<p><strong>ಕಾಳಿ ನದಿ ಯೋಜನೆ ಪ್ರಥಮ ಹಂತ ನಿರ್ಮಾಣ ಘಟ್ಟಕ್ಕೆ<br />ಹುಬ್ಬಳ್ಳಿ, ಮೇ 9–</strong> ದಕ್ಷಿಣದ ವಿದ್ಯುತ್ ಕ್ಷಾಮಕ್ಕೆ ಸಂಜೀವಿನಿ ಎನಿಸಲಿರುವ ರಾಷ್ಟ್ರದ ಅತ್ಯಂತ ದೊಡ್ಡ ಜಲವಿದ್ಯುತ್ ಉತ್ಪಾದನಾ ಜಾಲ, 120 ಕೋಟಿ ರೂಪಾಯಿ ವೆಚ್ಚದ ಕಾಳಿ ನದಿ ಯೋಜನೆಯ ಪ್ರಥಮ ಹಂತ ಇಂದು ಬೆಳಿಗ್ಗೆ ವಿಧ್ಯುಕ್ತವಾಗಿ ನಿರ್ಮಾಣಘಟ್ಟ ಮುಟ್ಟಿತು.</p>.<p>ಇಲ್ಲಿಂದ 50 ಮೈಲಿ ದೂರದಲ್ಲಿರುವ ಪಶ್ಚಿಮಘಟ್ಟದ ಶಿಖರದ ತೇಗ–ಬೀಟೆಗಳ ಅರಣ್ಯಮಧ್ಯದ ಬೊಮ್ಮೇನಹಳ್ಳಿಯಲ್ಲಿ<br />ರಾಜ್ಯಪಾಲರು ಗುಂಡಿ ಒತ್ತಿದಾಗ, ನದಿಗರ್ಭದಿಂದ ಸಿಡಿದು ಒಡೆದ ಬಂಡೆಗಳು ಕಾಡಿನಲ್ಲಿ ಪ್ರತಿಧ್ವನಿಸಿ<br />ಶಂಕುಸ್ಥಾಪನೆಯನ್ನು ಸಾರಿದವು.</p>.<p>ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿರುವ ಮೂವತ್ತೆರಡು ಕೋಟಿ ರೂಪಾಯಿ ವೆಚ್ಚದ ಪ್ರಥಮ ಹಂತವು ಎಂಬತ್ತು ಕೋಟಿ ಯುನಿಟ್ ಅನ್ನು ಉತ್ಪಾದಿಸಿ, ರಾಜ್ಯದಲ್ಲಿ ಆಗತಾನೇ ಉಲ್ಬಣವಾಗತೊಡಗುವ ವಿದ್ಯುತ್ ಕ್ಷಾಮಕ್ಕೆ ಶಮನ ನೀಡುವುದು.</p>.<p><strong>ಶಕ್ತಿ ಬೆಳಕಿನ ಆಗರ<br />ಹುಬ್ಬಳ್ಳಿ, ಮೇ 9–</strong> ಒಂದು ಹಿಡಿ ಸಿಡಿಮದ್ದಿನ ಸ್ಫೋಟನದೊಂದಿಗೆ, ಕಾಲಗರ್ಭದಲ್ಲಿ ಜಡ ನಿದ್ದೆಯಲ್ಲಿದ್ದ ಬೊಮ್ಮೇನಹಳ್ಳಿ ಆಧುನಿಕ ಯುಗಕ್ಕೆ ಚಿಮ್ಮಿತು.</p>.<p>ಕಾಡನ್ನು ಒಂದು ಕ್ಷಣದಲ್ಲಿ ಕಂಪಿಸಿ ಮೂರು ಮಾರುಗಳೆತ್ತರಕ್ಕೆ ಚಿಮ್ಮಿಸಿದ ಈ ಗುಡುಗು ಕಾಳಿ ನದಿಯನ್ನು ಶಕ್ತಿ ಬೆಳಕಿನ ಆಗರವಾಗಿ ಪರಿವರ್ತಿಸುವಲ್ಲಿ ಸಾಂಕೇತಿಕ ಪಾತ್ರ ವಹಿಸಿತು.</p>.<p>ಎಲ್ಲೋ ಅಲ್ಲಲ್ಲಿ ಕುಳಿತು ನೋಡುತ್ತಿದ್ದ ಪಕ್ಷಿಗಳು ಹಾರಿ ಹೋದ ನೋಟ ಸ್ಮರಣೀಯ. ಇನ್ನು ಮುಂದೆ ಈ ಸ್ಥಳ ಆ ಪಕ್ಷಿ ಪ್ರಾಣಿಗಳಿಗೆ ಸುರಕ್ಷಿತ ನೆಲೆಯಲ್ಲ. ಜನ ಬರುತ್ತಾರೆ, ಯಂತ್ರ ತರುತ್ತಾರೆ. ಅಣೆಕಟ್ಟಿನ ಅಣೆ ಏರಿಸಿ ಊರು ಬೆಳೆಸುತ್ತಾರೆ.</p>.<p>ದೊಡ್ಡ ಯೋಜನೆಗಳು, ಮುಖ್ಯವಾಗಿ ಜಲ ವಿದ್ಯುತ್ ಯೋಜನೆಗಳು ಏಳುವ ಸ್ಥಳಗಳಲ್ಲೆಲ್ಲಾ ಇದು ಅನಿವಾರ್ಯ. ಶರಾವತಿಯಲ್ಲಿ ಆಗಿತ್ತು, ಕಾಳಿಯಲ್ಲೂ ಆಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಿ ನದಿ ಯೋಜನೆ ಪ್ರಥಮ ಹಂತ ನಿರ್ಮಾಣ ಘಟ್ಟಕ್ಕೆ<br />ಹುಬ್ಬಳ್ಳಿ, ಮೇ 9–</strong> ದಕ್ಷಿಣದ ವಿದ್ಯುತ್ ಕ್ಷಾಮಕ್ಕೆ ಸಂಜೀವಿನಿ ಎನಿಸಲಿರುವ ರಾಷ್ಟ್ರದ ಅತ್ಯಂತ ದೊಡ್ಡ ಜಲವಿದ್ಯುತ್ ಉತ್ಪಾದನಾ ಜಾಲ, 120 ಕೋಟಿ ರೂಪಾಯಿ ವೆಚ್ಚದ ಕಾಳಿ ನದಿ ಯೋಜನೆಯ ಪ್ರಥಮ ಹಂತ ಇಂದು ಬೆಳಿಗ್ಗೆ ವಿಧ್ಯುಕ್ತವಾಗಿ ನಿರ್ಮಾಣಘಟ್ಟ ಮುಟ್ಟಿತು.</p>.<p>ಇಲ್ಲಿಂದ 50 ಮೈಲಿ ದೂರದಲ್ಲಿರುವ ಪಶ್ಚಿಮಘಟ್ಟದ ಶಿಖರದ ತೇಗ–ಬೀಟೆಗಳ ಅರಣ್ಯಮಧ್ಯದ ಬೊಮ್ಮೇನಹಳ್ಳಿಯಲ್ಲಿ<br />ರಾಜ್ಯಪಾಲರು ಗುಂಡಿ ಒತ್ತಿದಾಗ, ನದಿಗರ್ಭದಿಂದ ಸಿಡಿದು ಒಡೆದ ಬಂಡೆಗಳು ಕಾಡಿನಲ್ಲಿ ಪ್ರತಿಧ್ವನಿಸಿ<br />ಶಂಕುಸ್ಥಾಪನೆಯನ್ನು ಸಾರಿದವು.</p>.<p>ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿರುವ ಮೂವತ್ತೆರಡು ಕೋಟಿ ರೂಪಾಯಿ ವೆಚ್ಚದ ಪ್ರಥಮ ಹಂತವು ಎಂಬತ್ತು ಕೋಟಿ ಯುನಿಟ್ ಅನ್ನು ಉತ್ಪಾದಿಸಿ, ರಾಜ್ಯದಲ್ಲಿ ಆಗತಾನೇ ಉಲ್ಬಣವಾಗತೊಡಗುವ ವಿದ್ಯುತ್ ಕ್ಷಾಮಕ್ಕೆ ಶಮನ ನೀಡುವುದು.</p>.<p><strong>ಶಕ್ತಿ ಬೆಳಕಿನ ಆಗರ<br />ಹುಬ್ಬಳ್ಳಿ, ಮೇ 9–</strong> ಒಂದು ಹಿಡಿ ಸಿಡಿಮದ್ದಿನ ಸ್ಫೋಟನದೊಂದಿಗೆ, ಕಾಲಗರ್ಭದಲ್ಲಿ ಜಡ ನಿದ್ದೆಯಲ್ಲಿದ್ದ ಬೊಮ್ಮೇನಹಳ್ಳಿ ಆಧುನಿಕ ಯುಗಕ್ಕೆ ಚಿಮ್ಮಿತು.</p>.<p>ಕಾಡನ್ನು ಒಂದು ಕ್ಷಣದಲ್ಲಿ ಕಂಪಿಸಿ ಮೂರು ಮಾರುಗಳೆತ್ತರಕ್ಕೆ ಚಿಮ್ಮಿಸಿದ ಈ ಗುಡುಗು ಕಾಳಿ ನದಿಯನ್ನು ಶಕ್ತಿ ಬೆಳಕಿನ ಆಗರವಾಗಿ ಪರಿವರ್ತಿಸುವಲ್ಲಿ ಸಾಂಕೇತಿಕ ಪಾತ್ರ ವಹಿಸಿತು.</p>.<p>ಎಲ್ಲೋ ಅಲ್ಲಲ್ಲಿ ಕುಳಿತು ನೋಡುತ್ತಿದ್ದ ಪಕ್ಷಿಗಳು ಹಾರಿ ಹೋದ ನೋಟ ಸ್ಮರಣೀಯ. ಇನ್ನು ಮುಂದೆ ಈ ಸ್ಥಳ ಆ ಪಕ್ಷಿ ಪ್ರಾಣಿಗಳಿಗೆ ಸುರಕ್ಷಿತ ನೆಲೆಯಲ್ಲ. ಜನ ಬರುತ್ತಾರೆ, ಯಂತ್ರ ತರುತ್ತಾರೆ. ಅಣೆಕಟ್ಟಿನ ಅಣೆ ಏರಿಸಿ ಊರು ಬೆಳೆಸುತ್ತಾರೆ.</p>.<p>ದೊಡ್ಡ ಯೋಜನೆಗಳು, ಮುಖ್ಯವಾಗಿ ಜಲ ವಿದ್ಯುತ್ ಯೋಜನೆಗಳು ಏಳುವ ಸ್ಥಳಗಳಲ್ಲೆಲ್ಲಾ ಇದು ಅನಿವಾರ್ಯ. ಶರಾವತಿಯಲ್ಲಿ ಆಗಿತ್ತು, ಕಾಳಿಯಲ್ಲೂ ಆಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>