‘ಶ್ರದ್ಧಾಪೂರ್ಣ ಶ್ರಮದಿಂದ ನೀವು ಗಳಿಸಿದ ಗೆಲುವು ಕನ್ನಡ ಜನಕೋಟಿಗೆ ಅಮಿತಾನಂದ ಉಂಟು ಮಾಡಿರುವುದಲ್ಲದೇ ಒಂದು ಶೋಭೆಯ ಅಧ್ಯಾಯವನ್ನೇ ಆರಂಭಿಸಿದೆ. ಇನ್ನೂ ಮಿಗಿಲಾದ ಖ್ಯಾತಿಯ ದಾರಿಯಲ್ಲಿ ಮುನ್ನಡೆಯುವಿರೆಂಬ ನಂಬಿಕೆ ನಮಗಿದೆ’ ಎಂದು ರಾಜ್ಯ ಪತ್ರಕರ್ತರ ಸಂಘ ಇಂದು ಸಂಜೆ ವಿಜಯೀ ಟೀಮಿನ ಗೌರವಾರ್ಥ ಏರ್ಪಡಿಸಿದ್ದ ಸರಳ ಸುಂದರ ಸನ್ಮಾನ ಸಮಾರಂಭದಲ್ಲಿ ಅರ್ಪಿಸಿದ ಆದರದ ಅಭಿನಂದನಾ ಪತ್ರದಲ್ಲಿ ವಿವರಿಸಿದೆ.