<p><strong>ನಗರದ ಎಚ್ಎಂಟಿ ಕಾರ್ಖಾನೆಯಲ್ಲಿ ಅನಿರ್ದಿಷ್ಟ ಕಾಲ ಲಾಕ್ಔಟ್ ಘೋಷಣೆ</strong></p>.<p><strong>ಬೆಂಗಳೂರು, ನ. 10– </strong>ನಗರದ ಎಚ್ಎಂಟಿ ಕಾರ್ಖಾನೆಯಲ್ಲಿ ಎರಡು ತಂಡದ ಕಾರ್ಮಿಕರ ನಡುವೆ ಇರುವ ವೈಷಮ್ಯದ ಫಲವಾಗಿ ಇಂದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕಾರ್ಖಾನೆ ಆಸ್ತಿ ಹಾಗೂ ನೌಕರರ ಪ್ರಾಣಾಪಾಯ ಉಂಟಾಗು ವುದನ್ನು ತಪ್ಪಿಸಲು ಆಡಳಿತವರ್ಗ ಅನಿರ್ದಿಷ್ಟ ಕಾಲ ಲಾಕ್ಔಟ್ ಘೋಷಿಸಿತು.</p>.<p>ಇದೇ ಕಾರಣಕ್ಕಾಗಿ ಕೇವಲ ಒಂದು ತಿಂಗಳ ಹಿಂದೆ ಲಾಕ್ಔಟ್ ಆಗಿದ್ದ ಘಟನೆ ಯನ್ನು ಪ್ರಸ್ತಾಪಿಸಿ ಕಾರ್ಖಾನೆಯಲ್ಲಿ ಕಾರ್ಮಿಕರು ಸಂಪೂರ್ಣ ಶಿಸ್ತು ಪಾಲಿಸಿ ಶಾಂತಿ ನೆಲೆಸುವು ದೆಂದು ಖಾತರಿ ಆಗುವವರೆಗೆ ಲಾಕ್ಔಟ್ ತೆಗೆಯುವುದಿಲ್ಲವೆಂದು ಆಡಳಿತ ವರ್ಗ ಸ್ಪಷ್ಟಪಡಿಸಿದೆ.</p>.<p><strong>ವಿದೇಶಿ ಉಡುಪು ಧರಿಸಿದರೆ ಬಂದಿಖಾನೆಗೆ<br />ನವದೆಹಲಿ, ನ. 10– </strong>ಭೂತಾನಿಗಳದ್ದಲ್ಲದ ಉಡುಪನ್ನು ತೊಡಬಾರದೆಂದು ಭೂತಾನ್ ಜನರಿಗೆ ಅಲ್ಲಿನ ಗೃಹಸಚಿವರು ಆಜ್ಞೆ ಮಾಡಿದ್ದಾರೆ.</p>.<p>ಸರ್ಕಾರಿ ಹುದ್ದೆಯಲ್ಲಿರುವ ಭೂತಾನಿಗಳು ಪಾಶ್ಚಿಮಾತ್ಯ ತೊಡುಗೆಗಳನ್ನು ತೊರೆದು ಭೂತಾನ್ ಉಡುಪನ್ನು ಮಾತ್ರ ತೊಡಬೇಕು. ಈ ಆಜ್ಞೆ ಹಿರಿಯ ಅಧಿಕಾರಿಗಳಿಂದ ಹಿಡಿದು ಚಾಲಕರವರೆಗೆ ಅನ್ವಯಿಸುತ್ತದೆ.</p>.<p>ಸರ್ಕಾರಿ ಹುದ್ದೆಗಳಲ್ಲಿಲ್ಲದ ಸಾರ್ವಜನಿಕರೂ ಸಹ ‘ಭೂತಾನಿಗಳ ನಮೂನೆಯದಾಗಿರದ ಉಡುಪನ್ನು ಬಳಸಬಾರದು’ ಎಂದು ಗೃಹಸಚಿವರ ಆಜ್ಞೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಗರದ ಎಚ್ಎಂಟಿ ಕಾರ್ಖಾನೆಯಲ್ಲಿ ಅನಿರ್ದಿಷ್ಟ ಕಾಲ ಲಾಕ್ಔಟ್ ಘೋಷಣೆ</strong></p>.<p><strong>ಬೆಂಗಳೂರು, ನ. 10– </strong>ನಗರದ ಎಚ್ಎಂಟಿ ಕಾರ್ಖಾನೆಯಲ್ಲಿ ಎರಡು ತಂಡದ ಕಾರ್ಮಿಕರ ನಡುವೆ ಇರುವ ವೈಷಮ್ಯದ ಫಲವಾಗಿ ಇಂದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕಾರ್ಖಾನೆ ಆಸ್ತಿ ಹಾಗೂ ನೌಕರರ ಪ್ರಾಣಾಪಾಯ ಉಂಟಾಗು ವುದನ್ನು ತಪ್ಪಿಸಲು ಆಡಳಿತವರ್ಗ ಅನಿರ್ದಿಷ್ಟ ಕಾಲ ಲಾಕ್ಔಟ್ ಘೋಷಿಸಿತು.</p>.<p>ಇದೇ ಕಾರಣಕ್ಕಾಗಿ ಕೇವಲ ಒಂದು ತಿಂಗಳ ಹಿಂದೆ ಲಾಕ್ಔಟ್ ಆಗಿದ್ದ ಘಟನೆ ಯನ್ನು ಪ್ರಸ್ತಾಪಿಸಿ ಕಾರ್ಖಾನೆಯಲ್ಲಿ ಕಾರ್ಮಿಕರು ಸಂಪೂರ್ಣ ಶಿಸ್ತು ಪಾಲಿಸಿ ಶಾಂತಿ ನೆಲೆಸುವು ದೆಂದು ಖಾತರಿ ಆಗುವವರೆಗೆ ಲಾಕ್ಔಟ್ ತೆಗೆಯುವುದಿಲ್ಲವೆಂದು ಆಡಳಿತ ವರ್ಗ ಸ್ಪಷ್ಟಪಡಿಸಿದೆ.</p>.<p><strong>ವಿದೇಶಿ ಉಡುಪು ಧರಿಸಿದರೆ ಬಂದಿಖಾನೆಗೆ<br />ನವದೆಹಲಿ, ನ. 10– </strong>ಭೂತಾನಿಗಳದ್ದಲ್ಲದ ಉಡುಪನ್ನು ತೊಡಬಾರದೆಂದು ಭೂತಾನ್ ಜನರಿಗೆ ಅಲ್ಲಿನ ಗೃಹಸಚಿವರು ಆಜ್ಞೆ ಮಾಡಿದ್ದಾರೆ.</p>.<p>ಸರ್ಕಾರಿ ಹುದ್ದೆಯಲ್ಲಿರುವ ಭೂತಾನಿಗಳು ಪಾಶ್ಚಿಮಾತ್ಯ ತೊಡುಗೆಗಳನ್ನು ತೊರೆದು ಭೂತಾನ್ ಉಡುಪನ್ನು ಮಾತ್ರ ತೊಡಬೇಕು. ಈ ಆಜ್ಞೆ ಹಿರಿಯ ಅಧಿಕಾರಿಗಳಿಂದ ಹಿಡಿದು ಚಾಲಕರವರೆಗೆ ಅನ್ವಯಿಸುತ್ತದೆ.</p>.<p>ಸರ್ಕಾರಿ ಹುದ್ದೆಗಳಲ್ಲಿಲ್ಲದ ಸಾರ್ವಜನಿಕರೂ ಸಹ ‘ಭೂತಾನಿಗಳ ನಮೂನೆಯದಾಗಿರದ ಉಡುಪನ್ನು ಬಳಸಬಾರದು’ ಎಂದು ಗೃಹಸಚಿವರ ಆಜ್ಞೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>