<p><strong>ಬೆಂಗಳೂರು, ಜೂ. 1–</strong> ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರನ್ನು 46 ಲಕ್ಷ ರೂಪಾಯಿ ವೆಚ್ಚದಲ್ಲಿ ಮತ್ಸ್ಯ ಬಂದರನ್ನಾಗಿ ಅಭಿವೃದ್ಧಿಗೊಳಿಸುವ ಕಾರ್ಯ ಎರಡು ವರ್ಷಗಳಲ್ಲಿ ಮುಗಿಯಲಿದೆ.</p><p>ಈ ಯೋಜನೆಯ ತ್ವರಿತ ಅನುಷ್ಠಾನದ ಕಾರ್ಯಕ್ರಮ ರೂಪಿಸಲು ಇಂದು ಮೀನುಗಾರಿಕೆ ಇಲಾಖೆ ಸಚಿವ ಶ್ರೀ ಕೆ.ಟಿ. ರಾಥೋಡ್ ಅವರ ಕೊಠಡಿಯಲ್ಲಿ ನಡೆದ ವರಿಷ್ಠ ಅಧಿಕಾರಿಗಳ ಸಭೆಯಲ್ಲಿ ಈ ವರ್ಷ ಕನಿಷ್ಠ ಹತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ರೂಪರೇಷೆ ತಯಾರಿಸಲಾಯಿತು.</p><p>ಮೀನು ದೋಣಿಗಳು ಲಂಗರುಹಾಕುವ ಸ್ಥಳದ ನಿರ್ಮಾಣ, ನೀರು ಪೂರೈಕೆ, ದೋಣಿಗಳ ಆಗಮನ ನಿರ್ಗಮನ ಸೌಲಭ್ಯಗಳ ನಿರ್ಮಾಣಕಾರ್ಯವನ್ನು ಈ ವರ್ಷ ಎತ್ತಿಕೊಳ್ಳಲಾಗುವುದು ಎಂದು ಶ್ರೀ ರಾಥೋಡ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. </p><p>ಬಂದರು ನಿರ್ಮಾಣಕ್ಕೆ ಬೇಕಾದ ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇನ್ನಿತರ ಚಿಕ್ಕಪುಟ್ಟ ಅಡೆತಡೆಗಳ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.</p><p><strong>ನ್ಯಾಷನಲ್ ಕಾಲೇಜಿಗೆ ಅತ್ಯಧಿಕ ರ್ಯಾಂಕ್ </strong></p><p><strong>ಬೆಂಗಳೂರು, ಜೂನ್ 19–</strong> ಪಿಯುಸಿ ಶಿಕ್ಷಣ ಮಂಡಳಿ ಆಶ್ರಯದಲ್ಲಿ ಈ ಸಲ ಜರುಗಿದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ನಗರದ ನ್ಯಾಷನಲ್ ಕಾಲೇಜು ಅತ್ಯಧಿಕ ರ್ಯಾಂಕುಗಳನ್ನು ಗಳಿಸಿಕೊಂಡಿದೆ.</p><p>ಈ ಎರಡೂ ಪರೀಕ್ಷೆಗಳಲ್ಲಿ (ಆರ್ಸ್, ಸೈನ್ಸ್, ಕಾಮರ್ಸ್) ಬಂದಿರುವ ಒಟ್ಟು 60 ರ್ಯಾಂಕ್ಗಳ ಪೈಕಿ 12 ರ್ಯಾಂಕ್ಗಳನನ್ನು ನ್ಯಾಷನಲ್ ಕಾಲೇಜು ಪಡೆದುಕೊಂಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು, ಜೂ. 1–</strong> ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರನ್ನು 46 ಲಕ್ಷ ರೂಪಾಯಿ ವೆಚ್ಚದಲ್ಲಿ ಮತ್ಸ್ಯ ಬಂದರನ್ನಾಗಿ ಅಭಿವೃದ್ಧಿಗೊಳಿಸುವ ಕಾರ್ಯ ಎರಡು ವರ್ಷಗಳಲ್ಲಿ ಮುಗಿಯಲಿದೆ.</p><p>ಈ ಯೋಜನೆಯ ತ್ವರಿತ ಅನುಷ್ಠಾನದ ಕಾರ್ಯಕ್ರಮ ರೂಪಿಸಲು ಇಂದು ಮೀನುಗಾರಿಕೆ ಇಲಾಖೆ ಸಚಿವ ಶ್ರೀ ಕೆ.ಟಿ. ರಾಥೋಡ್ ಅವರ ಕೊಠಡಿಯಲ್ಲಿ ನಡೆದ ವರಿಷ್ಠ ಅಧಿಕಾರಿಗಳ ಸಭೆಯಲ್ಲಿ ಈ ವರ್ಷ ಕನಿಷ್ಠ ಹತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ರೂಪರೇಷೆ ತಯಾರಿಸಲಾಯಿತು.</p><p>ಮೀನು ದೋಣಿಗಳು ಲಂಗರುಹಾಕುವ ಸ್ಥಳದ ನಿರ್ಮಾಣ, ನೀರು ಪೂರೈಕೆ, ದೋಣಿಗಳ ಆಗಮನ ನಿರ್ಗಮನ ಸೌಲಭ್ಯಗಳ ನಿರ್ಮಾಣಕಾರ್ಯವನ್ನು ಈ ವರ್ಷ ಎತ್ತಿಕೊಳ್ಳಲಾಗುವುದು ಎಂದು ಶ್ರೀ ರಾಥೋಡ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. </p><p>ಬಂದರು ನಿರ್ಮಾಣಕ್ಕೆ ಬೇಕಾದ ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇನ್ನಿತರ ಚಿಕ್ಕಪುಟ್ಟ ಅಡೆತಡೆಗಳ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.</p><p><strong>ನ್ಯಾಷನಲ್ ಕಾಲೇಜಿಗೆ ಅತ್ಯಧಿಕ ರ್ಯಾಂಕ್ </strong></p><p><strong>ಬೆಂಗಳೂರು, ಜೂನ್ 19–</strong> ಪಿಯುಸಿ ಶಿಕ್ಷಣ ಮಂಡಳಿ ಆಶ್ರಯದಲ್ಲಿ ಈ ಸಲ ಜರುಗಿದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ನಗರದ ನ್ಯಾಷನಲ್ ಕಾಲೇಜು ಅತ್ಯಧಿಕ ರ್ಯಾಂಕುಗಳನ್ನು ಗಳಿಸಿಕೊಂಡಿದೆ.</p><p>ಈ ಎರಡೂ ಪರೀಕ್ಷೆಗಳಲ್ಲಿ (ಆರ್ಸ್, ಸೈನ್ಸ್, ಕಾಮರ್ಸ್) ಬಂದಿರುವ ಒಟ್ಟು 60 ರ್ಯಾಂಕ್ಗಳ ಪೈಕಿ 12 ರ್ಯಾಂಕ್ಗಳನನ್ನು ನ್ಯಾಷನಲ್ ಕಾಲೇಜು ಪಡೆದುಕೊಂಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>