ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಸೋಮವಾರ, 17-5-1971

Last Updated 16 ಮೇ 2021, 19:30 IST
ಅಕ್ಷರ ಗಾತ್ರ

ಪಕ್ಷಾಂತರ ಶಿಕ್ಷಾರ್ಹಗೊಳಿಸಿ ಸುಗ್ರೀವಾಜ್ಞೆ: ಎಸ್ಸೆನ್‌ ಬಯಕೆ

ಮುನ್ಷಿನಗರ, ಮೇ 16– ಪಕ್ಷಾಂತರವನ್ನು ಶಿಕ್ಷಾರ್ಹವೆಂದು ಘೋಷಿಸಬೇಕು- ಸಂಸ್ಥಾ ಕಾಂಗ್ರೆಸ್‌ ಅಧ್ಯಕ್ಷ ಪೀಠವನ್ನು ಇದೀಗ ತ್ಯಜಿಸಿರುವ ಎಸ್‌.ನಿಜಲಿಂಗಪ್ಪನವರ ಅಭಿಪ್ರಾಯವಿದು. ಇದಕ್ಕಾಗಿ ರಾಷ್ಟ್ರಪತಿ ಸುಗ್ರೀವಾಜ್ಞೆ ಹೊರಡಿಸಬೇಕೆಂಬುದೂ ಅವರ ಕಳಕಳಿ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಜಲಿಂಗಪ್ಪನವರು, ಪಕ್ಷಾಂತರವು ಚುನಾವಣೆಯ ಬಳಿಕ ಒಳ್ಳೆ ಸಂಪಾದನೆಯ ವಿಷಯವಾಗಿದೆಯೆಂದೂ ನುಡಿದರು.

ಸಾದಿಕ್‌ ಅಲೀ: ಸಂಸ್ಥಾ ಕಾಂಗ್ರೆಸ್‌ ‘ಹಂಗಾಮಿ’ ಅಧ್ಯಕ್ಷ

ಮುನ್ಷಿನಗರ, ಮೇ 16– ಸಂಸ್ಥಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಸಾದಿಕ್‌ ಅಲೀ ಅವರು ಇಂದು ಪಕ್ಷದ ‘ಹಂಗಾಮಿ’ ಅಧ್ಯಕ್ಷ
ರಾಗಿ ಸರ್ವಾನುಮತದಿಂದ ಚುನಾಯಿತರಾದರು. ನಿವೃತ್ತರಾದ ಅಧ್ಯಕ್ಷ ನಿಜಲಿಂಗಪ್ಪನವರ ಈ ನಾಮಕರಣವನ್ನು ಎಐಸಿಸಿ ಒಪ್ಪಿಕೊಂಡು, ಹೊಸ ಅಧ್ಯಕ್ಷರ ಆಯ್ಕೆ ಸಂಬಂಧದಲ್ಲಿ ತಲೆದೋರಿದ್ದ ಬೃಹತ್‌ ತೊಡಕನ್ನು ದಾಟಲು ದಾರಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT