರದ ಹತ್ತನೇ ದಿನವಾದ ಇಂದು ಕೂಡ ಸಂಧಾನದಿಂದ ಮುಷ್ಕರ ಮುಕ್ತಾಯಗೊಳ್ಳುವ ಯಾವುದೇ ಸೂಚನೆಯೂ ಕಂಡುಬರಲಿಲ್ಲ. </p><p>ಮುಷ್ಕರ ರದ್ದುಪಡಿಸದೆಯೇ ರೈಲು ಕಾರ್ಮಿಕ ನಾಯಕರ ಜೊತೆ ಸಂಧಾನ ಸಾಧ್ಯವೇ ಇಲ್ಲ ಎಂಬ ನೀತಿಯನ್ನು ಸರ್ಕಾರ ಇಂದು ಮತ್ತೆ ಸಾರಿ ಹೇಳಿತು. </p><p>ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಪುಟದ ರಾಜಕೀಯ ವ್ಯವಹಾರ ಸಮಿತಿ ಸಭೆಯಲ್ಲಿ ಇಂದು ನಡೆಸಿದ ದೀರ್ಘ ಚರ್ಚೆ ನಂತರ ಸರ್ಕಾರದ ಹಿಂದಿನ ದೃಢ ನಿರ್ಧಾರವನ್ನು ಮತ್ತೆ ಸ್ಪಷ್ಟಪಡಿಸಲಾಯಿತು. </p><h2>ರಾಜ್ಯದಲ್ಲಿ ಇನ್ನೂ 2, 3 ತಿಂಗಳು ಸಿಮೆಂಟ್ ಕೊರತೆ</h2><p><strong>ಬೆಂಗಳೂರು, ಮೇ 17–</strong> ರಾಜ್ಯದಲ್ಲಿ ಸಿಮೆಂಟ್ ಕೊರತೆ ಇನ್ನೂ ಎರಡು–ಮೂರು ತಿಂಗಳು ಮುಂದುವರಿಯುವುದೆಂದು ಕೈಗಾರಿಕೆ ಸಚಿವ ಎಸ್.ಎಂ. ಕೃಷ್ಣ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು. </p><p>ಟಿ.ಆರ್. ಶಾಮಣ್ಣ ಅವರ ಗಮನ ಸೆಳೆಯುವ ಸೂಚನೆಗೆ ಹೇಳಿಕೆ ನೀಡಿದ ಅವರು, ದೊರೆಯುವ ಸಿಮೆಂಟನ್ನು ಸಮಾನವಾಗಿ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.</p><p>ಗೊತ್ತಾದ ದರಗಳಿಗಿಂತ ಹೆಚ್ಚಿನ ದರಕ್ಕೆ ಸಿಮೆಂಟನ್ನು ಮಾರುತ್ತಿದ್ದ 96 ಮಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಅವರಲ್ಲಿ 46 ಮಂದಿಗೆ ಶಿಕ್ಷೆಯಾಗಿದೆ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಗಿರಿ, ಜೆ.ಪಿ. ಸಲಹೆಗಳ ವಿಮರ್ಶೆ ನಂತರವೂ ಸರ್ಕಾರದ ನಿಲುವು ಅಚಲ</h2><p><strong>ನವದೆಹಲಿ, ಮೇ 17–</strong> ರೈಲು ಮುಷ್ಕರದ ಹತ್ತನೇ ದಿನವಾದ ಇಂದು ಕೂಡ ಸಂಧಾನದಿಂದ ಮುಷ್ಕರ ಮುಕ್ತಾಯಗೊಳ್ಳುವ ಯಾವುದೇ ಸೂಚನೆಯೂ ಕಂಡುಬರಲಿಲ್ಲ. </p><p>ಮುಷ್ಕರ ರದ್ದುಪಡಿಸದೆಯೇ ರೈಲು ಕಾರ್ಮಿಕ ನಾಯಕರ ಜೊತೆ ಸಂಧಾನ ಸಾಧ್ಯವೇ ಇಲ್ಲ ಎಂಬ ನೀತಿಯನ್ನು ಸರ್ಕಾರ ಇಂದು ಮತ್ತೆ ಸಾರಿ ಹೇಳಿತು. </p><p>ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಪುಟದ ರಾಜಕೀಯ ವ್ಯವಹಾರ ಸಮಿತಿ ಸಭೆಯಲ್ಲಿ ಇಂದು ನಡೆಸಿದ ದೀರ್ಘ ಚರ್ಚೆ ನಂತರ ಸರ್ಕಾರದ ಹಿಂದಿನ ದೃಢ ನಿರ್ಧಾರವನ್ನು ಮತ್ತೆ ಸ್ಪಷ್ಟಪಡಿಸಲಾಯಿತು. </p><h2>ರಾಜ್ಯದಲ್ಲಿ ಇನ್ನೂ 2, 3 ತಿಂಗಳು ಸಿಮೆಂಟ್ ಕೊರತೆ</h2><p><strong>ಬೆಂಗಳೂರು, ಮೇ 17–</strong> ರಾಜ್ಯದಲ್ಲಿ ಸಿಮೆಂಟ್ ಕೊರತೆ ಇನ್ನೂ ಎರಡು–ಮೂರು ತಿಂಗಳು ಮುಂದುವರಿಯುವುದೆಂದು ಕೈಗಾರಿಕೆ ಸಚಿವ ಎಸ್.ಎಂ. ಕೃಷ್ಣ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು. </p><p>ಟಿ.ಆರ್. ಶಾಮಣ್ಣ ಅವರ ಗಮನ ಸೆಳೆಯುವ ಸೂಚನೆಗೆ ಹೇಳಿಕೆ ನೀಡಿದ ಅವರು, ದೊರೆಯುವ ಸಿಮೆಂಟನ್ನು ಸಮಾನವಾಗಿ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.</p><p>ಗೊತ್ತಾದ ದರಗಳಿಗಿಂತ ಹೆಚ್ಚಿನ ದರಕ್ಕೆ ಸಿಮೆಂಟನ್ನು ಮಾರುತ್ತಿದ್ದ 96 ಮಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಅವರಲ್ಲಿ 46 ಮಂದಿಗೆ ಶಿಕ್ಷೆಯಾಗಿದೆ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>