<p>ನವದೆಹಲಿ, ಡಿ. 5– ಆಮದು ಲೈಸೆನ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಮಂಡಲಿ ಸಲ್ಲಿಸಿರುವ ವರದಿಯನ್ನು ಸಂಸತ್ನ ಉಭಯ ಸದನಗಳ ಅಧ್ಯಕ್ಷರ ಸಮ್ಮುಖದಲ್ಲಿ ವಿರೋಧಿ ನಾಯಕರಿಗೆ ತೋರಿಸಲು ಕೇಂದ್ರ ಸಂಪುಟ ಇಂದು ನಿರ್ಧರಿಸಿತು.</p><p>ಆದರೆ, ವರದಿಯ ವಿವರಗಳನ್ನು ತಿಳಿಯಲು ವಿರೋಧಿ ನಾಯಕರು ರಹಸ್ಯ ಪಾಲನೆ ಪ್ರತಿಜ್ಞೆ ಕೈಗೊಳ್ಳಬೇಕೆಂದು ಸರ್ಕಾರ ಷರತ್ತು ಹಾಕಿದೆ.</p><p>ಸರ್ಕಾರದ ಈ ಸಲಹೆಯನ್ನು ಪರಿಶೀಲಿಸಲು ವಿರೋಧ ಪಕ್ಷಗಳ ನಾಯಕರು ಕಾಲಾವಕಾಶ ಕೇಳಿದ್ದಾರೆ.</p><p>ಬುದ್ಧಿಜೀವಿಗಳ ಜತೆ ಹೆಚ್ಚು ನಿಕಟ ಸಂಬಂಧ: ಕಾಂಗ್ರೆಸ್ಸಿನ ಬಯಕೆ</p><p>ಬೆಂಗಳೂರು, ಡಿ. 5– ಬುದ್ಧಿಜೀವಿಗಳಿಂದ ‘ಈವರೆಗೆ ದೂರವಿದ್ದ’ ಕಾಂಗ್ರೆಸ್ ಪಕ್ಷವು ಅವರೊಡನೆ ಹೆಚ್ಚು ಹೆಚ್ಚು ನಿಕಟ ಸಂಬಂಧ ಹೊಂದಲು ಬಯಸಿದೆ.</p><p>ದೊಡ್ಡಬಳ್ಳಾಪುರ ಶಿಬಿರದಿಂದ ಹೊರಹೊಮ್ಮಿದ ಅಂಶಗಳಲ್ಲಿ ಇದೊಂದು.</p><p>ವಕೀಲರು, ಶಿಕ್ಷಕರು, ವೈದ್ಯರು, ವಿಜ್ಞಾನಿ ಗಳ ವೇದಿಕೆಗಳನ್ನು ಹೊಂದಲು ಆಲೋಚಿಸುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಶ್ರೀ ಕೆ.ಎಚ್. ಪಾಟೀಲರು ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ, ಡಿ. 5– ಆಮದು ಲೈಸೆನ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಮಂಡಲಿ ಸಲ್ಲಿಸಿರುವ ವರದಿಯನ್ನು ಸಂಸತ್ನ ಉಭಯ ಸದನಗಳ ಅಧ್ಯಕ್ಷರ ಸಮ್ಮುಖದಲ್ಲಿ ವಿರೋಧಿ ನಾಯಕರಿಗೆ ತೋರಿಸಲು ಕೇಂದ್ರ ಸಂಪುಟ ಇಂದು ನಿರ್ಧರಿಸಿತು.</p><p>ಆದರೆ, ವರದಿಯ ವಿವರಗಳನ್ನು ತಿಳಿಯಲು ವಿರೋಧಿ ನಾಯಕರು ರಹಸ್ಯ ಪಾಲನೆ ಪ್ರತಿಜ್ಞೆ ಕೈಗೊಳ್ಳಬೇಕೆಂದು ಸರ್ಕಾರ ಷರತ್ತು ಹಾಕಿದೆ.</p><p>ಸರ್ಕಾರದ ಈ ಸಲಹೆಯನ್ನು ಪರಿಶೀಲಿಸಲು ವಿರೋಧ ಪಕ್ಷಗಳ ನಾಯಕರು ಕಾಲಾವಕಾಶ ಕೇಳಿದ್ದಾರೆ.</p><p>ಬುದ್ಧಿಜೀವಿಗಳ ಜತೆ ಹೆಚ್ಚು ನಿಕಟ ಸಂಬಂಧ: ಕಾಂಗ್ರೆಸ್ಸಿನ ಬಯಕೆ</p><p>ಬೆಂಗಳೂರು, ಡಿ. 5– ಬುದ್ಧಿಜೀವಿಗಳಿಂದ ‘ಈವರೆಗೆ ದೂರವಿದ್ದ’ ಕಾಂಗ್ರೆಸ್ ಪಕ್ಷವು ಅವರೊಡನೆ ಹೆಚ್ಚು ಹೆಚ್ಚು ನಿಕಟ ಸಂಬಂಧ ಹೊಂದಲು ಬಯಸಿದೆ.</p><p>ದೊಡ್ಡಬಳ್ಳಾಪುರ ಶಿಬಿರದಿಂದ ಹೊರಹೊಮ್ಮಿದ ಅಂಶಗಳಲ್ಲಿ ಇದೊಂದು.</p><p>ವಕೀಲರು, ಶಿಕ್ಷಕರು, ವೈದ್ಯರು, ವಿಜ್ಞಾನಿ ಗಳ ವೇದಿಕೆಗಳನ್ನು ಹೊಂದಲು ಆಲೋಚಿಸುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಶ್ರೀ ಕೆ.ಎಚ್. ಪಾಟೀಲರು ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>