<p><strong>ಮಹಾಜನ್ ಶಿಫಾರಸು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಕರೆ<br />ಬೆಂಗಳೂರು, ಡಿ. 28–</strong> ಕೇಂದ್ರ ಸರ್ಕಾರ ಈಗಲಾದರೂ ‘ತಪ್ಪು ತಿದ್ದಿಕೊಂಡು’ ಮಹಾಜನ್ ಆಯೋಗದ ಶಿಫಾರಸುಗಳನ್ನೊಳಗೊಂಡ ವಿಧೇಯಕವನ್ನು ತಂದು ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಶಿಕ್ಷಣ ಸಚಿವರೂ ಸಭಾ ನಾಯಕರೂ ಆದ ಶ್ರೀ ಕೆ.ವಿ.ಶಂಕರಗೌಡರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p>.<p>ಶನಿವಾರ ಅರ್ಥ ಸಚಿವ ಶ್ರೀರಾಮಕೃಷ್ಣ ಹೆಗಡೆಯವರು ಮಂಡಿಸಿದ ಪ್ರಸ್ತಾಪದ ಮೇಲಿನ ಚರ್ಚೆಗೆ ಉತ್ತರ ನೀಡಿದ ಶ್ರೀ ಶಂಕರಗೌಡರು, ಗಡಿ ಆಯೋಗಗಳ ಶಿಫಾರಸುಗಳ ಸಂಬಂಧದಲ್ಲಿ ಕೇಂದ್ರ ಸರ್ಕಾರ ‘ಒಂದೊಂದು ರಾಜ್ಯಕ್ಕೆ ಒಂದೊಂದು ಅಳತೆಗೋಲು ಉಪಯೋಗಿಸುತ್ತಿರುವುದಕ್ಕಾಗಿ’ ವಿಷಾದಿಸಿದರು.</p>.<p>ಸಚಿವರ ಉತ್ತರದ ನಂತರ ಸಭೆಯು ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿತು.</p>.<p><strong>ಆಕಾಶವಾಣಿಯಲ್ಲಿ ಪಕ್ಷಗಳಿಗೆ ಪ್ರಚಾರಾವಕಾಶ<br />ನವದೆಹಲಿ, ಡಿ. 28–</strong> ಆಕಾಶವಾಣಿಯಲ್ಲಿ ಚುನಾವಣಾ ಪ್ರಚಾರ ಮಾಡುವುದಕ್ಕೆ ದೊರೆಯುವ ಕಾಲಾವಕಾಶ ಕುರಿತು ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ.</p>.<p>ತಲಾ ಹತ್ತು ನಿಮಿಷಗಳ ಅವಧಿಯ ನಾಲ್ಕು ಬಾರಿ ಪ್ರಸಾರಕ್ಕೆ ಪ್ರತಿಯೊಂದು ಪಕ್ಷಕ್ಕೂ ಅನುಮತಿ ಕೊಡಲಾಗುವುದೆಂದು ಸೂಚಿಸಲಾಗಿದೆ.</p>.<p>ಆಯೋಗದ ಈ ಸಲಹೆಗೆ ಸಂಸ್ಥಾ ಕಾಂಗ್ರೆಸ್ ಮಾತ್ರ ಉತ್ತರ ಬರೆದಿದೆ. ಅಲ್ಲದೆ ಅದು ಈ ಸಲಹೆಯನ್ನು ತತ್ವಶಃ ಒಪ್ಪಿಕೊಂಡಿದ್ದರೂ ಕೆಲವು ಸ್ಪಷ್ಟೀಕರಣಗಳನ್ನು ಕೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಜನ್ ಶಿಫಾರಸು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಕರೆ<br />ಬೆಂಗಳೂರು, ಡಿ. 28–</strong> ಕೇಂದ್ರ ಸರ್ಕಾರ ಈಗಲಾದರೂ ‘ತಪ್ಪು ತಿದ್ದಿಕೊಂಡು’ ಮಹಾಜನ್ ಆಯೋಗದ ಶಿಫಾರಸುಗಳನ್ನೊಳಗೊಂಡ ವಿಧೇಯಕವನ್ನು ತಂದು ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಶಿಕ್ಷಣ ಸಚಿವರೂ ಸಭಾ ನಾಯಕರೂ ಆದ ಶ್ರೀ ಕೆ.ವಿ.ಶಂಕರಗೌಡರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p>.<p>ಶನಿವಾರ ಅರ್ಥ ಸಚಿವ ಶ್ರೀರಾಮಕೃಷ್ಣ ಹೆಗಡೆಯವರು ಮಂಡಿಸಿದ ಪ್ರಸ್ತಾಪದ ಮೇಲಿನ ಚರ್ಚೆಗೆ ಉತ್ತರ ನೀಡಿದ ಶ್ರೀ ಶಂಕರಗೌಡರು, ಗಡಿ ಆಯೋಗಗಳ ಶಿಫಾರಸುಗಳ ಸಂಬಂಧದಲ್ಲಿ ಕೇಂದ್ರ ಸರ್ಕಾರ ‘ಒಂದೊಂದು ರಾಜ್ಯಕ್ಕೆ ಒಂದೊಂದು ಅಳತೆಗೋಲು ಉಪಯೋಗಿಸುತ್ತಿರುವುದಕ್ಕಾಗಿ’ ವಿಷಾದಿಸಿದರು.</p>.<p>ಸಚಿವರ ಉತ್ತರದ ನಂತರ ಸಭೆಯು ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿತು.</p>.<p><strong>ಆಕಾಶವಾಣಿಯಲ್ಲಿ ಪಕ್ಷಗಳಿಗೆ ಪ್ರಚಾರಾವಕಾಶ<br />ನವದೆಹಲಿ, ಡಿ. 28–</strong> ಆಕಾಶವಾಣಿಯಲ್ಲಿ ಚುನಾವಣಾ ಪ್ರಚಾರ ಮಾಡುವುದಕ್ಕೆ ದೊರೆಯುವ ಕಾಲಾವಕಾಶ ಕುರಿತು ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ.</p>.<p>ತಲಾ ಹತ್ತು ನಿಮಿಷಗಳ ಅವಧಿಯ ನಾಲ್ಕು ಬಾರಿ ಪ್ರಸಾರಕ್ಕೆ ಪ್ರತಿಯೊಂದು ಪಕ್ಷಕ್ಕೂ ಅನುಮತಿ ಕೊಡಲಾಗುವುದೆಂದು ಸೂಚಿಸಲಾಗಿದೆ.</p>.<p>ಆಯೋಗದ ಈ ಸಲಹೆಗೆ ಸಂಸ್ಥಾ ಕಾಂಗ್ರೆಸ್ ಮಾತ್ರ ಉತ್ತರ ಬರೆದಿದೆ. ಅಲ್ಲದೆ ಅದು ಈ ಸಲಹೆಯನ್ನು ತತ್ವಶಃ ಒಪ್ಪಿಕೊಂಡಿದ್ದರೂ ಕೆಲವು ಸ್ಪಷ್ಟೀಕರಣಗಳನ್ನು ಕೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>