ನವದೆಹಲಿ, ಸೆಪ್ಟೆಂಬರ್ 3– ಅಂತರರಾಷ್ಟ್ರೀಯ ಒಪ್ಪಂದಗಳಿಂದ ಭಾರತ ಹಿಂದಕ್ಕೆ ಸರಿಯುತ್ತದೆ ಎಂದು ಭುಟ್ಟೋ ಆಪಾದಿಸಿದರು.
ಸಯಾಲ್ಕೋಟ್ ಮತ್ತು ಸಿಂಧ್ಗಳಲ್ಲಿ ವಶಪಡಿಸಿಕೊಂಡಿರುವ ಪ್ರದೇಶಗಳನ್ನು ಭಾರತ ತೆರವು ಮಾಡಬೇಕೆಂದು ಸಿಮ್ಲಾ ಒಪ್ಪಂದದಲ್ಲಿ ತಿಳಿಸಲಾಗಿದೆ. ಡಿಸೆಂಬರ್ 17ರಂದು ಉಭಯ ರಾಷ್ಟ್ರಗಳ ಪಡೆಗಳು ಎಲ್ಲಿದ್ದವೋ ಅಲ್ಲಿ ಕಾಶ್ಮೀರದಲ್ಲಿ ಹತೋಟಿ ರೇಖೆ ಇರುತ್ತದೆ ಎಂದು ಭುಟ್ಟೋ ಅವರು ತಿಳಿಸಿದರು.